i
ಚಿತ್ರದುರ್ಗ ನ್ಯಾಯಾಲಯಕ್ಕೆ ಮೂರು ನ್ಯಾಯಾದೀಶರುಗಳ ಆಗಮನ….
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನ್ಯಾಯಾಲಯಕ್ಕೆ ನೂತನವಾಗಿ ವರ್ಗಾವಣೆಯಾಗಿ ಬಂದಿರುವ ಮೂರು ನ್ಯಾಯಾಧೀಶರುಗಳಿಗೆ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘ ವಕೀಲರ ಭವನದಲ್ಲಿ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನೂತನವಾಗಿ ವರ್ಗಾವಣೆಯಾಗಿ ಬಂದ ನ್ಯಾಯಾಧೀಶರುಗಳಾದ ಪ್ರಧಾನ ಸಿವಿಲ್ ಮತ್ತು ಜೆ. ಎಂ. ಎಫ್. ಸಿ ನ್ಯಾಯಾದೀಶರಾದ ಗೀತಾ ಕುಂಬಾರ್,
ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚೈತ್ರಾ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಜಯ್. ಎಂ ಮಾರಪ್ಪ ಇವರುಗಳಿಗೆ ವಕೀಲರ ಸಂಘದ ಅಧ್ಯಕ್ಷ ಸಿ.ಶಿವುಯಾದವ್, ಉಪಾಧ್ಯಕ್ಷ ದಯಾನಂದ ಜಿ ಸಿ, ಖಜಾಂಚಿ ಅಜ್ಜಯ್ಯ, ಸಂಘದ ಪದಾಧಿಕಾರಿಗಳು ಪುಷ್ಪ ಗುಚ್ಚಿ ನೀಡುವುದರ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.
ನೂತನವಾಗಿ ಆಗಮಿಸಿದ ನ್ಯಾಯಾಧೀಶರುಗಳನ್ನು ಸ್ವಾಗತಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸಿ ಶಿವುಯಾದವ್, ಚಿತ್ರದುರ್ಗ ನ್ಯಾಯಾಲಯಕ್ಕೆ ಒಂದು ವಿಶೇಷ ಸ್ಥಾನಮಾನವಿದೆ. ಇಲ್ಲಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ ಬಹುತೇಕ ನ್ಯಾಯಾಧೀಶರು ಉಚ್ಚ ನ್ಯಾಯಾಲಯದ ನ್ಯಾಯಾಮೂರ್ತಿಗಳಾಗಿ ಬಡ್ತಿ ಹೊಂದಿ ವರ್ಗಾವಣೆ ಹೊಂದಿದ್ದಾರೆ. ನೂತನವಾಗಿ ಬಂದ ನ್ಯಾಯಾಧೀಶರಿಗೆ ಆತ್ಮೀಯವಾಗಿ ಸ್ವಾಗತಿಸುವುದು ಮತ್ತು ವರ್ಗಾವಣೆಯಾಗಿ ಬೇರೆ ಕಡೆ ಹೋದ ನ್ಯಾಯಾಧೀಶರಿಗೆ ಪ್ರೀತಿಯಿಂದ ಬಿಳ್ಕೋಡಿಗೆ ನೀಡುವುದು ನಮ್ಮ ಸಂಘದ ಸಂಪ್ರದಾಯ. ವಕೀಲರು ಮತ್ತು ನ್ಯಾಯಾಧೀಶರು ಬಂಡಿಯ ಎರಡು ಚಕ್ರ ಇದ್ದಂತೆ ಎರಡೂ ಚಕ್ರಗಳು ಒಂದಕ್ಕೊಂದು ಸಂಪೂರ್ಣ ಸಹಕಾರ ನೀಡ ಬೇಕಾಗುತ್ತದೆ. ಇಲ್ಲದೆ ಹೋದರೆ ಬಂಡಿ ಮುಂದೆ ಸಾಗುವುದಿಲ್ಲ. ವಕೀಲರ ಸಂಘವು ನ್ಯಾಯಾಧೀಶರಿಗೆ ತ್ವರಿತ ನ್ಯಾಯ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತದೆ. ತಾವುಗಳು ಸಹ ಸಂಘದ ಸದಸ್ಯರಿಗೆ ಮತ್ತು ವಕೀಲರಿಗೆ ನ್ಯಾಯ ವಿತರಣೆಯಲ್ಲಿ ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರೇಮಾವತಿ ಮನಗೂಳಿ ಮಾತನಾಡಿ, ಚಿತ್ರದುರ್ಗ ಜಿಲ್ಲಾ ವಕೀಲರ ಸಂಘವು ಶಿಸ್ತು ಮತ್ತು ಶಾಂತಿ ಸೌಹಾರ್ದತೆ ಮತ್ತು ಸಹಕಾರಕ್ಕೆ ಹೆಸರಾಗಿದೆ. ಈ ಬಾರ್ ನಲ್ಲಿ ಕೆಲಸ ಮಾಡುವುದು ಒಂದು ಹೆಮ್ಮೆಯ ವಿಷಯ ಇಲ್ಲಿನ ವಕೀಲರು ನ್ಯಾಯಾಂಗಕ್ಕೆ ತುಂಬಾ ಸಹಕಾರ ಮತ್ತು ಗೌರವ ನೀಡುತ್ತಾರೆ. ನಾವು ಸಹ ಅವರೊಂದಿಗೆ ನ್ಯಾಯ ವಿತರಣಾ ವ್ಯವಸ್ಥೆಗಳಲ್ಲಿ ಪರಸ್ಪರ ಸಹಕಾರ ನೀಡಿ ಕಕ್ಷಿದಾರನಿಗೆ ಆದಷ್ಟುಬೇಗ ನ್ಯಾಯ ವಿತರಣೆ ಮಾಡಿ ಸಹಕರಿಸೋಣ, ವಕೀಲರು ಮತ್ತು ನ್ಯಾಯಾಧೀಶರು ನ್ಯಾಯಧಾನ ವ್ಯವಸ್ಥೆಯಲ್ಲಿ ಒಟ್ಟೊಟ್ಟಿಗೆ ಸಹಕಾರದಿಂದ ಮುನ್ನಡೆಯೋಣ ಎಂದರು.
ಕಾರ್ಯಕ್ರಮದಲ್ಲಿ 1ನೇ ಹೆಚ್ಚವರಿ ಜಿಲ್ಲಾ ನ್ಯಾಯಾಧೀಶರಾದ ಶಂಕ್ರಪ್ಪ ನಿಂಬಣ್ಣ ಕಲ್ಕಣಿ, 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಕೋಮಲ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆಂಪರಾಜು, ಪ್ರಧಾನ ಸಿವಿಲ್ ಮತ್ತು JMFC ನ್ಯಾಯಾಧೀಶರಾದ ನೇಮಿಚಂದ್ರ, ಇತರೆ ಎಲ್ಲಾ ನ್ಯಾಯಾಧೀಶರು ಮತ್ತು ವಕೀಲರ ಸಂಘದ ಉಪಾಧ್ಯಕ್ಷ ಜಿ ಸಿ ದಯಾನಂದ ಪ್ರಧಾನ ಕಾರ್ಯದರ್ಶಿ ಎಂ. ಮೂರ್ತಿ, ಖಜಾಂಚಿ ಅಜ್ಜಯ್ಯ, ಸಹ ಕಾರ್ಯದರ್ಶಿ ವಿಶ್ವನಾಥ ರೆಡ್ಡಿ, ಸಂಘದ ಪದಾಧಿಕಾರಿಗಳು, ಹಿರಿಯ ಮತ್ತು ಕಿರಿಯ ವಕೀಲರುಗಳು, ಮಹಿಳಾ ವಕೀಲರು ಭಾಗವಹಿಸಿದ್ದರು.