i
ಕರ್ತವ್ಯ ಲೋಪ, ಮೂರು ಮಂದಿ ಪೊಲೀಸ್ ಅಧಿಕಾರಿಗಳು ಅಮಾನತು…
ಚಂದ್ರವಳ್ಳಿ ನ್ಯೂಸ್, ಹೊಸಪೇಟೆ:
ಕರ್ತವ್ಯ ಲೋಪವೆಸಗಿರುವ ಆರೋಪದ ಮೇಲೆ ಹೊಸಪೇಟೆ ನಗರ ಠಾಣೆಯ ಎಎಸ್ಐ ಸೇರಿ ಮೂವರು ಪೊಲೀಸರನ್ನು ವಿಜಯನಗರ ಜಿಲ್ಲಾ ಎಸ್ಪಿ ಶ್ರೀಹರಿಬಾಬು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಹೊಸಪೇಟೆ ನಗರ ಠಾಣೆಯ ಎಎಸ್ಐ ಕೋದಂಡಪಾಣಿ, ಮುಖ್ಯಪೇದೆ ನಾಗರಾಜ, ಪೇದೆ ಗುರುಬಸವರಾಜ ಎನ್ನುವ ಮೂರು ಮಂದಿ ಅಮಾತುಗೊಂಡ ಪೊಲೀಸ್ ಸಿಬ್ಬಂದಿಗಳು.
ನಗರ ಠಾಣೆ ಪೊಲೀಸ್ ಅಧಿಕಾರಿ ಬಾಳನಗೌಡರ ವಿರುದ್ಧವೂ ಇಲಾಖೆ ವಿಚಾರಣೆಗಾಗಿ ಮೇಲಾಧಿಕಾರಿಗಳಿಗೆ ವರದಿ ರವಾನಿಸಲಾಗಿದ್ದು ಶಿಸ್ತುಕ್ರಮದ ತೂಗುಗತ್ತಿ ಅವರ ಮೇಲೂ ನೇತಾಡುತ್ತಿದೆ ಎಂದು ತಿಳಿದು ಬಂದಿದೆ.
ಪ್ರಕರಣವೊಂದರ ನಿರ್ವಹಣೆಯಲ್ಲಿ ಕರ್ತವ್ಯಲೋಪವೆಸಗಿರುವುದು ಕಂಡುಬಂದ ಹಿನ್ನೆಲೆ ಹೊಸಪೇಟೆಯ ನಗರ ಠಾಣೆಯ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ವಿಜಯನಗರ ಎಸ್ಪಿ ಶ್ರೀಹರಿಬಾಬು ತಿಳಿಸಿದ್ದಾರೆ.