i
ಕೇಂದ್ರ ಸರ್ಕಾರದ ಹಲವು ಯೋಜನೆಗಳು ತುಮಕೂರು ಜಿಲ್ಲೆಗೆ ವರದಾನವಾಗಿದೆ-ಸಂಸದ ಜಿ.ಎಸ್.ಬಿ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಹಲವು ಯೋಜನೆಗಳು ತುಮಕೂರು ಜಿಲ್ಲೆಗೆ ವರದಾನವಾಗಿದೆ ಎಂದು ತುಮಕೂರು ಲೋಕಸಭಾ ಸದಸ್ಯ ಜಿ ಎಸ್ ಬಸವರಾಜು ಹೇಳಿದರು.
ತುಮಕೂರು ಬಿಜೆಪಿ ಕಚೇರಿಯಲ್ಲಿ ಅವರು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ತುಮಕೂರು ಲೋಕಸಭಾ ಕ್ಷೇತ್ರದ ವಿವಿಧ ಯೋಜನೆಗಳ ಅಭಿವೃದ್ಧಿಯ ಪಥ ಹಾಗೂ ಶಂಕುಸ್ಥಾಪನೆ ಕಾಮಗಾರಿಗಳ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಿದೆ. ಇದರಿಂದ ನೀರಾವರಿ ಯೋಜನೆಗೆ ಸಾಕಷ್ಟು ಅನುದಾನ ದೊರೆಯಲಿದೆ. ಅದೇ ರಪೀತಿ ಕೃಷಿ ತೋಟಗಾರಿಕೆ ಕೈಗಾರಿಕೆ ಕಾರಿಡಾರ್ ಗಳಿಂದ ಸಾಕಷ್ಟು ಉದ್ಯೋಗ ದೊರೆಯುತ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯದಲ್ಲಿನ ತುಮಕೂರು ಇಂಡಸ್ಟ್ರಿಯಲ್ ಸಿಸ್ಟಂನಿಂದ ಜಿಲ್ಲೆಯ ಕೈಗಾರಿಕೆ ಅಭಿವೃದ್ಧಿಗೆ ಆಗಿದ್ದು ಇದು ತುಮಕೂರು ಜಿಲ್ಲೆಗೆ ವರದಾನ ಎಂದು ತಿಳಿಸಿದರು.
ಬೆಂಗಳೂರು ಮುಂಬೈ ಎಕಾನಮಿಕ್ಸ್ ಬಾಹ್ಯಾಕಾಶ ಸಚಿವಾಲಯದ ಯೋಜನೆಗೆ ಪ್ರಸ್ತಾವನೆಗಳು ಮತ್ತು ಪ್ರಯತ್ನ ಮಾಡಲಾಗಿದೆ.
ತುಮಕೂರು ಮದುಗಿರಿ ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯನ್ನು 2024-25ರೊಳಗೆ ಪೂರ್ಣಗೊಳಿಸಲು ಗುರಿ ನೀಡಲಾಗಿದೆ. ಈ ಯೋಜನೆಗೆ 250 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು. ತುಮಕೂರು ಶಿರಾ ಚಿತ್ರದುರ್ಗ ದಾವಣಗೆರೆ 1999.70 ಕಿಲೋಮೀಟರ್ ಉದ್ದದ 2023-24 ನೇ ಸಾಲಿನ ಕೇಂದ್ರದ ಮುಂಗಡಪತ್ರದಲ್ಲಿ ಈ ಯೋಜನೆಗೆ 300 ಕೋಟಿ ರೂ. ಅನುದಾನ ಮೀಸಲಿಡಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಸಂಸತ್ ಆದರ್ಶ ಗ್ರಾಮ ಯೋಜನೆ ಗ್ರಾಮೀಣ ಯೋಜನೆಗಳಲ್ಲಿ ಬಳಸಲು ಅವಕಾಶ ಇರುವುದರಿಂದ ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರವಾರು ಒಂದು ಗ್ರಾಮ ಪಂಚಾಯಿತಿಯನ್ನು ಗುರುತಿಸಿ ಹಾರಿಸಿಕೊಳ್ಳಲಾಗಿದೆ. ನೂರು ಹಾಸಿಗೆಯ ಇಎಸ್ಐ ಆಸ್ಪತ್ರೆ ತುಮಕೂರು ನಗರದಲ್ಲಿ ಮಂಜೂರಾಗಿದೆ. ಪ್ರತಿಮನೆಗೆ ನಾಳದ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕೇಂದ್ರ ಸರ್ಕಾರದ ಮಹತ್ತರ ಯೋಜನೆ ಜಲಜೀವನ್ ಮಿಷನ್ ತುಮಕೂರು ಜಿಲ್ಲೆಯಲ್ಲಿ ನಾಲ್ಕು ಹಂತಗಳಲ್ಲಿ ಕಾರ್ಯ ಪ್ರಗತಿಯಲ್ಲಿದೆ. ಒಂದನೇ ಹಂತ 84 ಗ್ರಾಮಗಳು 27.75 ಕೋಟಿ, ಎರಡನೇ ಹಂತ 82 ಗ್ರಾಮಗಳು 33.27 ಕೋಟಿ ರೂಪಾಯಿ, ಮೂರನೇ ಹಂತ 1787 ಗ್ರಾಮಗಳು 1119.2 0 ಕೋಟಿ ರೂಪಾಯಿಗಳು, ನಾಲ್ಕನೇ ಹಂತ 1753 ಗ್ರಾಮಗಳು 1049.25 ಕೋಟಿ ರೂ.ಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಭಾರತೀಯ ಜನತಾ ಪಕ್ಷದ ಸ್ಫೂರ್ತಿ ಡೆವೆಲಪರ್ ಚಿದಾನಂದ್ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿದ್ದರು.