i
ನಡೆದಾಡುವ ದೇವರ ಸೇವಾ ಸಂಸ್ಥೆ ವಾರ್ಷಿಕೋತ್ಸವ ಸಾಧಕರಿಗೆ ಕಾಯಕರತ್ನ ಪ್ರಶಸ್ತಿ ಪುರಸ್ಕಾರ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಡೆದಾಡುವ ದೇವರ ಸೇವಾಟ್ರಸ್ಟ್ ೫ನೇ ವಾರ್ಷಿಕೋತ್ಸವ ಸಮಾರಂಭ ಜೂ.೪ ಭಾನುವಾರ ಬೆಳಿಗ್ಗೆ ೯ಗಂಟೆಗೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ನ ಶ್ರೀಕೃಷ್ಣರಜ ಮಂದಿರದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಸ್.ಮಂಜುನಾಥ್ ತಿಳಿಸಿದ್ದಾರೆ.
ನಡೆದಾಡಿದ ದೇವರು ಕರ್ನಾಟಕರತ್ನ ಲಿಂಗೈಕ್ಯ ಸಿದ್ದಗಂಗಾಶ್ರೀಗಳ ಪುಣ್ಯಸ್ಮರಣೆಯಲ್ಲಿ ಟ್ರಸ್ಟ್ ದಾಸೋಹ ಸೇರಿದಂತೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಶ್ರೀ ಸಿದ್ದಗಂಗಾಮಠದ ಪರಮಪೂಜ್ಯ ಶ್ರೀಸಿದ್ದಲಿಂಗಮಹಾಸ್ವಾಮೀಜಿಯವರ ಆಶೀರ್ವಾದದೊಂದಿಗೆ ನಡೆಸಿಕೊಂಡುಬರುತ್ತಿದ್ದು ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರಿಗೆ ಹಲವು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದ್ದಾರೆ.
ಗಾಣಾಗಾಪೂರ ಶ್ರೀದತ್ತಜ್ಞಾನ ಯೋಗಾಶ್ರಮದ ಪೂಜ್ಯ ಬಾಪೂಜಿಶ್ರೀಗಳು ಸಾನಿಧ್ಯವಹಿಸಲಿರುವ ಸಮಾರಂಭದಲ್ಲಿ ಶಾಸಕ ಉದಯ್ ಗರುಡಾಚಾರ್, ಮಾರುತಿ ಮೆಡಿಕಲ್ಸ್ ಮಾಲೀಕ ಮಹೇಂದ್ರ ಮುಣೋತ್ ಜೈನ್, ಕಲಾವಿದ ಜೂ.ವಿಷ್ಣುವರ್ಧನ್, ಸಾಮಾಜಿಕ ಕಾರ್ಯಕರ್ತ ಡಾ.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಶಿಕಾರಿಪುರದ ಶಾಸಕ ಬಿ.ವೈ.ವಿಜಯೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು ಚಾಮರಾಜಪೇಟೆ ಮಂಡಲ ಕಾರ್ಯದರ್ಶಿ ಬಿಜೆಪಿ ಮುಖಂಡ ಸುನೀಲ್ ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾಯಕಯೋಗಿ ಪ್ರಶಸ್ತಿ ಪುರಸ್ಕೃತರು:
ಲಿಂಗಾಯತ ಮಹಾಸಭಾ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮಂಜುನಾಥ್, ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಸಿದ್ದಗಂಗಾಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘದ ಬೀದರ್ ಅಧ್ಯಕ್ಷ ಶಿವಕುಮಾರ್ ಪಾಟೀಲ್ ತೇಗಂಪೂರ, ವಿಶ್ವನಾಥ್ ಜಾಗೀರ್ದಾರ್, ವಿದುಷಿ ಕೆ.ನಯನ, ಪ್ರವೀಳಾ ರಾಜೇಶ್, ಜೆ.ನಳಿನಿ, ನಂಜಮ್ಮ, ಎಂ.ಅವಿರಾಜ್, ಎ.ವಿಜಯಕುಮಾರ್ ಅವರಿಗೆ ಕಾಯಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಸುಜಾತ, ಗೀತಾ, ಎಂ.ಹರ್ಷವರ್ಧನ್, ಜಿ.ಕೆ.ರಾಜು ಅವರಿಗೆ ಶ್ರೀಬಸವಜ್ಯೋತಿ ಪ್ರಶಸ್ತಿ, ಡಾ.ಎಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಪಿ.ಕುಮಾರ್ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ಲಯನ್ ದೇವರಾಜು, ಜಯಮ್ಮ ಅವರಿಗೆ ಕೆಂಪೇಗೌಡ ಪ್ರಶಸ್ತಿ, ಸಯ್ಯದ್ ಜಿಲಾನಿ, ಮೊಹಮ್ಮದ್ ನೌಶಾದ್, ಬಿ.ವಿಷ್ಣುಮೂರ್ತಿ ಭಟ್ ಅವರಿಗೆ ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ ಹಾಗೂ ಡಾ.ಮ್ಯಾಕ್ಸಿಮ್ ಡಿಸೋಜಾ ಅವರಿಗೆ ಮದರ್ ಥೆರೆಸ್ಸಾ ಪ್ರಶಸ್ತಿ ನೀಡಲಾಗುತ್ತಿದೆ.
ಡಾ.ಶೀಲಾದೇವಿ ಎಸ್.ಮಳಿಮಠ, ಎಂ.ಹರಿಣಿ, ಸ್ವರ್ಣಲತಾ, ಉಮೇಶ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಸಾಧಕ ವಿದ್ಯಾರ್ಥಿನಿಯರಿಗೆ ಸಿದ್ದಗಂಗಾಸಿರಿ ಬಾಲಪ್ರತಿಭಾ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ.
ಮಂಗಳೂರಿನ ವಿದುಷಿ ಕೆ.ನಯನ ಅವರಿಗೆ ಭರತನಾಟ್ಯ ಕಾರ್ಯಕ್ರಮ ನಡೆಯಲಿದ್ದು ಕನ್ನಡ ಅಧ್ಯಾಪಕಿ ಸಿ.ಆರ್.ಕುಸುಮ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.