i
ರೈತರ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗುತ್ತದೆಯೇ?…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಪ್ರವಾಸಿ ಮಂದಿರದಲ್ಲಿ ನೆಡೆದ ರೈತ ಸಂಘದ ಮಾಸಿಕ ಸಭೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಕೆ.ಸಿ.ಹೊರಕೇರಪ್ಪನವರು ಪ್ರಸ್ತುತ ರೈತರಿಗೆ ಆಗುತ್ತಿರುವ ಅನ್ಯಾಯಗಳ ಕುರಿತು ಈ ಕೆಳಕಂಡಂತೆ ಹೇಳಿದರು.
ಕೇಂದ್ರ ಸರ್ಕಾರವು ಕಾರ್ಪೊರೇಟ್ ಕಂಪನಿಗಳ ಕಳೆದ ಆರು 6 ವರ್ಷಗಳಲ್ಲಿ ಸುಮಾರು 11 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ರೈತರ ಸಾಲ ಮನ್ನಾ ಮಾಡಲು ಮಾತ್ರ ಅದು ದೇಶದ ಆರ್ಥಿಕತೆ ದಿವಾಳಿಯಾಗುತ್ತದೆ ಎಂದು ಸಬೂಬು ಹೇಳುತ್ತದೆ ಹಾಗೂ ಸಂಸದ ತೇಜಸ್ವಿ ಸೂರ್ಯ ರವರು ತುಂಬಾ ಬಾಲಿಷ ಹೇಳಿಕೆ ಕೊಡುವ ರೈತ ಸಮುದಾಯಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಹೇಳಿದರು.
ಸರ್ವೋದಯ ಕರ್ನಾಟಕ ಪಕ್ಷದಿಂದ ಈ ಬಾರಿ ವಿಧಾನಸಭೆಗೆ ಆಯ್ಕೆ ಆಗಿರುವ ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯನವರ ಗೆಲುವನ್ನು ಇದು ರೈತ ಸಂಘದ ಗೆಲುವೆಂದು ಪ್ರಶಂಸಿದರು.
ಭದ್ರಾ ಮೇಲ್ದಡೆ ಯೋಜನೆಗೆ ಕೇಂದ್ರ ಸರ್ಕಾರ 5300 ಕೋಟಿ ಬಜೆಟ್ ನಲ್ಲಿ ಘೋಷಣೆಯಾಗಿದ್ದರು ಇನ್ನು ಈ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಗಿಲ್ಲದರ ಬಗ್ಗೆ ಈ ಸಂದರ್ಭದಲ್ಲಿ ಸಭೆಗೆ ತಿಳಿಸಿದರು.
ತಾಲೂಕು ಅಧ್ಯಕ್ಷ ಬಿ. ಓ ಶಿವಕುಮಾರ್ ಮಾತನಾಡಿ, ಮುಂಗಾರಿನಲ್ಲಿ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಾಗದಂತೆ ಸರ್ಕಾರ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ರೈತ ಸಂಘದ ಪರವಾಗಿ ಸರ್ಕಾರವನ್ನು ಒತ್ತಾಯಿಸಿದರು.
ಸಂಘದ ಪ್ರತಿಯೊಬ್ಬ ಸದಸ್ಯರು ಕೂಡ ರೈತ ಹೋರಾಟಗಳಲ್ಲಿ ಭಾಗವಹಿಸುವುದರ ಮೂಲಕ ಸಂಘಕ್ಕೆ ಹೆಚ್ಚಿನ ಶಕ್ತಿ ತುಂಬಾಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಯುವಘಟಕದ ಅಧ್ಯಕ್ಷ ಯಳನಾಡು ಆರ್.ಚೇತನ್ ಮಾತನಾಡಿ, ರೈತರು ವಿದ್ಯುತ್ ಪರಿವರ್ತಕಗಳಿಗೆ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಹಣವನ್ನು ಬೆಸ್ಕಾಂ ಗೆ ಸಂದಾಯ ಮಾಡಿದ್ದು ಇದುವರೆಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಯಾವುದೇ ಕ್ರಮವನ್ನು ಕೈಗೊಂಡಿಲ್ಲದರ ಬಗ್ಗೆ ಸಭೆಯ ಗಮನ ಸೆಳೆದು ಸರ್ಕಾರಕ್ಕೆ ಒತ್ತಾಯಿಸಿದರು.
ರೈತ ಮುಖಂಡರಾದ ದಸ್ತಾಗೀರ್ ಸಾಬ್, ಹೆಚ್ ಆರ್ ತಿಪ್ಪೇಸ್ವಾಮಿ, ಮೇಟಿಕುರ್ಕೆ ತಿಪ್ಪೇಸ್ವಾಮಿ, ದೇವರಕೊಟ್ಟ ರಂಗಸ್ವಾಮಿ, ಯಳನಾಡು ಮುರುಳೀಧರ, ಜಿಲ್ಲಾ ಮುಖಂಡರಾದ ಎಂ ಆರ್ ಪುಟ್ಟಸ್ವಾಮಿ, ಎಂ ಲಕ್ಷ್ಮಿ ಕಾಂತ್, ತಿಪ್ಪೇಸ್ವಾಮಿ, ಮಹಿಳಾ ಮುಖಂಡರಾದ ವಿ ಕಲ್ಪನಾ, ಶಶಿಕಲಾ, ತಿಮ್ಮಕ್ಕ, ಬಿದರಿಕೆರೆ ಲಕ್ಷ್ಮಕ್ಕ, ನಿತ್ಯಾ ಶ್ರೀ, ಅನುಸೂಯಮ್ಮ, ದಾದಾಪಿರ್, ಮೋಹಿದ್ದೀನ್ , ಎಚ್ ಎನ್ ಮೂರ್ತಪ್ಪ, ಬೋಚಪುರ ರಮೇಶ್, ಓ ಪಿ ಟಿ ಸ್ವಾಮಿ, ಸಿದ್ದಪ್ಪ, ಈಶ್ವರಗೆರೆ ನಾಗರಾಜ್, ಕೇಶವ ಮೂರ್ತಿ, ಒಬನಾಯಕ, ಮರದ ಮುತ್ತು, ಶಿವಸ್ವಾಮಿ, ರಂಗಸ್ವಾಮಿ, ಸಣ್ಣ ತಿಮ್ಮಯ್ಯ,ವೆಂಕಟೇಶ್, ಗಿರೀಶ್, ಲೋಕೇಶ್ ಹಾಗೂ ಮುಂತಾದವರು ಭಾಗವಹಿಸಿದ್ದರು.