i
ಅಭಿವೃದ್ಧಿಗೆ ಪೂರಕವಾಗಲು ಕೆಎಎಸ್ ಅಧಿಕಾರಿಗಳಿಗೆ ಪ್ರಾಧಾನ್ಯತೆ ನೀಡಿ: ಬೊಮ್ಮಾಯಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: Give priority to KAS officers to complement development: Bommai…
ರಾಜ್ಯದಲ್ಲಿ ಕೆಎಎಸ್ ಅಧಿಕಾರಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದರೆ, ಅಭಿವೃದ್ದಿಗೆ ಪೂರಕವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ಸ್ಕೌಟ್ಸ್ ಆಂಡ್ ಗೈಡ್ಸ್ ನಲ್ಲಿ ನಡೆದ ಕೆವಿಎಲ್ ( ಕರ್ನಾಟಕ ವೀರಶೈವ ಲಿಂಗಾಯತ) ಎಂಪ್ಲಾಯಿಸ್ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಮೂರನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶದಲ್ಲಿ ಸಿವಿಲ್ ಸರ್ವಿಸ್ ಗೆ ತನ್ನದೇ ಆದ ಐತಿಹಾಸಿಕ ಸ್ಥಾನಮಾನ ಪಡೆದಿದೆ. ಇತ್ತಿಚಿನ ದಿನ ಸಾಕಷ್ಟು ಬದಲಾವಣೆ ಆಗುತ್ತಿದೆ. ಬದಲಾವಣೆ ಆಗದಿದ್ದರೆ ಸಾಧಿಸಲು ಸಾಧ್ಯವಿಲ್ಲ. ನಮ್ಮ ವೀರಶೈವ ಲಿಂಗಾಯತ ಸಮುದಾಯಕ್ಕೆ ವಿಶಾಲವಾದ ತಳಹದಿ ಇದೆ. ನಮಗೆ ಸಕಾರಾತ್ಮಕ ಆಲೋಚನೆ ಇದೆ. ಪ್ರಗರಿಪರ ಚಿಂತನೆ ಇದೆ. ಅದು ರಾಜ್ಯದ ಒಳಿತಿಗೆ ಬಳಕೆಯಾಗಿದೆ ಎಂದರು.
ಸಮಾಜದಲ್ಲಿ ಘನತೆ ಮತ್ತು ಸ್ವೀಕರಿಸುವ ಗುಣ ಅತ್ಯಂತ ಮುಖ್ಯ. ಇವತ್ತಿನ ಕಾಲದಲ್ಲಿ ಇತರ ಎಲ್ಲರ ಜೊತೆಗೆ ಉತ್ತಮವಾಗಿ ನಡೆದುಕೊಳ್ಳುವುದು ನಮ್ಮ ಸಮುದಾಯ ಹಾಗೂ ಎಲ್ಲರ ಏಳಿಗೆಗಾಗಿ ಅನುಕೂಲವಾಗಲಿದೆ. ಕೆಎಎಸ್ ಅಧಿಕಾರಿಗಳು ತಮ್ಮ ಪ್ರಾಮಾಣಿಕತೆ ಸಾಬಿತು ಪಡೆಸಿದ್ದಾರೆ. ನಾವು ನಮ್ಮ ಕೆಎಎಸ್ ಅಧಿಕಾರಿಗಳ ಮೇಲೆ ಹೆಚ್ಚು ಅವಲಂಬಿತರಾಗುವಂತಾಗಬೇಕು. ಬೇರೆ ರಾಜ್ಯದಲ್ಲಿ ಕೆಎಎಸ್ ಅಧಿಕಾರಿಗಳಿಗೆ ಹೆಚ್ಚಿನ ಆದ್ಯತೆ ಇದೆ. ನಮ್ಮ ರಾಜ್ಯದಲ್ಲಿಯೂ ಕೆಎಎಸ್ ಅದಿಕಾರಿಗಳಿಗೂ ಹೆಚ್ಚಿನ ಪ್ರಾಧಾನ್ಯತೆದೊರೆಯುವಂತೆ ಮಾಡಬೇಕು. ಆ ನಿಟ್ಟಿನಲ್ಲಿ ನಾವು ಪಕ್ಷ ಬೇಧ ಮರೆತು ಎಲ್ಲ ಪಕ್ಷಗಳ ನಾಯಕರು ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ ಹಾಗೂ ಸ್ವಾಮೀಜಿಗಳು ಹಾಜರಿದ್ದರು.