i
ಆಡಳಿತಾತ್ಮಕ ವೈಫಲ್ಯದಿಂದಾಗಿಯೇ ನಷ್ಟದ ಕೂಪಕ್ಕೆ ಬಿದ್ದ ವಿಐಎಸ್ಎಲ್ ಕಾರ್ಖಾನೆ…
ಚಂದ್ರವಳ್ಳಿ ನ್ಯೂಸ್, ಭದ್ರಾವತಿ:
ಇವತ್ತು ಭದ್ರಾವತಿಯಲ್ಲಿ ನಡೆದ ವಿಐಎಸ್ಎಲ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ, ಶತಮಾನದ ಸಂಭ್ರಮದ ನಡುವೆಯೇ ವಿಐಎಸ್ಎಲ್ ಎಂಬ ಭಾವನಾತ್ಮಕ ಕೊಂಡಿಯನ್ನು ಉಳಿಸಿಕೊಳ್ಳುವುದಕ್ಕಾಗಿ ನಾವೆಲ್ಲರೂ ಮಾಡಿದ ಪ್ರಯತ್ನಗಳನ್ನು ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ವಿವರಿಸಿದರು.
ಅವರು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ, ಕೇವಲ ಆಡಳಿತಾತ್ಮಕ ವೈಫಲ್ಯದಿಂದಾಗಿಯೇ ನಷ್ಟದ ಕೂಪಕ್ಕೆ ಬಿದ್ದ ಕಾರ್ಖಾನೆ, ವಿಐಎಸ್ಎಲ್. ಅದಕ್ಕೆ ಕಾರ್ಮಿಕರು ಯಾವತ್ತೂ ಕಾರಣರಲ್ಲ. ಆದರೆ ಅದನ್ನು ಉಳಿಸಿಕೊಂಡು ಮತ್ತೆ ಮೆರೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಜಗದ್ಗುರುಗಳ ಹಾಗೂ ಮಹಾರಾಜರ ಪಾದಸ್ಪರ್ಶದಿಂದ ಮತ್ತು ಕಾರ್ಮಿಕ ಸಂಘಟನೆಯೊಂದಿಗೆ ಸೇರಿ ನಾವೆಲ್ಲರೂ ಮಾಡುತ್ತಿರುವ ಪ್ರಯತ್ನಗಳಿಂದಾಗಿ ಅದು ಕೈಗೂಡುವ ಭರವಸೆಯಿದೆ ಎಂದು ಅವರು ತಿಳಿಸಿದರು.