i
6 ಮಂದಿ ಅಂತರ್ ರಾಜ್ಯ ಶ್ರೀಗಂಧ ಕಳ್ಳರ ಗ್ಯಾಂಗ್ ಬಂಧನ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
6 ಮಂದಿ ಅಂತರ್ ರಾಜ್ಯ ಶ್ರೀಗಂಧ ಕಳ್ಳರ ಗ್ಯಾಂಗ್ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಚಿತ್ರಹಳ್ಳಿ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಶ್ರೀಗಂಧ ಮರಗಳ ಕಳ್ಳರಿಂದ 3 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ. ಪೊಲೀಸರು ಗಸ್ತು ಸಂದರ್ಭದಲ್ಲಿ ಹೊಳಲ್ಕೆರೆ ತಾಲೂಕಿನ ಕೊಳಾಳ್ ಬಳಿ ಇಕೋ ಕಾರಿನದ್ದ 6 ಮಂದಿಯನ್ನು ಅರೆಸ್ಟ್ ಮಾಡಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.
ಬಂಧಿತ ಆರೋಪಿಗಳಿಂದ 91 KG ಶ್ರೀಗಂಧ, 15.5 KG ರಕ್ತಚಂದನ, 25.4KG ಆನೆದಂತ, 34 .1 KG ಪೆಂಗೋಲಿನ್ ಚಿಪ್ಪು, ಕೃತ್ಯಕ್ಕೆ ಬಳಸಿದ್ದ 1ಲಕ್ಷ ಹಣ, 2 ಕಾರ್, 9 ಮೊಬೈಲ್ ಸೇರಿ ಮಾರಕಾಸ್ತ್ರ ವಶ ಪಡಿಸಿಕೊಳ್ಳಲಾಗಿದೆ.A-1ಚಂದ್ರಶೇಖರ್ , A2- ಖಲೀಲ್,A-3 ಪ್ರಶಾಂತ್, A-4 ರಂಗಸ್ವಾಮಿ, A-5 ಪುನೀತ್ ನಾಯ್ಕ್, A-6 ರಾಮಾನಾಯ್ಕ್ ಬಂಧಿತರಾಗಿದ್ದಾರೆಂದು ಅವರು ತಿಳಿಸಿದರು.ಚಿತ್ರಹಳ್ಳಿ, ಶ್ರೀರಾಂಪುರ, ಐಮಂಗಲ ಸೇರಿ ವಿವಿಧ ಠಾಣಾ ವ್ಯಾಪ್ತಿಯ 7 ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದ ಗ್ಯಾಂಗ್ ಇದಾಗಿದೆ. ಹಿರಿಯೂರು ನಗರದ ಬಬ್ಬೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಸ್ತುಗಳು ಜಪ್ತಿ ಮಾಡಲಾಗಿದೆ ಎಂದು ಚಿತ್ರದುರ್ಗ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಮಾಹಿತಿ ನೀಡಿದರು. ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.