i
ಕೆಲ್ಲೋಡು ಬ್ಯಾರೇಜ್ ಭರ್ತಿ…
ವರದಿ-ನಾಗತಿಹಳ್ಳಿ ಮಂಜುನಾಥ್.
ಚಂದ್ರವಳ್ಳಿನ್ಯೂಸ್ ಹೊಸದುರ್ಗ:
ಕಳೆದ ಸುಮಾರು ೬ ರಿಂದ ೭ ತಿಂಗಳು ಕಳೆದರೂ ಮಳೆ ಇಲ್ಲದೆ ಕಂಗಾಲಾಗಿದ್ದ ತಾಲೂಕಿನ ಜನತೆಗೆ ಈಗ ಮುಖದಲ್ಲಿ ನಗು ಕಾಣಿಸುತ್ತಿದೆ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೆ ಸತತವಾಗಿ ಮೂರು ದಿನಗಳ ಕಾಲ ತಾಲೂಕಿನಾದ್ಯಂತ ಸಂವೃದ್ದ ಮಳೆಯಾಗಿದೆ ಇದರಿಂದ ರೈತಾಪಿ ವರ್ಗಕ್ಕಂತು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಚಿತಾಗಿದೆ ಅದಲ್ಲೂ ಹೊಸದುರ್ಗ ಪಟ್ಟಣಕ್ಕೆ ನೀರು ಒದಗಿಸುವ ಎಕೈಕ ನದಿ ಎಂದರೆ ಅದು ತಾಲೂಕಿನ ಕೆಲ್ಲೋಡು ಬಳಿ ಇರುವ ವೇದಾವತಿ ನದಿ.
ವೇದಾವತಿ ನದಿ ಕಳೆದ ಐದು ದಿನಗಳ ಹಿಂದೆಯಷ್ಟೆ ಖಾಲಿ ಖಾಲಿಯಾಗಿ ಕಾಣತಿತ್ತು ಆದರೆ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೆ ಸತತವಾಗಿ ಮಳೆ ಬಂದ ಪರಿಣಾಮ ಕೇವಲ ಮೂರೇ ದಿನಕ್ಕೆ ವೇದವತಿ ಭರ್ತಿಯಾಗಿ ನೀರು ಬ್ಯಾರೇಜ್ ಮೇಲೆ ಹರಿಯುತ್ತಿರುವುದನ್ನು ನೋಡಿದರೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಈ ವೇದಾವತಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಹೊಸದುರ್ಗ ಪಟ್ಟಣಕ್ಕೆ ನೀರು ಸರಬರಾಜು ಮಾಡುವುದು ಕಷ್ಟದ ಕೆಲಸವೇನಲ್ಲ ಎನ್ನುವಂತಾಗಿದ್ದು ಈಗ ವೇದಾವತಿ ನದಿ ಭರ್ತಿಯಾಗಿರುವುದು ಒಂದು ಪವಾಡವೇ ನಡೆದಂತಾಗಿದೆ. ಇದರಿಂದ ನದಿಯ ಹಾಸು ಪಾಸಿನಲ್ಲಿರುವ ರೈತರು ಹರ್ಷ ಚಿತ್ತರಾಗಿದ್ದಾರೆ.ತಾಲ್ಲೂಕಿನ ಜೀವನಾಡಿಯಾದ ವೇದಾವತಿ ನದಿ ಹರಿದು ವಾಣಿ ವಿಲಾಸ ಸಾಗರ ಸೇರಿ ಜಿಲ್ಲೆಯ ಬಹುತೇಕ ರೈತರಿಗೆ ಬೆಳೆ ಬೆಳೆಯಲು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಗೆ ಅನುಕೂಲವಾಗಿದ್ದು ಪ್ರಸ್ತುತ ಸಾಲಿನಲ್ಲಿ ಸರಿಯಾಗಿ ಮಳೆಯಾಗದೆ ಹೊಸದುರ್ಗ ತಾಲ್ಲೂಕನ್ನು ಬರ ಪೀಡಿತ ತಾಲ್ಲೂಕು ಎಂದು ಸರ್ಕಾರ ಘೊಷಣೆ ಮಾಡಿದ್ದು ಈ ಮಧ್ಯೆ ಕಳೆದ ೩ ದಿನಗಳಿಂದ ಉತ್ತಮ ಮಳೆ ಆದ ಕಾರಣ ಕೆಲ್ಲೋಡು ಬ್ಯಾರೆಜ್ ಸೇರಿ ಆಲಗಟ್ಟ, ಬಲ್ಲಾಳಸಮುದ್ರ, ಕಾರೆಹಳ್ಳಿ ಚೆಕ್ ಡ್ಯಾಮ್ಗಳು ಭರ್ತಿಯಾಗಿ ಹರಿದು ವಾಣಿ ವಿಲಾಸ ಸಾಗರ ಡ್ಯಾಮ್ ಸೇರಿದೆ.ಕಳೆದ ೨೦೧೭ ರಿಂದ ೨೦೨೧ ರವರೆಗೆ ಬರಗಾಲದ ಹಿನ್ನೆಲೆ ಹೊಸದುರ್ಗ ಪಟ್ಟಣಕ್ಕೆ ೨೩ ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿ ಟ್ಯಾಂಕರ್ ಮೂಲಕ ಸರಬರಾಜು ಮಾಡುವ ಪ್ರಸಂಗ ಇದ್ದು ಕಳೆದ ೨ ವರ್ಷಗಳಿಂದ ದೈವ ಕೃಪೆಯಿಂದ ಚೆಕ್ ಡ್ಯಾಮ್ನಲ್ಲಿ ನೀರು ಇರುವ ಕಾರಣ ಪಟ್ಟಣದ ಜನತೆ ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದ್ದು ಮುಂದಿನ ಬೇಸಿಗೆಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ನೀರನ್ನು ಪೂರೈಸಲು ಎಲ್ಲಾ ಸಿದ್ದತೆಗಳನ್ನು ಪುರಸಭೆಯವರು ಮಾಡಿಕೊಂಡಿದ್ದಾರೆ. “ಭದ್ರಾ ಮೇಲ್ಡಂಡೆ ಯೋಜನೆ ಮತ್ತು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪಟ್ಟಣಕ್ಕೆ ನೀರನ್ನು ಸರಬರಾಜು ಮಾಡಲು ಉದ್ದೇಶಿಸಲಾಗಿದ್ದು ಅಮೃತ್ ಯೋಜನೆಯಡಿ ಸುಮಾರು ೯೦೦೦ ಪ್ರತಿ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಲು ೩೩ ಕೋಟಿ ಅನುದಾನದಲ್ಲಿ ಡಿ.ಪಿ.ಆರ್ ತಯಾರಿಸಲಾಗಿದ್ದು ತುರ್ತಾಗಿ ಅನುಷ್ಠಾನಗೊಳಿಸಿ ಶಾಶ್ವತ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು”. ಬಿ.ಜಿ.ಗೋವಿಂದಪ್ಪ, ಶಾಸಕರು “ಹೊಸದುರ್ಗ ಪಟ್ಟಣದ ಹಾಗೂ ಕೆಲ್ಲೋಡು ಗ್ರಾಮದ ಸುಮಾರು ೫೦,೦೦೦ ಜನ ಸಂಖ್ಯೆಗೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲದಂತೆ ಆಗಿದೆ. ಪಂಪ್ ಹೌಸ್ ಮೂಲಕ ಸರಬರಾಜು ಮಾಡಲು ಕ್ರಮವಹಿಸಲಾಗಿದ್ದು ಜಿಲ್ಲಾಧಿಕಾರಿಗಳು ಮತ್ತು ಉಪ ವಿಭಾಗಾಧಿಕಾರಿಗಳು ಸಭೆ ನೆಡೆಸಿ ಪುರಸಭಾ ಸದಸ್ಯರುಗಳೊಂದಿಗೆ ಸಮನ್ವಯ ಸಾಧಿಸಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಲಾಗುವುದು.” ತಿಮ್ಮರಾಜು.ಜಿ.ವಿ ಪುರಸಭೆ ಮುಖ್ಯಾಧಿಕಾರಿ,ಹೊಸದುರ್ಗ.