i
ಪೋಕ್ಸೋ ಆರೋಪಿ ಮರುಘಾ ಶರಣರಿಗೆ ಮರಣ ದಂಡನೆ ಆಗಬೇಕಾಗಿತ್ತು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪೋಕ್ಸೋ ಆರೋಪಿ ಮರುಘಾ ಶರಣರಿಗೆ ಮರಣ ದಂಡನೆ ಆಗಬೇಕಾಗಿತ್ತು, ಆದರೆ ಅವರು ಬಹುಬೇಗ ಜಾಮೀನು ಪಡೆದು ಹೊರ ಬಂದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಅವರು ಮಾತನಾಡಿ, ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಶರಣರು ಒಂದು ಕಡೆಯಾದರೆ, ಅಪ್ರಾಪ್ತ ಮಕ್ಕಳನ್ನು ರಕ್ಷಿಸಲು ಪೋಕ್ಸೋ ಕಾಯ್ದೆ ಇದೆ. ನಿರ್ಭಯಾ ಪ್ರಕರಣದ ಬಳಿಕ ಪೋಕ್ಸೋ ಕಾಯ್ದೆ ಅತ್ಯಂತ ಬಲಿಷ್ಠವಾಗಿದೆ. ಆದರೆ ಕರ್ನಾಟಕದಲ್ಲಿ ಶಿವಮೂರ್ತಿ ಮುರುಘಾ ಶರಣರಂತಹವರ ಪ್ರಕರಣಗಳಲ್ಲಿ ಪೋಕ್ಸೋ ಕಾಯ್ದೆ ದುರ್ಬಲವಾದಂತಿದೆ ಎಂದು ವಿಶ್ವನಾಥ್ ಅಭಿಪ್ರಾಯ ಪಟ್ಟರು.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳಿಗೆ ಸುಲಭವಾಗಿ ಜಾಮೀನು ಮಂಜೂರಾಗುವುದಿಲ್ಲ. ಆಸಾರಾಂ ಬಾಪು ಹಲವು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಆದರೆ, ಶಿವಮೂರ್ತಿ ಶರಣರು ಜೈಲಿನಿಂದ ಹೊರಗೆ ಬಂದಿದ್ದಾರೆ ಎಂದು ಹೇಳಿದರು.ರಾಘವೇಶ್ವರ ಶ್ರೀಗಳ ಲೈಂಗಿಕ ಪ್ರಕರಣ, ಸೌಜನ್ಯ ಲೈಂಗಿಕ ಕೃತ್ಯ ಮತ್ತು ಕೊಲೆ ಪ್ರಕರಣ ಎಲ್ಲ ಏನಾದವು? ಮುರುಘಾ ಶರಣರ ಪ್ರಕರಣದಲ್ಲಿ ಪೋಕ್ಸೋ ಕಾಯ್ದೆ ದುರ್ಬಲವಾದಂತೆ ಕಾಣುತ್ತಿದೆ. ಅಕ್ಷಮ್ಯ ಅಪರಾಧ ಮಾಡಿದ ಶಿವಮೂರ್ತಿ ಶರಣರು ಹೇಗೆ ಹೊರ ಬಂದರು ಎಂದು ವಿಶ್ವನಾಥ್ಪ್ರಶ್ನಿಸಿದರು.