i
ಶ್ರೀ ಮೈಲಾರೇಶ್ವರ ಗೋರವರ ಜನಪದ ಕಲಾತಂಡಕ್ಕೆ ಗೌರವ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಶಿವಮೊಗ್ಗ ನಗರದ ಕುವೆಂಪುರಂಗ ಬಂದಿರದಲ್ಲಿ ನಡೆದ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ವತಿಯಿಂದ ಶ್ರೀ ಕನಕದಾಸರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಶ್ರೀ ಮೈಲಾರೇಶ್ವರ ಗೋರವರ ಡಮರುಗ ಕುಣಿತ ಜನಪದ ಕಲಾತಂಡಕ್ಕೆ ಗೌರವಿಸಿ ಸನ್ಮಾನಿಸಲಾಯಿತು. ಭಾಗವಹಿಸಿದ ಗೊರವರು ನಿಂಗರಾಜ್, ಎನ್. ಮಾಲತೇಶ್, ಸಂಗಮೇಶ್, ಚಂದ್ರಪ್ಪ ಇತ್ಲ, ಸಂತೋಷ್, ಬಸವರಾಜ್, ಮಾಲತೇಶ್, ಚಂದ್ರಪ್ಪ, ಶೇಖರಪ್ಪ ಬೆಳಕಟ್ಟೆ, ಸಂತೋಷ್, ವೀರಣ್ಣ ಬೆನವಳ್ಳಿ, ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಬಳಗಕ್ಕೆ ಶ್ರೀ ಮೈಲಾರೇಶ್ವರ ಗೊರವರ ಢಮರುಗ ಕುಣಿತ ಜಾನಪದ ಕಲಾತಂಡದಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.