i
ರೈತರು ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು-ಶಾಸಕ ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ರೈತ ದೇಶದ ಬೆನ್ನೆಲುಬು ಎನ್ನುವುದರಲ್ಲಿ ಎರಡು ಮಾತಿಲ್ಲ, ಜೊತೆಯಲ್ಲಿ ರೈತ ಕೇವಲ ದೇಶದ ಬೆನ್ನೆಲುಬಲ್ಲ, ನಮ್ಮೆಲ್ಲರ ಬದುಕಿನ ಬೆನ್ನೆಲುಬಾಗಿದ್ದಾನೆ. ದೇಶಕಾಯುವ ಸೈನಿಕರಂತೆ ನಮ್ಮ ದಿನನಿತ್ಯದ ಬದುಕಿಗೆ ಆಧಾರವಾಗಿರುವ ಅನ್ನ, ಆಹಾರ ನೀಡುವ ಶಕ್ತಿ ರೈತರನಿಗೆ ಇದೆ. ರೈತ ನೂತನ ಆಧುನಿಕ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ಸಾಧನೆಯತ್ತ ದೃಢ ಹೆಜ್ಜೆ ಇಡಬೇಕೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು. ಅವರು, ನಗರದ ಕೃಷಿ ಇಲಾಖೆ ಆವರಣದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಚಾಲನೆ ನೀಡಿದ್ದಲ್ಲದೆ, ವಿಶ್ವಕವಿ ಕುವೆಂಪುರವರ ದಿನಾಚರಣೆ ಈ ಕಾರ್ಯಕ್ರಮ ಆಯೋಜಿಸಿರುವುದು ಹೆಚ್ಚು ಸಂತಸ ತಂದಿದೆ. ಕೃಷಿ ಇಲಾಖೆ ಎಲ್ಲಾ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ರೈತರ ಧ್ವನಿಯಾಗಿ ಕಾರ್ಯನಿರ್ವಹಿಸಿದರೆ ಮಾತ್ರ ರೈತ ನೆಮ್ಮದಿ ಬದುಕು ಸಾಧಿಸಲು ಸಾಧ್ಯ. ಪ್ರತಿಯೊಬ್ಬ ರೈತನ ಆಗೂಹೋಗುಗಗಳ ಬಗ್ಗೆ ಚಿಂತನೆ ನಡೆಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಂದ ಭೂಮಿ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದ್ದು ಇದನ್ನು ಪಡೆಯುವತ್ತ ಕೃಷಿ ವಿಜ್ಞಾನಿಗಳ ಸಹಕಾgವನ್ನು ರೈತರು ಪಡೆಯಬೇಕು. ಪ್ರಸ್ತುತ ರಾಜ್ಯ ಸರ್ಕಾರ ರೈತ ಸರ್ವತೋಮುಖ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ವಿಪರ್ಯಾಸವೆಂದರೆ ನಮ್ಮ ಕ್ಷೇತ್ರದಲ್ಲಿ ರೈತರಿಗೆ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ಪಿ.ಮಹದೇವಪುರ ಪಂಚಾಯಿತಿಯಲ್ಲಿ ೮೫ ಲಕ್ಷ ಹಣ ದುರುಪಯೋಗವಾಗಿದೆ. ಇಂತಹ ಘಟನೆಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು ಅಧಿಕಾರಿಗಳು ಸಂಕಲ್ಪ ಮಾಡಬೇಕು. ಕಳೆದ ೨೦೨೨-೨೩ನೇ ಸಾಲಿನಲ್ಲಿ ಖಾಸಗಿ ಬೆಳೆ ವಿಮೆ ಕಂಪನಿಗಳು ೧೧.೫೦೦ ಸಾವಿರ ಕೋಟಿ ಬೆಳೆ ವಿಮೆ ರೈತರಿಂದ ಪಡೆದಿದ್ದು ೨೬೦೦ ಕೋಟಿ ಲಾಭವನ್ನು ಗಳಿಸಿವೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಂಜುನಾಥ, ರಾಷ್ಟ್ರದ ಮಾಜಿ ಪ್ರಧಾನಮಂತ್ರಿ ದಿವಂಗತ ಚೌಧರಿಶರಣ್ಸಿಂಗ್ರವರ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ರೈತ ದಿನಾಚರಣೆಯನ್ನಾಗಿ ಆಚರಣೆ ಮಾಡುತ್ತಿದ್ದೇವೆ.೧೯೩೮ರಲ್ಲಿ ದೇಶದಲ್ಲಿ ಕೃಷಿ ಕಾಯ್ದೆ ಜಾರಿಗೆ ತಂದ ಮೊದಲ ಪ್ರಧಾನ ಚೌಧರಿಶರಣ್ಸಿಂಗ್. ನಮ್ಮ ದೇಶದ ಕೃಷಿಆಧಾರಿತ ದೇಶವಾಗಿದೆ. ಕೃಷಿಯನ್ನು ವೈಜ್ಞಾನಿಕ ದೃಷ್ಠಿಯಿಂದ ನೋಡಿದರೆ ಮಾತ್ರ ರೈತರು ಅಭಿವೃದ್ದಿಯತ್ತ ಸಾಗಬಹುದು ಎಂದರು. ಕಾರ್ಯಕ್ರಮದಲ್ಲಿ ಆತ್ಮಯೋಜನೆಯಡಿ ಪ್ರಗತಿಪರ ರೈತರಾದ ಎ.ಚಿಕ್ಕಣ್ಣ, ಮಹಂತೇಶ್, ಎಂ.ವಿಜಯಕುಮಾರ್, ಬಿ.ತಿಪ್ಪೇಸ್ವಾಮಿ, ಮಾರಯ್ಯರವರನ್ನು ಶಾಸಕರು ಸನ್ಮಾನಿಸಿದರು. ಕಾರ್ಯಕ್ರಮ ಉದ್ದೇಶಿಸಿ ರೈತ ಸಂಘದ ಹಿರಿಯ ಮುಖಂಡರಾದ ಸೋಮಗುದ್ದುರಂಗಸ್ವಾಮಿ, ಕೆ.ಪಿ.ಭೂತಯ್ಯ, ಆರ್.ಎ.ದಯಾನಂದಮೂರ್ತಿ, ಚಿಕ್ಕಣ್ಣ, ದೊಡ್ಡಉಳ್ಳಾರ್ತಿಕರಿಯಣ್ಣ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ರೆಡ್ಡಿಹಳ್ಳಿ ಶಿವಣ್ಣ, ಜಿಲ್ಲಾ ಪಂಚಾಯಿತಿ ಕೆಡಿಪಿ ನಾಮಿನಿ ಸದಸ್ಯ ಓ.ರಂಗಸ್ವಾಮಿ, ಕೃಷಿ ವಿಜ್ಞಾನಿ ಓಂಕಾರಮೂರ್ತಿ, ಶ್ರೀಕಂಠಪ್ಪ, ಬೊಪ್ಪಣ್ಣ, ಬಿ.ಟಿ.ರಮೇಶ್ಗೌಡ, ಜಡೇಕುಂಟೆ ಮಂಜುನಾಥ, ತಿಪ್ಪೇಸ್ವಾಮಿ, ನಾಗೇಂದ್ರಪ್ಪ, ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ರೇಷ್ಮ ಅಧಿಕಾರಿ ಮೋಹನ್, ಪಶು ಅಧಿಕಾರಿ ರೇವಣ್ಣ, ಉಪಕೃಷಿ ನಿರ್ದೇಶಕ ಡಾ.ಬಿ.ಎನ್.ಪ್ರಭಾಕರ, ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್, ತಿಪ್ಪೇಸ್ವಾಮಿ, ರಾಮಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.