i
ಶ್ರೀರಾಮ ಅಯೋಧ್ಯ ಕಪ್ ಕ್ರಿಕೆಟ್ ಪಂದ್ಯಾವಳಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಇಲ್ಲಿನ ಗಾಂಧಿಬಜಾರ್ನ ಹನುಮಾನ್ ಬಾಯ್ಸ್ ತಂಡವು ಕ್ರೀಡೆಯ ಮೂಲಕ ಕ್ರಿಕೆಟ್ ಪ್ರೇಮಿಗಳು ಮತ್ತು ಯುವಜನರನ್ನು ಭಾರತೀಯತೆ ಹಾಗೂ ರಾಷ್ಟ್ರ ಪ್ರೇಮದ ಮುಖ್ಯ ವಾಹಿನಿಗೆ ಸೆಳೆಯಲು ಪರೋಪಕಾರಂ ಕುಟುಂಬದ ಸಹಯೋಗದೊಂದಿಗೆ ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನ ಪಕ್ಕದಲ್ಲಿರುವ ಕೃಷಿ ಕಾಲೇಜಿನ ಮೈದಾನದಲ್ಲಿ ಶ್ರೀರಾಮ ಆಯೋಧ್ಯ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಪಂದ್ಯಾವಳಿ ಉದ್ಘಾಟಿಸಲಿದ್ದು, ಶಾಸಕ ಎಸ್.ಎನ್. ಚನ್ನಬಸಪ್ಪ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಟ್ರೋಪಿ ವಿತರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಪರೋಪಕಾರಂ ಕುಟುಂಬದ ಶ್ರೀಧರ್ ಎನ್.ಎಂ. ಆಗಮಿಸಲಿದ್ದಾರೆ ಎಂದು ಹನುಮಾನ್ ಬಾಯ್ಸ್ ತಂಡದ ದಿನೇಶ್ ದಾಸ್ ವೈಷ್ಣವ್ (ಚಾಯ್ವಾಲಾ) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.