i
ಹೆತ್ತ ಕಂದನನ್ನೇ ಕೊಂದ ಕಿರಾತಕಿ ತಾಯಿ, ಮಗುವಿನ ಶವದೊಂದಿಗೆ ಸಂಚರಿಸುವಾಗ ಐಮಂಗಲ ಪೊಲೀಸರಿಂದ ಬಂಧನ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಗೋವಾದ ಹೋಟೆಲ್ ರೂಂನಲ್ಲಿ ಹೆತ್ತ ಕಂದನನ್ನೇ ಹತ್ಯೆ ಮಾಡಿ 4 ವರ್ಷದ ಕಂದನ ಶವವನ್ನು ಸೂಟ್ ಕೇಸ್ ನಲ್ಲಿ ಇಟ್ಟುಕೊಂಡು ತೆರಳುತ್ತಿದ್ದಾಗ ಐಮಂಗಲ ಪೊಲೀಸರು ಆರೋಪಿ ತಾಯಿಯನ್ನು ಬಂಧಿಸಿದ್ದಾರೆ.
ಗೋವಾದಲ್ಲಿ ನಡೆದ ಬಾಲಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮಧ್ಯಾಹ್ನ ಉತ್ತರ ಗೋವಾದ ಕಲಾಂಗುಟೆ ಪೊಲೀಸ್ ಅಧಿಕಾರಿ(ಪಿಎಸ್ಐ) ಅವರ ಕೋರಿಕೆಯ ಮೇರೆಗೆ ಗೋವಾದಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಕಾರನ್ನು ತಡೆದು ಐಮಂಗಲ ಪೊಲೀಸರು ಪರಿಶೀಲಿಸಿದಾಗ ಲಗೇಜ್ ಬ್ಯಾಗ್ನಲ್ಲಿ 4 ವರ್ಷದ ಬಾಲಕನ ಮೃತದೇಹ ಪತ್ತೆಯಾಗಿದೆ. ಇದರ ಆಧಾರದ ಮೇಲೆ ಮಹಿಳೆ ಸುಚನಾ ಸೇಠ್ ಅವರನ್ನು ಐಮಂಗಲ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ. ಸಂಜೆ ನಂತರ ಗೋವಾ ಪೊಲೀಸರು ಬಂದು ತನಿಖೆಯನ್ನು ಕೈಗೆತ್ತಿಕೊಂಡು ಬಂಧಿತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಮೀನಾ ಅವರು ತಿಳಿಸಿದ್ದಾರೆ.
ಉತ್ತರ ಗೋವಾದ ಕಲಾಂಗುಟೆ ಪಿಎಸ್ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಪತ್ತೆ ಆಗಿದ್ದು ಹೇಗೆ- ಕೊಲೆ ಆರೋಪಿ ತಾಯಿ ಸುಚನಾ ಸೇಠ್ ಮತ್ತು ಆಕೆಯ 4 ವರ್ಷದ ಪುತ್ರ ಗೋವಾದ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಹೋಟೆಲ್ ಖಾಲಿ ಮಾಡಿಕೊಂಡು ಹೋಗುವಾಗ ಆರೋಪಿ ಒಬ್ಬಳೆ ಹೋಗಿದ್ದರಿಂದ ಮಗುವಿನ ಕುರಿತು ಪ್ರಶ್ನಿಸಿದಾಗ ಸಂಬಂಧಿಕರ ಮನೆಗೆ ಕಳಸಿದ್ದೇನೆಂದು ಸುಳ್ಳು ಹೇಳಿದ್ದಳು. ಹೋಟೆಲ್ ಮಾಲೀಕರಿಗೆ ಅನುಮಾನ ಬಂದು ಹೋಟೆಲ್ ಕೊಠಡಿ ಪರಿಶೀಲನೆ ಮಾಡಿದಾಗ ಅಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದರಿಂದಾಗಿ ಗೋವಾದ ಪೊಲೀಸ್ ಠಾಣೆಗೆ ಹೋಟೆಲ್ ನವರು ಮಾಹಿತಿ ನೀಡಿದ್ದಾರೆ. ಸ್ಟಾರ್ಟ್ ಅಪ್ ಫೌಂಡರ್ ಕಂಪನಿ ಸಿಇಓ ಆಗಿರುವ ಆರೋಪಿ ಸುಚನಾ ಸೇಠ್ ಗೋವಾದಿಂದ ಟ್ಯಾಕ್ಸಿ ಮಾಡಿಕೊಂಡು ಬೆಂಗಳೂರಿನತ್ತ ತೆರಳುತ್ತಿದ್ದರು. ಗೋವಾ ಪೊಲೀಸ್ ಗೆ ಮಾಹಿತಿ ನೀಡಿದ ಬಳಿಕ ಟ್ಯಾಕ್ಸಿ ಡ್ರೈವರ್ ಸಂಪರ್ಕಿಸಿ ಹೈವೇ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಟ್ಯಾಕ್ಸಿ ಚಾಲಕ
ರಾಷ್ಟ್ರೀಯ ಹೆದ್ದಾರಿ 4ರ ಐಮಂಗಲ ಠಾಣೆ ಬಳಿ ಕಾರು ನಿಲ್ಲಿಸಿ ಐಮಂಗಲ ಪೊಲೀಸರಿಗೆ ಆರೋಪಿ ಸುಚನಾ ಸೇಠ್ ಅವರನ್ನು ಕಾರು ಚಾಲಕ ಒಪ್ಪಿಸಿದ್ದಾನೆ. ಆಗ ಐಮಂಗಲ ಪೊಲೀಸರು ಕಾರ್ ನ ಡಿಕ್ಕಿಯಲ್ಲಿದ್ದ ಸೂಟ್ ಕೇಸ್ ಪರಿಶೀ,ಸಿದಾಗ ಅದರಲ್ಲಿ ಮಗುವಿನ ಶವಪತ್ತೆಯಾಗಿದೆ. ಆಗ ಆರೋಪಿ ಸುಚನಾ ಸೇಠ್ ವಶಕ್ಕೆ ಪಡೆದು ಗೋವಾ ಪೊಲೀಸರಿಗೆ ಆರೋಪಿ ಒಪ್ಪಿಸಿದ್ದಾರೆ.
9999 ಹೆತ್ತ ಮಗುವನ್ನೆ ಕೊಂದು ಸೂಟ್ ಕೇಸ್ ನಲ್ಲಿ ಶವ ಸಾಗಿಸುತ್ತಿದ್ದ ಮಹಿಳೆಯನ್ನ ಐಮಂಗಲ ಠಾಣಾ ಪೊಲೀಸರು ವಷಕ್ಕೆ ಪಡೆದಿದ್ದಾರೆ.
ಸ್ಟಾರ್ಟ್ ಅಪ್ ಫೌಂಡರ್ & ಸಿಇಓ ಬಂಧನ ವಾಗಿದ್ದು ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸುಚನಾ ಸೇಠ್ ರನ್ನ ಬಂದಿಸಲಾಗಿದೆ. ಉತ್ತರ ಗೋವಾದ ಕ್ಯಾಂಡೋಲಿಮ್ ಸರ್ವಿಸ್ ಅಪಾರ್ಟ್ಮೆಂಟ್ ಮಗುವಿನ ಹತ್ಯೆ ಮಾಡಿದ್ದು ಸೂಟ್ ಕೇಸ್ ನಲ್ಲಿ ಮಗುವಿನ ಶವದೊಂದಿಗೆ ಗೋವಾದಿಂದ ಟ್ಯಾಕ್ಸಿ ಮಾಡಿಕೊಂಡು ತೆರಳುತ್ತಿದ್ದು ಗೋವಾದಲ್ಲಿ ಉತ್ತರ ಗೋವಾದ ಕ್ಯಾಂಡೋಲಿಮ್ ಸರ್ವಿಸ್ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದ್ದು ರೂಮಿನಲ್ಲಿ ರಕ್ತದ ಕಲೆಗಳು ಪತ್ತೆ ಹಿನ್ನೆಲೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೂಮಿಗೆ ಕರೆದೊಯ್ದಿದ್ದ ಮಗು ವಾಪಸ್ ಹೋಗುವಾಗ ಇರಲಿಲ್ಲ. ಇದನ್ನ ಪ್ರಶ್ನಿಸಿದಾಗ ಸಂಬಂಧಿಕರ ಮನೆಗೆ ಕಳಸಿದ್ದೇನೆಂದು ಸುಳ್ಳು ಹೇಳಿದ್ದು
ಗೋವಾ ಪೊಲೀಸ್ ಗೆ ಮಾಹಿತಿ ಬಳಿಕ ಟ್ಯಾಕ್ಸಿ ಡ್ರೈವರ್ ಸಂಪರ್ಕ ಮಾಡಿದ್ದು ಹೈವೇ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದರು.
ರಾಷ್ಟ್ರೀಯ ಹೆದ್ದಾರಿ 4ರ ಐಮಂಗಲ ಠಾಣೆ ಬಳಿ ಟ್ಯಾಕ್ಸಿ ಚಾಲಕ ನಿಲ್ಲಿಸಿದ್ದು ಐಮಂಗಲ ಪೊಲೀಸರಿಗೆ ಆರೋಪಿ ಸುಚನಾರನ್ನ ಚಾಲಕ ಒಪ್ಪಿಸಿದ್ದು ಕಾರ್ ನ ಡಿಕ್ಕಿಯಲ್ಲಿದ್ದ ಸೂಟ್ ಕೇಸ್ ನಲ್ಲಿ ಮಗುವಿನ ಶವಪತ್ತೆಯಾಗಿದೆ. ಮಗುವಿನ ಶವವನ್ನ ಮಾರ್ಚರಿಗೆ ಶಿಫ್ಟ್ ಮಾಡಿ ಆರೋಪಿ ಸುಚನಾರನ್ನ ಪೊಲೀಸರು ವಶಕ್ಕೆ ಪಡೆದು ಗೋವಾ ಪೊಲೀಸರಿಗೆ ಆರೋಪಿಯನ್ನ ಹಸ್ತಾಂತರ ಮಾಡಿದ್ದು ಈ ಸಂಬಂದ ಗೋವಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.