i
ಡೈರಿ ನಿರ್ದೇಶಕರ ಚುನಾವಣೆ JDS ಪಕ್ಷದ ವಶಕ್ಕೆ..
ಚಂದ್ರವಳ್ಳಿ ನ್ಯೂಸ್, ಶಿಡ್ಲಘಟ್ಟ:
ಶಿಡ್ಲಘಟ್ಟ ತಾಲೂಕಿನ ಮಾಳಮಾಚನ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಳಮಾಚನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ೫ ವರ್ಷ ಗಳ ಅವಧಿಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಒಟ್ಟು ಹದಿಮೂರು ನಿರ್ದೇಶಕ ರ ಸ್ಥಾನ ಗಳ ಪೈಕಿ ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಬಿ.ಎನ್ ರವಿಕುಮಾರ್ ರವರ ಬೆಂಬಲಿತರು ಒಟ್ಟು ಹದಿಮೂರು ಮಂದಿ ನಿರ್ದೇಶಕರ ಸ್ಧಾನಕ್ಕೆ ಗೆಲವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನೂತನ ನಿರ್ದೇಶಕ ರಾದ ರಾಜಶೇಖರ್ ರವರು ತಿಳಿಸಿದರು.
ಇನ್ನೂ ಈ ಚುನಾವಣೆಯಲ್ಲಿ ಸಾಮಾನ್ಯ ಸ್ಧಾನದಲ್ಲಿ ದ್ಯಾವಪ್ಪ ಬಿ.137 ಮತಗಳು, ಸತೀಶ್ ಆರ್ 123 ಮತಗಳು , ತಿನಕಲ್ ಶ್ರೀನಿವಾಸಪ್ಪ 121 ಮತಗಳು ,ಅಶೋಕ್ ಎಂ.ಸಿ 116 ಮತಗಳು ,ಕೃಷ್ಣಪ್ಪ ಎಂ.ಎಸ್. 106 ಮತಗಳು , ವೆಂಕಟಗೌಡ ಎಂ.ಎನ್ 105 ಮತಗಳು , ಮನೋಹರ ಎಂ. 103 ಮತಗಳು ಗಳಸಿದ್ದಾರೆ. ಹಾಗೇಯೇ ಮಹಿಳಾ ಮೀಸಲು ಸ್ಧಾನದಲ್ಲಿ ಪ್ರಮೀಳಮ್ಮ 148 ಮತಗಳು , ಹಾಗೂ ಸವಿತ ಎನ್. 137 ಮತಗಳು ಗಳಸಿದ್ದಾರೆ. ಹಾಗೇಯೇ ಪರಿಶಿಷ್ಟ ಜಾತಿ ಮೀಸಲು ನಲ್ಲಿ ವೆಂಕಟಲಕ್ಷಮ್ಮ ಎ.ಕೆ 120 ಮತಗಳು , ಪರಿಶಿಷ್ಟ ಪಂಗಡ ಮೀಸಲು ನಲ್ಲಿ ವೆಂಕಟೇಶಪ್ಪ ಆರ್. 141 ಮತಗಳು , ಹಿಂದುಳಿದ ವರ್ಗ ‘ಎ‘ ಮೀಸಲು ನಲ್ಲಿ ರಾಮಚಂದ್ರ ಚಾರಿ 123 ಮತಗಳು ಹಾಗೂ ಹಿಂದುಳಿದ ವರ್ಗ ‘ಬಿ‘ ಮೀಸಲು ನಲ್ಲಿ ರಾಜಶೇಖರ ಎಂ.ಕೆ .135 ಮತಗಳನ್ನು ಗಳಸಿ ಒಟ್ಟು 13 ಮಂದಿ ನಿರ್ದೇಶಕಯಾಗಿ ಆಯ್ಕೆಯಾಗಿದ್ದಾರೆ.
ಇನ್ನೂ ಆದೇ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಲಿ , ಸಂಘದ ಸದಸ್ಯರು , ಸಂಘದ ಸಿಬ್ಬಂದಿ , ಪೋಲೀಸ್ ಸಿಬ್ಬಂದಿ ಹಾಗೂ ಸರಕಾರ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.