i
ಶಾಲೆಗಳಿಗೆ ವರದಾನವಾದ ಉಡುಪು ತಯಾರಿಕಾ ಕಂಪನಿ…
ಚಂದ್ರವಳ್ಳಿ ನ್ಯೂಸ್, ಭದ್ರಾವತಿ:
ಶಾಹಿ ಎಕ್ಸ್ಪೋರ್ಟ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರಿ ಶಾಲೆಗಳ ಮತ್ತು ಅಭಿವೃದ್ಧಿಗಾಗಿ ಮತ್ತು ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗಾಗಿ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈ ಕೆಳಗಿನ ಸೌಕರ್ಯಗಳು ಅವರಿಗೆ ಸಿಗಲಿವೆ.
ವ್ಯಾಪಾರ ನಿಯಂತ್ರಕ ಲಕ್ಷ್ಮಣ ಧರ್ಮಟ್ಟಿ ಮಾತನಾಡಿ ತಾಲೂಕಿನ ನಿಧಿಗೆ ಮತ್ತು ಸೋಗಾನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5 ಶಾಲೆಗಳ 7ರಿಂದ 10ನೇ ತರಗತಿಯ 271 ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ. ನಿಧಿಗೆ ಮತ್ತು ಸೋಬಾನೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ 12 ಸರ್ಕಾರಿ ಶಾಲೆಗಳ ಒಂದರಿಂದ ಹತ್ತನೇ ತರಗತಿಯ 858 ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಮಗ್ರಿಗಳು, ನಿಧಿಗೆ ಮತ್ತು ಸೋಗಾನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 14 ಅಂಗನವಾಡಿ ಕೇಂದ್ರಗಳಿಗೆ ಬೋಧನಾ ಕಲಿಕಾ ಸಾಮಗ್ರಿಗಳು ಮತ್ತು ಅಡಿಗೆಗೆ ಬಳಸುವಂತಹ ಸಾಮಗ್ರಿಗಳು ಇವುಗಳನ್ನು ವಿತರಿಸುವುದಾಗಿ ತಿಳಿಸಿದರು. ಸಮಾಜಮುಖಿಯಾಗಿ ಅನೇಕ ಕಾರ್ಯಕ್ರಮಗಳನ್ನು ಮುಂದೆ ಹಮ್ಮಿಕೊಂಡಿರುವುದಾಗಿ ಲಕ್ಷ್ಮಣ ಧರ್ಮಟ್ಟಿ ತಿಳಿಸಿದರು.
ಪರಿಸರಕ್ಕೆ ಸಂಬಂಧಪಟ್ಟ ಹಾಗೆ ಅನೇಕ ತೀರ್ಮಾನಗಳನ್ನು ಕೂಡ ತೆಗೆದುಕೊಂಡಿರುವುದಾಗಿ ನ್ಯೂನತೆಗಳೆಲ್ಲವನ್ನ ಮುಂದೆ ಸಲ್ಲಿಸಿ ಪಡಿಸುವುದಾಗಿ ಲಕ್ಷ್ಮಣ ಧರ್ಮಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಹಿಯ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು. ಪತ್ರಕರ್ತರ ಎಲ್ಲಾ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ ವಿವರಗಳನ್ನು ನೀಡಿದರು.