i
ಫೆ.22 : ಅಭಯ್ ಗೋಲ್ಡ್ ಬಾಯರ್ಸ್ ಶೂರೂಂ ಉದ್ಘಾಟನೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ನಗರದ ವಿನೋಬನಗರದ ಪೊಲೀಸ್ ಚೌಕಿಯಲ್ಲಿ ಅಭಯ ಗೋಲ್ಟ್ ಬಾಯರ್ಸ್ ಶೋರೂಮ್ ಫೆ. 22 ರಂದು ಉದ್ಘಾಟನೆಯಾಗಲಿದೆ.
ಸೋಮವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶೋರೂಮ್ನ ಫ್ರಾಂಚೈಸಿ ಮಧುಸೂದನ್, ಅಂದು ಬೆಳಗ್ಗೆ 11 ಕ್ಕೆ ಉದ್ಗಾಟನೆಯನ್ನು ನೆರವೇರಲಿದೆ. ಶಾಸಕ ಎಸ್ ಎನ್ ಚನ್ನಬಸಪ್ಪ, ಸಂಸದ ಬಿ ವೈ ರಾಘವೇಂದ್ರ, ಮಾಜಿ ಶಾಸಕ ಕೆ ಎಸ್ ಈಶ್ವರಪ್ಪ ಅತಿಥಿಯಾಗಿ ಆಗಮಿಸುವರು. ಸಂಸ್ಥೆಯ ಮಾಲಿಕ ಸತೀಶ್ ಗೌಡ ಮತ್ತು ಶಿವಮೊಗ್ಗದ ಸವಿ ಜ್ಯುವೆಲರಿ ಮಾಲಿಕ ಮಧುಸೂದನ್ ಉಪಸ್ಥಿತರಿರುವರು ಎಂದರು.
ಬೆಂಗಳೂರು ಮೂಲದ ಅಭಯ ಗೋಲ್ಡ್ ಬಾಯರ್ಸ್ ಈಗಾಗಲೇ ರಾಜ್ಯದಲ್ಲಿ ಹಲವೆಡೆ ತನ್ನ ಫ್ರಾಂಚೈಸಿ ಮೂಲಕ ಶಾಖೆಗಳನ್ನು ಆರಂಭಿಸುತ್ತಿದೆ. ಶಿವಮೊಗ್ಗದಲ್ಲಿ ತಾನು ಇದರ ಫ್ರ್ರಾಂಚೈಸಿ ಪಡದಿರುವುದಾಗಿ ವಿವರಿಸಿದ ಅವರು, ಗ್ರಾಹಕರಿಗೆ ಬೇಕಾದ ಮಾದರಿಯಲ್ಲಿ ಬಂಗಾರದ ಆಭರಣಗಳನ್ನು ತಯಾರಿಸಿ ಕೊಡಲಾಗುವುದು. ಶುದ್ಧ ಬಂಗಾರ ಮತ್ತು ಆಧುನಿಕ ಒಡವೆಗಳ ಸಂಗ್ರಹ ಇಲ್ಲಿರುತ್ತದೆ ಎಂದರು.
ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಆಕರ್ಷಣೆಯಾಗಿ ಬಿಗ್ ಬಾಸ್ನಲ್ಲಿ ಪಾಲ್ಗೊಂಡಿದ್ದ ಕಿರಿಕ್ ಕೀರ್ತಿ, ವರ್ತೂರು ಸಂತೋಷ, ತನಿಷ್ಕಾ ಕುಪ್ಪ
ಂಡ, ತುಕಾಲಿ ಸಂತೋಷ್, ಕಾರ್ತೀಕ್ ಮಹೇಶ್ ಆಗಮಿಸುವರು ಎಂದು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ರಾಘವೇಂದ್ರ, ನರಸಿಂಹ, ರವಿಕುಮಾರ್ ಮೊದಲಾದವರಿದ್ದರು.