i
ನಾಪತ್ತೆಯಾಗಿದ್ದ ಯುವಕ ಶವವಾಗಿಪತ್ತೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ತಾಲೂಕಿನ ಹಾಯ್ ಹೊಳೆ ಗ್ರಾಮದಲ್ಲಿರುವ ತುಂಗ ನದಿಗೆ ಕಟ್ಟಲಾಗಿರುವ ಚೆಕ್ ಡ್ಯಾಂನಲ್ಲಿ ಯುವಕನೋರ್ವನ ಶವವೊಂದು ಪತ್ತೆಯಾಗಿದೆ.
ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.
ಮೊಹ್ಮದ್ ರಿಯಾಜ್ (18)ಫೆ.16 ರಂದು ಮನೆಬಿಟ್ಟು ಹೋಗಿದ್ದು ವಾಪಾಸಾಗಿರಲಿಲ್ಲ. ಈತ ಮೆಕಾನಿಕ್ ಕೆಲಸ ಮಾಡಿಕೊಂಡಿದ್ದನು.
ಸಾವಿಗೆ ಕೌಟುಂಬಿಕ ಸಮಸ್ಯೆ ಇರಬಹುದು ಎಂದು ಶಂಕಿಸಲಾಗುತ್ತಿದೆ. ಅಣ್ಣಾನಗರ ನಿವಾಸಿಯಾಗಿದ್ದ ಮೊಹ್ಮದ್ ರಿಯಾಜ್ ಯಾನೆ ಅರಾಫತ್ ಫೆ.16 ರಂದು ಶುಕ್ರವಾರ ಮಧ್ಯಾಹ್ನ ಊಟ ಮುಗಿಸಿಕೊಂಡು ಬೈಕ್ ತೆಗೆದುಕೊಂಡು ಮನೆ ಬಿಟ್ಟು ಹೋದವನು ವಾಪಾಸಾಗಿರಲಿಲ್ಲ.
ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ನಿನ್ನೆ ಅವರ ತಂದೆ ಸಮೀರ್ ಪಾಶ ದೂರು ದಾಖಲಿಸಿದ್ದರು. ನಿನ್ನೆಯೇ ಈತನ ಬೈಕ್ ಹಾಯ್ ಹೊಳೆ ತುಂಗಾ ನದಿಯ ಚೆಕ್ ಡ್ಯಾಂ ಬಳಿ ಪತ್ತೆಯಾಗಿತ್ತು. ಇಂದು ಆತನ ಮೃತದೇಹ ನೀರಿನಲ್ಲಿ ತೇಲಿ ಬಂದಿದೆ.