i
“ಚಿತ್ರದುರ್ಗ ಚಿರತೆಗಳು ತಂಡ” ಖೋ ಖೋ ಪಂದ್ಯದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ವೀರ ವನಿತೆ ಓಬವ್ವ ಕ್ರೀಡಾಂಗಣದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಿತ್ರದುರ್ಗ ಜಿಲ್ಲೆಯವರ ಸಂಯುಕ್ತ ಆಶ್ರಯದಲ್ಲಿ ನಡೆದ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಪುರುಷರ ಖೋ ಖೋ ಪಂದ್ಯದಲ್ಲಿ ದೊಡಗಟ್ಟೆ ನಾಗರಾಜ, ಶಿವಣ್ಣ,ಅನಿಲಕುಮಾರ, ಗಂಗ ಪ್ರಸಾದ್, ಹಿರಿಯಪ್ಪ, ವಿನೋದ್, ಸಂದೀಪ್, ಶ್ರೀನಿವಾಸ, ಲಿಂಗರಾಜ ಇಟಗಿ, ಚಂದ್ಯಾನಾಯ್ಕ , ಮಂಜುನಾಥ ವೀರೇಂದ್ರ ಪಾಟೀಲ ಮುಂತಾದವರು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಎಂದು ರೆಫರಿ ಮೂಕಣ್ಣನವರು ತಿಳಿಸಿದ್ದಾರೆ.
ಜಿಲ್ಲಾಧ್ಯಕ್ಷ ಕೆ ಟಿ ತಿಮ್ಮಾರೆಡ್ಡಿ, ಕಾರ್ಯದರ್ಶಿ ಎಸ್ ಕೆ ಮಂಜುನಾಥ್, ಖಜಾಂಚಿ ಡಿ ವೀರೇಶ್, ಕಾರ್ಯಾಧ್ಯಕ್ಷ ಎಸ್ ವೀರಣ್ಣ ಉಪಾಧ್ಯಕ್ಷ ಆರ್ ಶ್ರೀನಿವಾಸ ಸದಸ್ಯ ಶಶಿಧರ್ ಕೆ ಎನ್. ಮುಂತಾದವರು ಉಪಸ್ಥಿತರಿದ್ದರು.