i
ಹಳೆ ರಸ್ತೆ ಟೋಲ್ ಸಂಗ್ರಹಕ್ಕೆ ವ್ಯಾಪಕ ವಿರೋಧ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಜಿಲ್ಲೆಯಲ್ಲಿ ಮೊದಲ ಬಾರಿಗೆ ಎರಡು ಟೋಲ್ಗೇಟ್ಸ್ಥಾಪಿಸಲಾಗಿದೆ. ಇನ್ನು ಮುಂದೆ ಟೋಲ್ಪಾವತಿಸಿ ಜನರು ಸಂಚರಿಸಬೇಕಾಗಿದೆ. ಈ ಮೊದಲಿನಿಂದಲು ಇದ್ದ ರಸ್ತೆಯಲ್ಲೇ ರಾಜ್ಯ ಸರ್ಕಾರ ಟೋಲ್ಸ್ಥಾಪಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸವಳಂಗ ನಡುವೆ ಒಂದು ಟೋಲ್ಗೇಟ್ಸ್ಥಾಪಿಸಲಾಗಿದೆ. ಶಿಕಾರಿಪುರ – ಶಿರಾಳಕೊಪ್ಪ ನಡುವೆ ಇನ್ನೊಂದು ಟೋಲ್ನಿರ್ಮಿಸಲಾಗಿದೆ.
ಶಿವಮೊಗ್ಗ – ಹಾನಗಲ್ರಾಜ್ಯ ಹೆದ್ದಾರಿಯ ಸವಳಂಗ ಮತ್ತು ಸೀಗೆಕಣಿವೆಯಲ್ಲಿ ಟೋಲ್ಗಳನ್ನು ಸ್ಥಾಪಿಸಲಾಗಿದೆ. ಟೋಲ್ನಲ್ಲಿ ನಾಲ್ಕು ಪ್ರತ್ಯೇಕ ಗೇಟ್ಗಳನ್ನು ನಿರ್ಮಿಸಲಾಗಿದೆ. ಪ್ರತಿ ದಿಕ್ಕಿಗು ತಲಾ ಎರಡು ಗೇಟ್ಇರಲಿದೆ. ಟೋಲ್ಹಣ ಸಂಗ್ರಹಿಸುವವರಿಗೆ ಚಿಕ್ಕ ಕ್ಯಾಬಿನ್ನಿರ್ಮಿಸಲಾಗಿದೆ. ಟೋಲ್ಪ್ಲಾಜಾದಲ್ಲಿ ಬೆಳಕಿಗೆ ಲೈಟ್ಗಳು, ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪಕ್ಕದಲ್ಲಿ ಚಿಕ್ಕದಾಗಿ ಕಚೇರಿ ನಿರ್ಮಾಣ ಮಾಡಲಾಗಿದೆ. ಟೋಲ್ಗೇಟ್ನಲ್ಲಿ ಮಾತ್ರ ರಸ್ತೆ ಅಗಲ ಮಾಡಲಾಗಿದೆ.
ರಸ್ತೆ ನಿರ್ವಹಣೆಗೆ ಟೋಲ್ನಿರ್ಮಿಸಬೇಕು ಎಂಬ ಪ್ರಸ್ತಾವನೆಗೆ ರಾಜ್ಯ ಸರ್ಕಾರ 2017ರಲ್ಲಿ ಒಪ್ಪಿಗೆ ನೀಡಿತ್ತು. ರಾಜ್ಯದ ಒಟ್ಟು 19 ರಸ್ತೆಯಲ್ಲಿ 43 ಕಡೆ ಟೋಲ್ನಿರ್ಮಿಸಲು ಸರ್ಕಾರ ಅಸ್ತು ಎಂದಿತ್ತು. ಅಂತೆಯೇ ಶಿವಮೊಗ್ಗ – ಹಾನಗಲ್ರಾಜ್ಯ ಹೆದ್ದಾರಿ 57ರಲ್ಲಿ ಕೆಶಿಪ್ವತಿಯಿಂದ ಎರಡು ಕಡೆ ಟೋಲ್ನಿರ್ಮಿಸಲಾಗಿದೆ. ಹಾಗಾಗಿ ಇನ್ಮುಂದೆ ಶಿವಮೊಗ್ಗ – ಸವಳಂಗ – ಶಿಕಾರಿಪುರ ಮಾರ್ಗದಲ್ಲಿ ಸಂಚರಿಸುವವರು, ಶಿರಾಳಕೊಪ್ಪ – ಶಿಕಾರಿಪುರ ನಡುವಿನ ಸಂಚರಿಸುವ ವಾಹನ ಸವಾರರು ಟೋಲ್ಪಾವತಿಸುವುದು ಅನಿವಾರ್ಯ.
ಟೋಲ್ವಿರುದ್ಧ ಸಿಡಿದೆದ್ದ ಜನ ರಾಜ್ಯ ಹೆದ್ದಾರಿಯನ್ನು ಹೊಸದಾಗಿ ನಿರ್ಮಿಸದೆ ಈ ಹಿಂದಿನಿಂದಲು ಇದ್ದ ರಸ್ತೆಗೆ ಟೋಲ್ಕಟ್ಟಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಕೆಟ್ದರ, ಬಾಡಿಗೆ ಹೆಚ್ಚಳದ ಆತಂಕ-
ಶಿವಮೊಗ್ಗ – ಶಿಕಾರಿಪುರ – ಶಿರಾಳಕೊಪ್ಪ ಮಧ್ಯೆ ಹತ್ತಾರು ಬಸ್ಸುಗಳು ನಿತ್ಯ ಸಂಚರಿಸುತ್ತಿವೆ. ಡಿಸೇಲ್ದರ ಹೆಚ್ಚಳ, ಶಕ್ತಿ ಯೋಜನೆಯ ಪರಿಣಾಮ, ಟ್ಯಾಕ್ಸ್, ಬಸ್ಸುಗಳ ನಿರ್ವಹಣೆ ಖರ್ಚು ನಿಭಾಯಿಸಲು ಮಾಲೀಕರು ಹೆಣಗಾಡುತ್ತಿದ್ದಾರೆ. ಈ ಮಧ್ಯೆ ನಿತ್ಯ ಪ್ರತಿ ಟ್ರಿಪ್ಗು ಟೋಲ್ಕಟ್ಟುವ ಪರಿಸ್ಥಿತಿ ಸೃಷ್ಟಿಯಾಗಿದ್ದು, ಟಿಕೆಟ್ದರ ಹೆಚ್ಚಳ ಮಾಡಲಾಗುತ್ತದೆಯೆ ಎಂದು ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ. ಇನ್ನು, ಗೂಡ್ಸ್ವಾಹನಗಳು ಕೂಡ ಟೋಲ್ದರ ನಿಭಾಯಿಸಲು ಬಾಡಿಗೆ ಹೆಚ್ಚಳ ಮಾಡಬೇಕಾಗುತ್ತದೆ. ಇದರಿಂದ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯು ಇದೆ.
ತೀವ್ರ ವಿರೋಧದ ನಡುವೆ ಜಿಲ್ಲೆಯಲ್ಲಿ ಎರಡು ಟೋಲ್ಸ್ಥಾಪನೆಯಾಗಿವೆ. ರಸ್ತೆ ನಿರ್ಮಾಣಕ್ಕೆ ಪಡೆದ ಸಾಲ ತೀರಿಸಲು ಸುಂಕ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪವಿದೆ. ಕೋವಿಡ್ಕಾರಣಕ್ಕೆ ಟೋಲ್ಗೇಟ್ಸ್ಥಾಪನೆ ವಿಳಂಬವಾಗಿತ್ತು. ಈಗ ಜಿಲ್ಲೆಯಲ್ಲಿ ಮೊದಲ ಬಾರಿ ಟೋಲ್ಗೇಟ್ಗಳನ್ನು ಸ್ಥಾಪಿಸಲಾಗಿದ್ದು ದುಬಾರಿ ದುನಿಯಾದಲ್ಲಿ ಜಿಲ್ಲೆಯ ವಾಹನ ಸವಾರರಿಗೂ ಟೋಲ್ಬರೆ ಬೀಳಲಿದೆ.
“ಶಿವಮೊಗ್ಗ – ಶಿಕಾರಿಪುರ ರಸ್ತೆಯಲ್ಲಿ ಎರಡು ಟೋಲ್ ಆಗುತ್ತಿದೆ. ಕಾಂಗ್ರೆಸ್ ಟೋಲ್ ಹಾಕಿ ಹಣ ವಸೂಲಿ ಮಾಡಲು ಹೊರಟಿದೆ. ಟೋಲ್ ಆಗುತ್ತಿರೋದನ್ನು ನಾವು ವಿರೋಧಿಸುತ್ತೇವೆ”.
– ಬಿ.ವೈ.ರಾಘವೇಂದ್ರ, ಸಂಸದ, ಶಿವಮೊಗ್ಗ.