i
ಸುಧಾಕರ್ ಗೆ ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ-ಜೆಡಿಎಸ್ ಅಧ್ಯಕ್ಷ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು: Sudhakar has no morals to talk about JDS- JDS President…
ನಗರದ ಹರಿಶ್ಚಂದ್ರ ಘಾಟಿನಲ್ಲಿ ನಡೆದ ಬೋವಿ ಸಮುದಾಯ ಭವನ ಹಾಗೂ ಅಂಬೇಡ್ಕರ್ ಭವನ ಶ್ರೀ ಕೃಷ್ಣ ಭವನ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ಜಾತಿತ ಜನತಾದಳ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಎನ್ ಹನುಮಂತರಾಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ
ವಿಧಾನಸಭಾ ಚುನಾವಣೆಯ 2008 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯವನ್ನು ಕಂಡ ಡಿ ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ಬಣ್ಣ ಬದಲಾಯಿಸುವ ಇಂಥ ವ್ಯಕ್ತಿಗಳು ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡುವ ನಾನು ಸರಿ ಇದ್ದೇನೆ ಇಲ್ಲವೇ ಎಂಬ ಆಲೋಚನೆ ಮಾಡಿ ಮಾತನಾಡಬೇಕು ಸಮಯಕ್ಕೆ ಸರಿಯಾಗಿ ಮಾತನಾಡುವ ಅಂತವರನ್ನ ಏನೆಂದು ಕರೆಯಬೇಕು ನೀವೇ ಹೇಳಿ ಎಂದರು
ಪಕ್ಷ ನಿಷ್ಠೆಯಿದ್ದಿ ಪಕ್ಷೇತರ ಅಭ್ಯರ್ಥಿಯಿಂದ ಜಯ ಸಾಧಿಸಿದ ನಂತರ ಏಕೆ ಕಾಂಗ್ರೆಸ್ ಪಕ್ಷಕ್ಕೆ ಹೋಗಲಿಲ್ಲ ಹೇಳಿ ಸಚಿವರೇ ಬಿಜೆಪಿ ಪಕ್ಷಕ್ಕೆ ಕೈಜೋಡಿಸಿ ಸಚಿವರಾಗಿದ್ದು ಮರೆತುಬಿಟ್ಟಿದ್ದೀರಾ
ಪ್ರಥಮ ಬಾರಿಗೆ ಬಿಜೆಪಿ ಜೊತೆಗೆ ಕೈಜೋಡಿಸಿ ಸಚಿವರಾಗಿ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆಲಿಲ್ಲವೇ ಅವತ್ತಿನ ದಿನ ಕಾಂಗ್ರೆಸ್ ಪಕ್ಷದ ಕೈ ಜೋಡಿಸಬಹುದಿತ್ತಲ್ಲವೇ ಜಿಲ್ಲಾ ಉಸ್ತುವಾರಿ ಸಚಿವರೆ ದಲಿತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ನಂತರ ದಲಿತರ ಮೇಲೆ ದಬ್ಬಾಳಿಕೆ ಕಾಂಗ್ರೆಸ್ ಸಂಸ್ಕೃತಿ ನಿಮಗೆ ಅಹಿಂದ ವರ್ಗದ ಬಗ್ಗೆ ನಿಜವಾದ ಕಾಳಜಿ ಇದ್ದರೆ ದಲಿತರನ್ನ ಮುಖ್ಯಮಂತ್ರಿ ಮಾಡಿ ಜಾತ್ಯಾತೀತರೆಂದು ನಿರೂಪಿಸಿ
ಮುಸ್ಲಿಂರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಜಾತ್ಯಾತೀತೆಯ ಮುಖವಾಡ ಧರಿಸಿರುವ ನೈಜ ಕೋಮುವಾದಿ ಕಾಂಗ್ರೆಸ್ ಪಕ್ಷ
ಬಾಬು ಸಾಹೇಬ್ ಡಾ ಅಂಬೇಡ್ಕರ್ ರವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ ಪಕ್ಷ ಕಾಂಗ್ರೆಸ್ ಹಾಗೂ ಅಂಬೇಡ್ಕರ್ ರವರು ತೀರಿಕೊಂಡಾಗ ಅಂತ್ಯ ಸಂಸ್ಕಾರ ಮಾಡಲು ಜಾಗ ಕೂಡದೆ ದಲಿತ ವರ್ಗಕ್ಕೆ ಅವಮಾನ ಮಾಡಿದ ಪಕ್ಷ ಕಾಂಗ್ರೆಸ್ ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತ
ಜೆಡಿಎಸ್ ತನ್ನ ಜಾತ್ಯಾತೀತ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರವರು ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿ ಕರ್ನಾಟಕದಲ್ಲಿ ಪ್ರಥಮವಾಗಿ ಗ್ರಾಮ ವಾಸ್ತವ್ಯ ಪ್ರಾರಂಭಿಸಿ ನೈಜ ಸ್ಥಿತಿಯನ್ನು ಕಂಡು ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಎರಡನೇ ಬಾರಿ ಮುಖ್ಯಮಂತ್ರಿ ಯಾದಂತಹ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಸರ್ಕಾರದ ಎಲ್ಲಾ ಭಾಗ್ಯಗಳನ್ನು ಮುಂದುವರೆಸಲು ಅನುದಾನವನ್ನು ನೀಡಿ ಕರ್ನಾಟಕದ ರೈತರ 25,000 ಕೋಟಿ ಸಾಲ ಮನ್ನಾ ಮಾಡಿ ರೈತರ ನೆರವಿಗೆ ನಿಂತ ಪಕ್ಷ ನಮ್ಮದು
ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಹತ್ತು ತಿಂಗಳ ಕಳೆದರೂ ಸರ್ಕಾರ ಒಂದು ಅಂತಕ್ಕೆ ಬಂದಿಲ್ಲ ಸರ್ಕಾರದಲ್ಲಿ ಸರ್ಕಾರಿ ನ ವೇತನ ಕೊಡಲು ಹಣವಿಲ್ಲ ಚಿತ್ರದುರ್ಗ ಜಿಲ್ಲೆಯ 6 ತಾಲೂಕುಗಳನ್ನು ಬರಪಿಡಿತ ಪ್ರದೇಶಗಳೆಂದು ಘೋಷಿಸಿದ್ದರೂ ಇದುವರೆಗೂ ಒಂದು ಬಿಡುಗಾಸು ಕೂಡ ಬಂದಿಲ್ಲ
ಜಿಲ್ಲಾಧ್ಯಂತ ಸಮಸ್ಯೆಗಳನ್ನು ಬಗೆಹರಿಸಿದೆ ಕೇವಲ ಚುನಾವಣೆ ಗಿಮಿಕ್ ಗಾಗಿ ಈಗಾಗಲೇ ಪ್ರಗತಿಯಲ್ಲಿರುವ ಇಂದಿನ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಎರಡನೇ ಬಾರಿಗೆ ಶಂಕುಸ್ಥಾಪನೆ ಮಾಡುತ್ತಿರುವುದು ಹಾಸ್ಯಾಸ್ಪದ
ಜೆಡಿಎಸ್ ಪಕ್ಷ ಈ ದೇಶದ ಹಾಗೂ ರಾಜ್ಯದ ಸರ್ವ ಜನಾಂಗದ ಅಭಿವೃದ್ಧಿಗೆ ಸದಾ ಸಿದ್ಧವಾಗಿರುತ್ತದೆ
ಈ ಬಾರಿ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮೈತ್ರಿ ಪಕ್ಷ 28 ಕ್ಷೇತ್ರಗಳಲ್ಲೂ ಗೆಲುವನ್ನ ಸಾಧಿಸಲಿದೆ ಎಂದು ಜೆ ಡಿಎಸ್ ತಾಲೂಕು ಅಧ್ಯಕ್ಷ ಎನ್ ಹನುಮಂತರಾಯಪ್ಪ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.