i
ಮಾಜಿ ಸಿಎಂ ಹೆಚ್ ಡಿಕೆ ಶೀಘ್ರ ಚೇತರಿಕೆಗೆ ಜೆಡಿಎಸ್ ಪೂಜೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೃದಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಉತ್ತಮ ಆರೋಗ್ಯಕ್ಕಾಗಿ ಗುರುವಾರ ಜಿಲ್ಲಾ ಜೆಡಿಎಸ್ ವತಿಯಿಂದ ಹರಕೆರೆ ಶ್ರೀರಾಮೇಶ್ವರ ದೇವರಿಗೆ ರುದ್ರಾಭಿಷೇಕದೊಂದಿಗೆ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳು ಗೋಪಾಲ್, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ನಗರದ ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ರಘು, ಬೊಮ್ಮಕಟ್ಟೆ ಮಂಜುನಾಥ್, ಜೆಡಿಎಸ್ ಮುಖಂಡರುಗಳಾದ ರಮೇಶ್ ನಾಯಕ್, ಸಂಗಯ್ಯ ನರಸಿಂಹ ಗಂಧದಮನೆ, ಭವಾನಿ ನರಸಿಂಹ, ದಯಾನಂದ್, ಸಂಜಯ್ ಕಶ್ಯಪ್, ಅರುಣ್ ರಾವ್, ಶ್ಯಾಮ್, ಪ್ರಪುಲ್, ಲೋಹಿತ್, ಮಂಜುನಾಥ್ ಗೌಡ, ಸಂತೋಷ್, ಸುನಿಲ್ ಗೌಡ, ವಿನಯ್, ರವಿ, ಯಶವಂತ, ಅರುಣ್ ಮತ್ತೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.