i
ಅಬಕಾರಿ ಅಕ್ರಮದಲ್ಲಿ ಭಾಗಿಯಾದ 112 ಆರೋಪಿಗಳ ಬಂಧನ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಅಬಕಾರಿ ಇಲಾಖೆಯು ಸಾರ್ವತ್ರಿಕ ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಅಬಕಾರಿ ಅಕ್ರಮದ ಆರೋಪದ ಮೇಲೆ ಮಾರ್ಚ್ ೧೬ ರಿಂದ ೨೪ರವರೆಗೆ ಜಿಲ್ಲೆಯಾದ್ಯಂತ ೧೯೧ ದಾಳಿ ನಡೆಸಿ ೧೪೬ ಮೊಕದ್ದಮೆಗಳನ್ನು ದಾಖಲಿಸಿದ್ದು, ೧೧೨ ಆರೋಪಿಗಳನ್ನು ದಸ್ತಗಿರಿಗೊಳಿಸಿ ೧೧೧ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಈ ಪೈಕಿ ಒಬ್ಬ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ದಾಳಿಯಲ್ಲಿ ೭೭,೭೨,೮೭೨ ರೂ. ಮೌಲ್ಯದ ೭೬೫೧ ಲೀಟರ್ ಮದ್ಯ, ೧೭೬೪೮ ಲೀಟರ್ ಬಿಯರ್, ೩೦ ಲೀಟರ್ ಸೇಂದಿ ಸೇರಿ ೨೦ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.