i
ಬಾವಿಗೆ ಬಿದ್ದ ಮಹಿಳೆ ರಕ್ಷಿಸಿದ ಅಗ್ನಿ ಶಾಮಕ ಸಿಬ್ಬಂದಿಗಳು…
ಚಂದ್ರವಳ್ಳಿ ನ್ಯೂಸ್, ಹೊಸನಗರ:
ಹೊಸನಗರ ತಾಲ್ಲೂಕು ಜಯನಗರದ ಕಲ್ಲುಕೊಪ್ಪ ಗ್ರಾಮದಲ್ಲಿ ಮಹಿಳೆಯೊಬ್ಬರು ೨೦ಅಡಿ ಆಳದ ಬಾವಿಗೆ ಬಿದ್ದಿದ್ದು ಅವರನ್ನು ಶರವೇಗದಲ್ಲಿ ಹೋಗಿ ರಕ್ಷಿಸಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಹೊಸನಗರದ ಜಯನಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲುಕೊಪ್ಪ ಗ್ರಾಮದಲ್ಲಿ ನಾಗರತ್ನ ಎಂಬುವವರು ವಾಸದ ಮನೆಯಿಂದ ೩೦೦ ಮೀಟರ್ ದೂರದಲ್ಲಿ ೬ ಅಡಿ ಸುತ್ತಳತೆಯ ೨೦ ಅಡಿ ಆಳದ ಬಾವಿಯಲ್ಲಿ ಬಿದ್ದಿದ್ದು ಅವರು ಮಾನಸಿಕ ಅಸ್ವಸ್ಥ್ಯರಾಗಿದ್ದು ಬೇರೆ-ಬೇರೆ ಆಸ್ವತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಪ್ರಧವಾಗಿರಲಿಲ್ಲ ಎಂದು ಹೇಳಲಾಗಿದ್ದು ಬುಧವಾರ
ಬೆಳಗ್ಗೆ ಬಾವಿಗೆ ಬಿದ್ದಿದ್ದಾರೆ ಎಂದು ಗ್ರಾಮಸ್ಥರು ಅಗ್ನಿ ಶಾಮಕ ದಳಕ್ಕೆ ಪೋನ್ ಮಾಡಿದ ತಕ್ಷಣ ಶರವೇಗದಲ್ಲಿ ಆಗಮಿಸಿದ ಆನಿ ಶಾಮಕ ಸಿಬ್ಬಂದಿಗಳು ಮಹಿಳೆಯನ್ನು ಪ್ರಾಣ ಉಳಿಸುವುದರಲ್ಲಿ ಯಶಸ್ವಿಯಾಗಿದ್ದು ಮಹಿಳೆಯನ್ನು ಹೊಸನಗರ ಸಾರ್ವಜನಿಕ ಆಸ್ವತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕಾರ್ಯಚರಣೆಯಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳಾದ ಆನಂದಪ್ಪ ಎನ್, ರಾಜೇಶ್ ಕೆ.ಹೆಚ್, ಶಂಕರಪ್ಪಗೌಡ, ಮಂಜುನಾಥ ಬಿ, ರಮೀಜ್ರಾಜ್ ರಾಜ್ಶೇಖ್ರವರು ಕಾರ್ಯಚರಣೆ ನಡೆಸಿದರು.