i
ಓರಿಯಂಟಲ್ ಇನ್ಶೂರೆನ್ಸ್ ಹಿರಿಯ ಸಹಾಯಕ ಸಿ.ಆರ್.ಕೃಷ್ಣಪ್ಪಗೆ ಬಿಳ್ಕೊಡುಗೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಓರಿಯಂಟಲ್ ಇನ್ಶೂರೆನ್ಸ್ ಕಂಪನಿಯಲ್ಲಿ ಹಿರಿಯ ಸಹಾಯಕರಾಗಿ ಕಾರ್ಯನಿರ್ವಹಿಸಿ, ವಯೋನಿವೃತ್ತಿ ಹೊಂದಿದ ಚಿತ್ರದುರ್ಗ ನಗರದ ಬುರುಜನಹಟ್ಟಿಯ ಸಿ.ಆರ್.ಕೃಷ್ಣಪ್ಪ ಅವರಿಗೆ ಗುರುವಾರ ಬಿಳ್ಕೊಡುಗೆ ನೀಡಲಾಯಿತು.
ಚಿತ್ರದುರ್ಗ ಓರಿಯಂಟಲ್ ಇನ್ಶೂರೆನ್ಸ್ ಕಂಪನಿಯಲ್ಲಿ ಕ್ಯಾಷಿಯರ್ ಹಾಗೂ ಸಹಾಯಕವಾಗಿ ಕಾರ್ಯನಿರ್ವಹಿಸಿದ್ದು, ಈಚೆಗೆ ಹಿರಿಯ ಸಹಾಯಕರಾಗಿ ಬಡ್ತಿ ನೀಡಿ, ತಿಪಟೂರು ಶಾಖೆಗೆ ವರ್ಗಾವಣೆ ಮಾಡಲಾಗಿತ್ತು. ವಯೋನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ತಿಪಟೂರು ಶಾಖೆಯಲ್ಲಿ ಹಿರಿಯ ಸಹಾಯಕ ಸಿ.ಆರ್.ಕೃಷ್ಣಪ್ಪ ಅವರಿಗೆ ಆತ್ಮೀಯ ಬಿಳ್ಕೊಡುಗೆ ನೀಡಿ, ಸನ್ಮಾನಿಸಲಾಯಿತು.
ಸಿ.ಆರ್.ಕೃಷ್ಣಪ್ಪ ಅವರು ಓರಿಯಂಟಲ್ ಇನ್ಶುರೆನ್ಸ್ ಕಂಪನಿಗೆ 1991ರಂದು ಸೇವೆ ಸೇರಿದ್ದು, 32 ವರ್ಷ 3 ತಿಂಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಓರಿಯಂಟಲ್ ಇನ್ಶುರೆನ್ಸ್ ಕಂಪನಿಯ ವಿಭಾಗೀಯ ಹಿರಿಯ ವ್ಯವಸ್ಥಾಪಕ ರಾಜು, ಆಡಳಿತಾತ್ಮಕ ಅಧಿಕಾರಿ ನವೀನ್ ಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ಓರಿಯಂಟಲ್ ಇನ್ಶುರೆನ್ಸ್ ಕಂಪನಿಯ ಏಜೆಂಟರು ಇದ್ದರು.