![](https://www.chandravallinews.com/wp-content/uploads/2024/04/WhatsApp-Image-2024-04-03-at-4.09.06-PM-1024x478.jpeg)
i
ಬಿಜೆಪಿ ವಿರೋಧಿ ಎನ್.ಆರ್ ಲಕ್ಷ್ಮೀಕಾಂತ್ ಹೊರಗಡೆ ಬಿಜೆಪಿ, ಒಳಗಡೆ ವ್ಯವಹಾರಿಕ ಪಕ್ಷ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಿಜೆಪಿ ಮುಖಂಡನೆಂದು ಹೇಳಿಕೊಳ್ಳುವ ಎನ್.ಆರ್.ಲಕ್ಷ್ಮೀಕಾಂತ್ ಸದಾ ಪಕ್ಷ ವಿರೋಧಿ ಚಟುವಟಿಕೆಯಲ್ಲಿದ್ದು ಪಕ್ಷ ವಿಬ್ಭಾಗ ಮಾಡು ಕಾರ್ಯ ಮಾಡುತ್ತಿದ್ದಾರೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಕೆ.ದ್ಯಾಮಣ್ಣ ಗಂಭೀರ ಆರೋಪ ಮಾಡಿದರು.ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲಕ್ಷ್ಮಿಕಾಂತ್ ಅವರಿಗೆ ಪಕ್ಷ ಮತ್ತು ರಾಜಕೀಯ ನಿಷ್ಠೆ ಇಲ್ಲದ ಕಾರಣ, ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿರುವುದರಿಂದ ರಾಜಕೀಯವಾಗಿ ಶಕ್ತಿಹೀನರಾಗಿದ್ದಾರೆ ಎಂದು ದೂರಿದರು.
ಆದರೆ ನಾನು ಯಾವುದೇ ಪಕ್ಷದಲ್ಲಿದ್ದರೂ ಆ ಪಕ್ಷಕ್ಕೆ ನಿಷ್ಠೆಯಿಂದಿದ್ದು ನನಗೆ ವಹಿಸಿದ ಜವಾಬ್ದಾರಿಗಳನ್ನು ಪ್ರಮಾಣಿಕವಾಗಿ ಮಾಡುತ್ತೇನೆ ಎಂದು ತಿಳಿಸಿದರು. ಲಕ್ಷ್ಮೀಕಾಂತರಿಗೆ ಒಂದು ಗ್ರಾಪಂ ಸ್ಥಾನ ಗೆಲ್ಲಲು ಅವರಿಂದ ಸಾಧ್ಯವಿಲ್ಲ, ಇಂತಹ ವ್ಯಕ್ತಿ ಇಟ್ಟುಕೊಂಡ ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಮಾಡಲಾಗಿದೆಯೇ ಎಂದು ಪ್ರಶ್ನಿಸಿದ ಅವರು, ಸಾಮಾನ್ಯ ಇಂಜಿನಿಯರ್ ಆಗಿದ್ದುಕೊಂಡು ಕೋಟ್ಯಾಂತರ ರೂ.ಗಳ ಅಕ್ರಮ ಆಸ್ತಿ ಮಾಡಿದ್ದಾರೆ ಎಂದು ದೂರಿದರು.ಲಕ್ಷ್ಮೀಕಾಂತ್ ಓರ್ವ ಕಮರ್ಷಿಯಲ್ ವ್ಯಕ್ತಿಯಾಗಿದ್ದು ಪಕ್ಷವನ್ನು ವ್ಯವಹಾರಿಕವಾಗಿ ನೋಡುತ್ತಿದ್ದಾರೆ. ಪಕ್ಷ ಕಟ್ಟುವ ಕೆಲಸ ಮಾಡದೇ ಪಕ್ಷ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಯಾವ ಚುನಾವಣೆ ಗೆಲ್ಲಲು ಆಗದ ಇವರು ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಸಿಎಂ ಕಾಲು ಹಿಡಿದು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿದ್ದಾನೆ ಮನ ಬಂದಂತೆ ಆಡಳಿತ ಮಾಡಿದ ಕೀರ್ತಿ ಲಕ್ಷ್ಮಿಕಾಂತ್ ಗೆ ಸಲ್ಲುತ್ತದೆ ಎಂದು ದ್ಯಾಮಣ್ಣ ವಾಗ್ದಾಳಿ ಮಾಡಿದರು.
ಶಿಸ್ತು ಬದ್ಧವಾಗಿ ಪಕ್ಷ ಸಂಘಟನೆ ಮಾಡಿ ಸಾರ್ವಜನಿಕರ ಮಧ್ಯೆ ಉತ್ತಮ ಸಂಬಂಧ ಹೊಂದಿರುವ ನನ್ನ ಬಗ್ಗೆ ಸಾರ್ವಜನಿಕವಾಗಿ ಇಲ್ಲ ಸಲ್ಲದ ಮಾತುಗಳನ್ನು ಆಡುವುದರ ಮೂಲಕ ತೇಜೋವಧೆ ಮಾಡುತ್ತಿದ್ದಾರೆ. ದ್ಯಾಮಣ್ಣ ಯಾರು, ಹೇಗೆ, ಏನು ಎಂಬುದು ಹಿರಿಯೂರು ತಾಲ್ಲೂಕು ಏಕೆ ಇಡೀ ಜಿಲ್ಲೆಯ ಜನತೆಗೆ ಗೊತ್ತಿದೆ. ಪಕ್ಷ ವಿರೋಧಿ ಕೃತ್ಯಗಳಲ್ಲಿ ತೊಡಗುವಂತ ವ್ಯಕ್ತಿಗಳಿಂದ ನಾನು ಏನನ್ನೂ ಕಲಿಯಬೇಕಿಲ್ಲ ಎಂದು ದ್ಯಾಮಣ್ಣ ತಿರುಗೇಟು ನೀಡಿದರು.ಗೋಷ್ಟಿಯಲ್ಲಿ ಮಂಜುನಾಥ್, ಪ್ರಸನ್ನ ಹಾಜರಿದ್ದರು.