i
ಏ.18 ರಂದು ಆಂಜನೇಯ ಸ್ವಾಮಿ ಪ್ರತಿಷ್ಠಾಪನೆ…
ಚಂದ್ರವಳ್ಳಿ ನ್ಯೂಸ್, ಸಾಗರ:
ತಾಲ್ಲೂಕಿನ ಹೊಸಗುಂದದಲ್ಲಿ ಶ್ರೀಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ಏಪ್ರಿಲ್ ೧೮ ರಂದು ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮಹಾರುದ್ರ ಹವನದ ಪೂರ್ಣಾಹುತಿ ಮತ್ತು ಶ್ರೀಗಳ ಅಮೃತ ಹಸ್ತದಿಂದ ಉಮಾಮಹೇಶ್ವರ ಕ್ಷೇತ್ರದ ಬಾಲಾಲಯದಲ್ಲಿ ಆಂಜನೇಯ ಸ್ವಾಮಿಯ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಲಿದೆ ಎಂದು ಉಮಾಮಹೇಶ್ವರ ಸೇವಾ ಟ್ರಸ್ಟ್ನ ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಸಿ.ಎಂ.ಎನ್.ಶಾಸ್ತ್ರಿ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಅಂದು ಬೆಳಿಗ್ಗೆ ೮ ಗಂಟೆಯಿಂದ ಮಹಾಗಣಪತಿ ಪೂಜೆ, ಪುಣ್ಯಾಹವಾಚನ, ಋತ್ವಿಗ್ವರಣೆ, ಗಣಪತಿ ಉಪನಿಷತ್ ಪಾರಾಯಣ, ನವಗ್ರಹಪೂರ್ವಕ ಮಹಾರುದ್ರಹವನ, ಮಧ್ಯಾಹ್ನ ೧೨-೩೦ ಕ್ಕೆ ಪೂರ್ಣಾಹುತಿ, ಪ್ರಸಾದ ವಿನಿಯೋಗ ಹಾಗೂ ಗುರುವಂದನಾ ಕಾರ್ಯಕ್ರಮಗಳು ನಡೆಯಲಿವೆ. ಪೂರ್ವಾಹ್ನ ೧೧-೩೦ಕ್ಕೆ ಶ್ರೀಗಳ ಅಮೃತಹಸ್ತದಿಂದ ಉಮಾಮಹೇಶ್ವರ ಕ್ಷೇತ್ರದ ಬಾಲಾಲಯದಲ್ಲಿ ಆಂಜನೇಯಸ್ವಾಮಿಯ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಲಿದೆ ಎಂದರು.
೨೦೦೧ ರಿಂದ ಹೊಸಗುಂದದ ಉಮಾಮಹೇಶ್ವರ ದೇವರಿಗೆ ತ್ರಿಕಾಲ ಪೂಜೆ ನಡೆಯುತ್ತಿದೆ. ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತ ಬಂದಿವೆ. ಹೊಸಗುಂದಕ್ಕೆ ೧೨೦೦ ವರ್ಷಗಳ ಭವ್ಯ ಇತಿಹಾಸವಿದ್ದು, ಅಭಿವೃದ್ಧಿ ಕಾರ್ಯಕ್ರಗಳು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿವೆ. ಜನಸೇವೆ, ಜಲ ಸಂರಕ್ಷಣೆ, ದೇವರಕಾಡು ರಕ್ಷಣೆ, ಜಾನುವಾರು ಪಾಲನೆ, ಜಮೀನು ರಕ್ಷಣೆ ಮುಂತಾದ ಸಾಮಾಜಿಕ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಈ ಪರಿಸರದಲ್ಲಿ ಹಲವಾರು ದೇವರ ವಿಗ್ರಹ, ಶಿಲಾಶಾಸನಗಳು ಕಂಡು ಬಂದಿದ್ದು, ಶ್ರೀ ಉಮಾಮಹೇಶ್ವರ ದೇವಸ್ಥಾನದ ಪುನರುಜ್ಜೀವನ ಕೈಗೊಳ್ಳಲಾಗಿದೆ. ೨೦೧೮ ರಲ್ಲಿ ಒಂದು ಹಂತದವರೆಗೆ ಜೀರ್ಣೋದ್ಧಾರ ಕಾರ್ಯ ಮುಗಿದಿದ್ದು, ಶ್ರೀಗಳ ಮಾರ್ಗದರ್ಶನದಲ್ಲಿ ಪುನನಿರ್ಮಾಣ ಪ್ರತಿಷ್ಠಾಪನೆ, ಕುಂಭಾಭಿಷೇಕ ನಡೆಸಲಾಯಿತು. ಶೃಂಗೇರಿ ಶ್ರೀಗಳ ಪಾದಸ್ಪರ್ಶದಿಂದ ಎಲ್ಲ ಕಾರ್ಯಗಳೂ ಸುಗಮವಾಗಿ ನಡೆದವು ಎಂದರು.