i
ಮರಕ್ಕೆ ಕಾರು ಡಿಕ್ಕಿ ಓರ್ವ ಸಾವು…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಸಕ್ರೆಬೈಲಿನ ಬಳಿಯ ಹುಲಿಹಳ್ಳ ಎಂಬಲ್ಲಿ ಕಾರೊಂದು ಮರಕ್ಕೆ ಡಿಕ್ಕಿಹೊಡೆದಿದ್ದು ಅಪಘಾತದಲ್ಲಿ ವ್ಯಕ್ತಿಯೋರ್ವ ಸಾವು ಕಂಡಿರುವ ಘಟನೆ ನಡೆದಿದೆ.
ಉಮೇಶ್ ಸಾವನ್ನಪ್ಪಿದವರು.
ಹೊಸಮನೆ 5 ನೇ ಕ್ರಾಸ್ ನಲ್ಲಿರುವ ಸಾಗರ್ ರವರ ಮಾಲೀಕತ್ವದ ಶಿವಮೊಗ್ಗ ಸಿಟಿ ಎಂಟರ್ ಪ್ರೈಸಸ್ ಸರ್ವಿಸ್ ಸೆಂಟರ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಕಿರಣ್ ಜೊತೆ ಉಮೇಶ್ ಉಡುಪಿಯಿಂದ ಶಿವಮೊಗ್ಗಕ್ಕೆ ಮರಳುವಾಗ ಬೆಳಗಿನ ಜಾವ ಈ ಘಟನೆ ಸಂಭವಿಸಿದೆ. ಕಿರಣ್ ಕುಂದಾಪುರದವರಾಗಿದ್ದು, ಸಾಗರ್ ಎನ್ನುವವರ ಜೊತೆ ಉಮೇಶನನ್ನು ಕರೆದುಕೊಂಡು ಬರುವಾಗ ಎದುರಿನಿಂದ ಬರುತ್ತಿದ್ದ ವಾಹನದ ಲೈಟ್ ನಿಂದಾಗಿ ದಾರಿ ಕಾಣದೆ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಚಾಲಕ ಸಾಗರ್ ಪಕ್ಕದಲ್ಲಿದ್ದ ಉಮೇಶ್ ಸಹಿತ ಮೂವರಿಗೂ ತೀವ್ರ ಗಾಯಗಳಾಗಿವೆ. ಆದರೆ ಚಿಕಿತ್ಸೆ ಫಲಿಸದೆ ಉಮೇಶ್ ಸಾವನ್ನಪ್ಪಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.