i
ಅದ್ಧೂರಿಯಾಗಿ ನಡೆದ ರಾಮ ನವಮಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ;
ರಾಮನವಮಿ ಅಂಗವಾಗಿ ನಗರದ ವಿವಿಧ ದೇವಾಲಯಗಳಲ್ಲಿ ಬುಧವಾರ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.
ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮ ದೇವಸ್ಥಾನದ ಮುಂಭಾಗ ರಾಮ ಸೀತೆಯ ಫೋಟೋ ಇರಿಸಿ ಶ್ರದ್ದಾಭಕ್ತಿಯಿಂದ ಪೂಜಿಸಿ ನೂರಾರು ಭಕ್ತರಿಗೆ ಕೋಸಂಬರಿ ಪಾನಕ ವಿತರಿಸಲಾಯಿತು.
ರಂಗಯ್ಯನಬಾಗಿಲು ಸಮೀಪವಿರುವ ರಾಮನ ದೇವಸ್ಥಾನ ಹಾಗೂ ಶ್ರೀರಾಮನ ಪರಮಭಂಟ ಆಂಜನೇಯನ ದೇವಸ್ಥಾನಗಳಲ್ಲಿಯೂ ವಿಶೇಷವಾಗಿ ಪೂಜಿಸಲಾಯಿತು. ಬನ್ನಿಮಹಾಕಾಳಮ್ಮ, ಆನೆ ಬಾಗಿಲು ಸಮೀಪವಿರುವ ಆಂಜನೇಯಸ್ವಾಮಿ ಹಾಗೂ ಅಂಭಾ ಭವಾನಿ ದೇವಸ್ಥಾನದಲ್ಲಿ ಶ್ರೀರಾಮ ಸೀತಾಮಾತೆಯನ್ನು ಪೂಜಿಸಲಾಯಿತು. ಬಹುತೇಕ ದೇವಾಲಯಗಳಲ್ಲಿ ಕೋಸಂಬರಿ ಪಾನಕ ಹಂಚಲಾಯಿತು.