i
ಜೆಡಿಎಸ್-ಬಿಜೆಪಿಯ ಅಲೆ, ಶಾಸಕ ವಿರುದ್ಧ ಹರಿಹಾಯ್ದ:ಕುಮಾರಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ: JDS-BJP wave against MLA: Kumaraswamy…
ಕ್ಷೇತ್ರದಲ್ಲಿ ನಡೆದ ಎಲ್ಲಾ ಅಭಿವೃದ್ದಿಗೆ ಮಾಜಿ ಶಾಸಕ ತಿಪ್ಪೇಸ್ವಾಮಿ ಹಾಗೂ ಜಿ.ಬಸವರಾಜ ಮಂಡಿಮಠರವರು ಶಾಸಕರಾಗಿದ್ಧಾಗ ಮುನ್ನುಡಿ ಬರೆದಿದ್ದರು. ಆದರೆ, ಪ್ರಸ್ತುತ ಶಾಸಕರು ಅವುಗಳನ್ನು ನಾನು ಮಾಡಿದೆ ಎಂದು ಹೇಳಿಕೊಳ್ಳುವುದು ಎಷ್ಟು ಸರಿ. ಈ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ದವೆಂದು ಯುವ ಮುಖಂಡ ಕೆ.ಟಿ.ಕುಮಾರಸ್ವಾಮಿ ಹರಿಹಾಯ್ದರು.
ಅವರು, ನಗರದ ಖಾಸಗಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಾಜಿ ಶಾಸಕ ಜಿ.ಬಸವರಾಜ ಮಂಡಿಮಠರವರು ಶಾಸಕರಾದ ಸಂದರ್ಭದಲ್ಲಿ ಬಡವರು, ನಿರ್ಗತಿಕರಿಗೆ ಹಲವಾರು ಬಗರ್ಹುಕ್ಕುಂನಲ್ಲಿ ಜಮೀನು, ನಿವೇಶನಗಳನ್ನು ನೀಡಿ ಬಡವರಿಗೆ ಆಸರೆಯಾಗಿದ್ದರು. ಆದರೆ, ಪ್ರಸ್ತುತ ಶಾಸಕರು ೫೩೦೦ ನಿವೇಶನಗಳಿದ್ದರೂ ಅವುಗಳನ್ನು ವಿಂಗಡಣೆ ಮಾಡದೆ, ಉಪಯೋಗಕ್ಕೆ ಬಾರದ ಜಿ+೨ ಮನೆಗಳನ್ನು ನಿರ್ಮಿಸಿಕೊಡಲು ಹೊರಟಿದ್ದಾರೆ. ಶಾಸಕರು ಕ್ಷೇತ್ರದಲ್ಲಿ ಮಾಡಿರುವ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದೇನೆಂದು ಹೇಳಿಕೊಂಡು ಓಡಾಡುತ್ತಾರೆ. ಆದರೆ, ಅವುಗಳಿಗೆ ಅಡಿಪಾಯ ಹಾಕಿದ್ದು ಯಾರು ಎಂದು ಮೊದಲು ತಿಳಿದುಕೊಳ್ಳಿ ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಹಲವಾರು ಸಮುದಾಯ ಭವನಗಳು ಅರ್ಥಕ್ಕೆ ನಿಂತಿವೆ. ಅನುದಾನ ತರುವಲ್ಲಿ ಶಾಸಕರು ಸಂಪೂರ್ಣ ವಿಫಲರಾಗಿದ್ಧಾರೆ. ಬಹು ಸಂಖ್ಯೆಯಲ್ಲಿರುವ ಎಸ್ಟಿ ಸಮುದಾಯದ ವಾಲ್ಮೀಕಿ ಭವನವನ್ನು ಸಾವಿರಾರು ಕೋಟಿ ವೆಚ್ಚದಲ್ಲಿ ಊರಿಂದ ಹೊರಗೆ ನಿರ್ಮಿಸಿ ಅದನ್ನೂ ಪೂರ್ಣಮಾಡದೆ ಪಾಳು ಕೆಡವಿದ್ದಾರೆ. ಕೇವಲ ಹಣಕ್ಕಾಗಿ ಕೆಲಸ ಮಾಡುವ ಶಾಸಕರನ್ನು ಈ ಬಾರಿ ಮತದಾರ ತಿರಸ್ಕರಿಸುವರು. ವಿಧಾನಸಭಾ ಕ್ಷೇತ್ರದ ಪರಾಜಿತ ಮೂವರು ಅಭ್ಯರ್ಥಿಗಳು ಮೈತ್ರಿ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಮನೆಗೂ ಹೋಗಿ ನಮ್ಮಕೆಲಸ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಎರಡೂ ಪಕ್ಷದ ಮುಖಂಡರು ಮಾಡುವರು ಎಂದರು.
ಬಿಜೆಪಿ ಮುಖಂಡ ಅನಿಲ್ ಕುಮಾರ್ ಮಾತನಾಡಿ, ಶಾಸಕರು ಮೂರು ಬಾರಿ ಗೆದ್ದರೂ ಕ್ಷೇತ್ರದ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಕೇವಲ ಪ್ರಮುಖ ರಸ್ತೆಗಳಲ್ಲಿ ಕಟ್ಟಡ ನಿರ್ಮಿಸಿ, ರಸ್ತೆಗಳಿಗೆ ಟಾರ್ ಹಾಕಿದರೆ ಅಭಿವೃದ್ಧಿ ಅಲ್ಲ ಕ್ಷೇತ್ರದ ಒಳಗೆ ಹೋಗಿ ನೋಡಲಿ. ಇದನ್ನು ಮತದಾರರು ಗಮನಿಸುತ್ತಿದ್ದಾರೆ ಈ ಲೋಕಸಭಾ ಚುನಾವಣೆ ತಕ್ಕ ಪಾಠಕಲಿಸಲಿದ್ದಾರೆ. ನಮ್ಮ ಅಭ್ಯರ್ಥಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ೩೦ ರಿಂದ ೪೦ ಸಾವಿರ ಲೀಡ್ ಪಡೆಯುವರು ಎಂದರು.
ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಕೂಟದ ಅಭ್ಯರ್ಥಿ ಗೆಲುವಿಗಾಗಿ ಎರಡೂ ಪಕ್ಷದ ಎಲ್ಲಾ ಹಂತದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಗೆಲುವಿಗೆ ಉತ್ತಮ ವಾತಾವರಣವಿದೆ ಎಂದು ಜೆಡಿಎಸ್ ಯುವ ಮುಖಂಡ ಎಂ.ರವೀಶ್ ಹೇಳಿದರು.
ಬಿಜೆಪಿ ಮುಖಂಡರಾದ ಡಿ.ಸೋಮಶೇಖರಮಂಡಿಮಠ, ಎಸ್.ಜಯರಾಮ್, ಜಯಪಾಲಯ್ಯ, ಎಸ್.ಜಯಣ್ಣ, ಬಿ.ಎಸ್.ಶಿವಪುತ್ರಪ್ಪ, ಸಿ.ಎಸ್.ಪ್ರಸಾದ್, ವಿ.ವೈ.ಪ್ರಮೋದ್, ಸಿ.ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.