i
ದೇಶದ ಸುರಕ್ಷತೆ, ರಕ್ಷಣೆಗಾಗಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲ್ಲಿಸಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: BJP candidate Govinda Karajola wins for the safety and security of the country…
ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರವಾಗಿ ಸವಿತಾ ಸಮಾಜದ ಕಾರ್ಯಾಧ್ಯಕ್ಷ ಲಿಂಗರಾಜ್ ಹಾಗೂ ಬಿಜೆಪಿ ಪಕ್ಷದ ಪಧಾದಿಕಾರಿಗಳು ನಗರದ ದೊಡ್ಡಪೇಟೆ ೫ ನೇ ವಾರ್ಡ ಸವಿತಾ ಕಾಲೋನಿಯಲ್ಲಿ ಮನೆ ಮನೆ ಸಂಪರ್ಕ ಮಾಡಿ ಕರ ಪತ್ರ ನೀಡಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿ ಪ್ರಚಾರ ಕೈಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿ ಲಿಂಗರಾಜ್, ನರೇಂದ್ರ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗ ಬೇಕಾಗಿರುವುದರಿಂದ ಈ ಬಾರಿ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳರನ್ನು ಬಹುಮತದಿಂದ ಗೆಲ್ಲಿಸಿ ಪಾರ್ಲಿಮೆಂಟ್ಗೆ ಕಳಿಸಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಮೋದಿ ಅಡಳಿತ ಅವಧಿಯಲ್ಲಿ ನಮ್ಮಂತಹ ಸಣ್ಣ ಸಣ್ಣ ಸಮುದಾಯಗಳಿಗೆ ಅನೇಕ ಜನಪರ ಯೊಜನೆಗಳನ್ನು ನೀಡಿದ್ದಾರೆ. ವಿಶ್ವಕರ್ಮ ಯೋಜನೆಯಿಂದ ಯಾವುದೇ ಭದ್ರತೆ ಇಲ್ಲದೆ ಬ್ಯಾಂಕ್ ಸಾಲ ಸೌಲಭ್ಯ ಸಿಗುವಂತೆ ಆಗಿದೆ. ಇ-ಶ್ರಮ್ ಯೋಜನೆಯಿಂದ ಕಾರ್ಮಿಕರಿಗೆ ಕಾರ್ಡ್ ಸಿಕ್ಕಿದೆ. ಆಯುಷ್ಮಾನ್ ಕಾರ್ಡ್ ಅನುಕೂಲವಾಗಿದೆ. ನಮ್ಮ ಸಮಾಜದ ಬಂಧುಗಳು ತಮ್ಮ ಹಿತೈಷಿಗಳಿಗೆ ಸಂಬಂಧಿಕರಿಗೆ ಮನವರಿಕೆ ಮಾಡಿ ಮೋದಿ ಅವರ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಪ್ರಧಾನಿ ಮೋದಿ ಅವರು ಕೈಗೊಂಡ ತೀರ್ಮಾನಗಳಿಂದಾಗಿ ದೇಶದ ರಕ್ಷಣೆ ಸಾಧ್ಯವಾಗಿದೆ. ದೇಶದ ಸುರಕ್ಷತೆಗಾಗಿ ಗೋವಿಂದ ಕಾರಜೋಳ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ವಕ್ತಾರ ನಾಗರಾಜ್ ಬೇದ್ರೆ, ನಗರ ಸಭಾ ಸದಸ್ಯ ಹರೀಶ್, ಸಾಮಾಜಿಕ ಜಾಲತಾಣದ ಸಂಚಾಲಕ ಸತ್ಯನಾರಾಯಣ, ಬಿಜೆಪಿ ಹಿರಿಯ ಮುಖಂಡ ರಾಘಣ್ಣ, ಜಿ ಆರ್ ವೆಂಕಟೇಶ್ , ಆರ್.ಕೆ.ಮಂಜುನಾಥ, ಅನಿಲ್ನಾಗ್, ಗೋಪಿ, ಶ್ರೀನಿವಾಸ, ಕುಬೇರಪ್ಪ, ಭೀಮಪ್ಪ ನಾಯಕ, ಗಿರೀಶ್ ಸೇರಿದಂತೆ ಮತಯಾಚನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.