i
ರೈಲ್ವೆ ಹಳಿಯ ಮೇಲೆ ಕುಳಿತು ಮದ್ಯಸೇವಿಸಿದ ಯುವಕ ಸಾವು…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ನಗರದ ಕಾಶಿಪುರ ರಸ್ತೆಯ ರೈಲು ಹಳಿಯ ಮೇಲೆ ಕುಳಿತು ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಮೇಲೆ ರೈಲು ಹರಿದ ಪರಿಣಾಮ ಓರ್ವ ಯುವಕ ಸಾವು ಕಂಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ನಿನ್ನೆ ಸಂಜೆ ಹೇಮಂತ್ ಎಂಬ 24 ವರ್ಷದ ಯುವಕ ಸ್ನೇಹಿತರೊಂದಿಗೆ ವೆಟನರಿ ಕಾಲೇಜಿನ ಬಳಿಯ ಬ್ರಿಡ್ಜ್ ಬಳಿ ರೈಲ್ವೆ ಟ್ರ್ಯಾಕ್ ನಲ್ಲಿ ಕುಳಿತು ಮದ್ಯ ಸೇವಿಸಲು ತೆರಳಿದ್ದನು. ಸ್ನೇಹಿತರೊಂದಿಗೆ ಮದ್ಯ ಸೇವಿಸುವಾಗ ಶಿವಮೊಗ್ಗದ ಕಡೆಯಿಂದ ಸಾಗರ ಕಡೆ ಹೋಗುವ ರೈಲುಬಂದಿದೆ.
ಸ್ನೇಹಿತರು ಈ ವೇಳೆ ಎದ್ದು ಬಂದರೂ ಹೇಮಂತ್ ಅವರೊಂದಿಗೆ ಬಾರದಿರುವ ಪರಿಣಾಮ ರೈಲು ಆತನ ಮೇಲೆ ಹರಿದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಆದರೆ ಮೃತ ಹೇಮಂತ್ ಸಾವಿನಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕೊಲೆ ಎಂದು ಆರೋಪಿಸುತ್ತಿದೆ.
ಇಂಟರ್ ಸಿಟಿ ಅಥವಾ ಪ್ಯಾಸೆಂಜರ್ ರೈಲಿಗೆ ಈ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ರೈಲ್ವೆ ಬ್ರಿಡ್ಜ್ ಮದ್ಯ ಸೇವಕರ ಹಾವಳಿ ಹೆಚ್ಚಿದೆ ಎಂಬ ಆರೋಪವೂ ಕೇಳಿ ಬಂದಿದೆ