i
ಕೆರೆಯಲ್ಲಿ ಬಾಲಕಿ ಶವ ಪತ್ತೆ: ಕೊಲೆ ಶಂಕೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಶಿಕಾರಿಪುರ ತಾಲೂಕಿನ ಕಪ್ಪದಕೆರೆ ಎಂಬಲ್ಲಿ ಬಾಲಕಿಯನ್ನು ಕೊಲೆ ಮಾಡಿ ಕೆರೆಗೆ ಬಿಸಾಡಿದ ಘಟನೆ ಸಂಭವಿಸಿದೆ.
೯ ವರ್ಷದ ಬಾಲಕಿ ಶರಣ್ಯಾ ಎನ್ನುವವರ ಮೃತದೇಹ ಇದಾಗಿದೆ. ಆಕೆಯ ಮನೆಯ ಹಿಂಭಾಗದಲ್ಲೇ ಈ ಕೆರೆ ಇದೆ. ಸ್ಥಳೀಯ ನಿವಾಸಿ ಗದಿಗೇಶ್ ಎನ್ನುವವರ ವಿರುದ್ಧ ಆಕೆಯ ತಂದೆ ನಾಗರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.