i
ಏ.25ರಂದು ಮಸ್ಟರಿಂಗ್, 26ರಂದು ಡಿ-ಮಸ್ಟರಿಂಗ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಇದೇ ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, ಈ ಸಂಬಂಧ ಏ.25ರಂದು ಮಸ್ಟರಿಂಗ್ ಕಾರ್ಯವಿರುವುದರಿಂದ ವಿವಿಧ ತಾಲ್ಲೂಕುಗಳಿಗೆ ಮತಗಟ್ಟೆ ಸಿಬ್ಬಂದಿ ತೆರಳಲು ಹಾಗೂ ಏ.26ರಂದು ಮತದಾನ ಮುಗಿದ ನಂತರ ತಾಲ್ಲೂಕಿನ ಡಿ-ಮಸ್ಟರಿಂಗ್ ಕೇಂದ್ರದಿಂದ ವಿವಿಧ ತಾಲ್ಲೂಕುಗಳಿಗೆ ಮತಗಟ್ಟೆ ಸಿಬ್ಬಂದಿಯು ತೆರಳಲು ಕೆಎಸ್ಆರ್ಟಿಸಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಚುನಾವಣೆ ಕಾರ್ಯಗಳಿಗೆ ಒಟ್ಟು 299 ವಾಹನಗಳನ್ನು ನಿಯೋಜಿಸಲಾಗಿದೆ. ಪ್ರತಿ ವಾಹನಗಳು ತೆರಳುವ ಮಾರ್ಗದ ಬಗ್ಗೆ ನಾಮಫಲಕಗಳನ್ನು ಹಾಕಬೇಕು. ಈ ಕಾರ್ಯದಲ್ಲಿ ಯಾವುದೇ ರೀತಿ ವ್ಯತ್ಯಾಸವಾಗದಂತೆ ಉಸ್ತುವಾರಿ ನೋಡಿಕೊಳ್ಳಬೇಕು. ತಾಲ್ಲೂಕು ಕಚೇರಿಯ ವಆಹನ ನಿರ್ವಹಣೆಗೆ ನೌಕರರನ್ನು ನಿಯೋಜಿಸಲಾಗಿದೆ.
ವಾಹನ ಕಾರ್ಯಕ್ಕೆ ಸಂಪರ್ಕಿಸಬೇಕಾದ ತಾಲ್ಲೂಕು ಕಚೇರಿಯ ನೌಕರರ ವಿವರ ಇಂತಿದೆ. ಮೊಳಕಾಲ್ಮುರು ತಾಲ್ಲೂಕು ವಾಹನ ನಿರ್ವಹಣೆ ಶಾಖೆಯ ಮೇಲ್ವಿಚಾರಣೆಗಾಗಿ ನೌಕರರಾದ ಕೆಂಚಲಿಂಗಪ್ಪ-9880691998, ಶಿವರಾಜ್-9108836293 ಗೆ ಸಂಪರ್ಕಿಸಬಹುದು. ಚಳ್ಳಕೆರೆ ತಾಲ್ಲೂಕಿಗೆ ಸಂಬಂಧಪಟ್ಟಂತೆ ಶ್ರೀನಿವಾಸ್-9448566953, ಪ್ರಸನ್ನ-9844401294 ಗೆ ಸಂಪರ್ಕಿಸಬಹುದು. ಚಿತ್ರದುರ್ಗ ತಾಲ್ಲೂಕಿಗೆ ಸಂಬಂಧಪಟ್ಟಂತೆ ಎಸ್.ಕೆ.ಮಂಜುನಾಥ್-9844412448, ಹಿರಿಯೂರು ತಾಲ್ಲೂಕಿಗೆ ಸಂಬಂಧಪಟ್ಟಂತೆ ಮಾರುತಿ-6360157344, ಹೊಸದುರ್ಗ ತಾಲ್ಲೂಕಿಗೆ ಸಂಬಂಧಪಟ್ಟಂತೆ ಕರಿಯಪ್ಪ-9900894779 ಹಾಗೂ ಹೊಳಲ್ಕೆರೆ ತಾಲ್ಲೂಕಿಗೆ ಸಂಬಂಧಪಟ್ಟಂತೆ ಆನಂದ-9632414253 ಗೆ ಸಂಪರ್ಕಿಸಬಹುದು. ತಾಲ್ಲೂಕು ಕಚೇರಿಯ ಸಿಬ್ಬಂದಿಯೊಂದಿಗೆ ವಿಭಾಗೀಯ ಸಂಚಲನಾಧಿಕಾರಿಗಳು, ವಿಭಾಗೀಯ ಕಚೇರಿ, ಕೆಎಸ್ಆರ್ಟಿಸಿ, ಚಿತ್ರದುರ್ಗ ವಿಭಾಗ, ಚಿತ್ರದುರ್ಗ (ಜಿ.ಸುರೇಶ್, ವಿಭಾಗೀಯ ಸಂಚಲನಾಧಿಕಾರಿಗಳು, ಮೊಬೈಲ್ ಸಂಖ್ಯೆ 9606908962 ಅವರನ್ನು ಸಂಪರ್ಕಿಸಬಹುದು. ಇವರೊಂದಿಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ಚುನಾವಣೆಯ ಕೆಲಸವನ್ನು ಕಟ್ಟುನಿಟ್ಟಾಗಿ ನಿರ್ವಹಿಸಲು ಸೂಚನೆ ನೀಡಿದ್ದಾರೆ.
ಮತದಾನ ಮುಗಿದ ನಂತರ ಸಿಬ್ಬಂದಿಗಳನ್ನು ಆಯಾ ತಾಲ್ಲೂಕಿಗೆ ವಾಪಸ್ ಕಳುಹಿಸುವ ವ್ಯವಸ್ಥೆ ಮಾಡುವುದು. ವಿಭಾಗೀಯ ನಿಯಂತ್ರಣಾಧಿಕಾರಿಗಳು ಸೂಚಿಸಿರುವ 299 ವಾಹನಗಳನ್ನು ತಾಲ್ಲೂಕಿನಲ್ಲಿ ಮರು ಹಂಚಿಕೆ ಮಾಡಿರುವ ಸ್ಥಳಗಳಿಗೆ ನಿಗಧಿಪಡಿಸಿರುವ ವಾಹನಗಳನ್ನು ತಪ್ಪದೇ ಏಪ್ರಿಲ್ 25ರಂದು ಬೆಳಿಗ್ಗೆ 6ಕ್ಕೆ ವರದಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕಾರ್ಯ ನಡೆಯುವ ಮೊಳಕಾಲ್ಮುರು ಸರ್ಕಾರಿ ಪಿ.ಯು ಕಾಲೇಜು, ಚಳ್ಳಕೆರೆಯ ಹೆಚ್ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿತ್ರದುರ್ಗದ ಮುರುಘಾಸ ರಾಜೇಂದ್ರ ಕ್ರೀಡಾಂಗಣದ ಸರ್ಕಾರಿ ಕಲಾ ಕಾಲೇಜು, ಹಿರಿಯೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರು, ಗುರುಭವನ ಪಕ್ಕದ ಸರ್ಕಾರಿ ಬಾಲಕಿಯರ ಪಿಯು ಕಾಲೇಉ, ಹೊಸದುರ್ಗ ಶ್ರೀಮತಿ ತಾಯಮ್ಮ ಎಡೆತೊರೆ ಸದ್ದಿವಾಲ್ ಲಿಂಗಯ್ಯ ಪದವಿ ಪೂರ್ವ ಕಾಲೇಜು, ಹೊಳಲ್ಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಂಜಾನೆ 6 ಗಂಟೆಗೆ ವಾಹನಗಳು ಸಿದ್ದವಿರಲಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.