i
ಪರಮೇನಹಳ್ಳಿ ತೆಂಗು, ಬಾಳೆ ತೋಟಕ್ಕೆ ಬೆಂಕಿ ಲಕ್ಷಾಂತರ ರೂ.ಹಾನಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಪರಮೇನಹಳ್ಳಿಯಲ್ಲಿ ಶುಕ್ರವಾರ ಮದ್ಯಾಹ್ನ 2 ಗಂಟೆಯ ಸುಮಾರಿಗೆ ಆಕಸ್ಮಿಕ ಬೆಂಕಿ ಬಿದ್ದು 4 ಎಕರೆಯಲ್ಲಿನ ತೆಂಗು, ಬಾಳೆ, ರಾಗಿ, ಜೋಳ ಸುಟ್ಟು ಹೋದ ಘಟನೆ ನಡೆದಿದೆ.
ಯಾರೋ ಕಿಡಿಗೇಡಿಗಳು ಒಣ ಹುಲ್ಲಿಗೆ ಹಚ್ಚಿದ ಪರಿಣಾಮ ಬೆಂಕಿ ಜಮೀನಿನವರೆಗೂ ಆವರಿಸಿ ಹರಿಪ್ರಸಾದ್ ಎಂಬುವವರಿಗೆ ಸೇರಿದ ಸ.ನo 43/11 ರಲ್ಲಿನ ಜಮೀನಿನಲ್ಲಿದ್ದ 300 ತೆಂಗು, 2 ಸಾವಿರ ಬಾಳೆಗಿಡ, ರಾಗಿ, ಜೋಳದ ಬೆಳೆ ಮತ್ತು ಡ್ರಿಪ್ ವೈರ್ ನಾಶವಾಗಿವೆ. ಪಕ್ಕದ ಉದಯ್ ಕುಮಾರ್ ಎಂಬುವವರ ಜಮೀನಿಗೂ ಆವರಿಸಿದ ಬೆಂಕಿ ಅವರ ಸುಮಾರು 20 ಕ್ಕೂ ಹೆಚ್ಚಿನ ತೆಂಗಿನ ಮರಗಳಿಗೆ ಹಾನಿ ಆಗಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 6 ರಿಂದ 8 ಲಕ್ಷದಷ್ಟು ನಷ್ಟ ಸಂಭವಿಸಿದೆ ಎನ್ನಲಾಗಿದೆ.