i
ರಣ ಬಿಸಿಲಿಗೆ ಕೋಟೆ ನಾಡಿನ ಓರ್ವ ವೃದ್ದೆ ಬಲಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಳೆದ ಹಲವಾರು ವರ್ಷಗಳಿಗೆ ಹೋಲಿಸಿದಲಿ ಪ್ರಸ್ತುತ ೨೦೨೪ರ ಬೇಸಿಗೆಯ ರಣ ಬಿಸಿಲು ಜನರ ಪ್ರಾಣಕ್ಕೆ ಕಂಟಕ ತಂದಿದೆ. ವಿಶೇಷವಾಗಿ ಬೆಳಗ್ಗೆ ೯ರಿಂದ ಮಧ್ಯಾಹ್ನ ೪ರ ತನಕ ರಸ್ತೆಗಳಲ್ಲಿ ಸಾರ್ವಜನಿಕರ ಓಡಾಟವೇ ವಿರಳವಾಗಿರುತ್ತದೆ. ಕಾರಣ ಈ ಬಾರಿ ಕೋಟೆ ನಾಡಿನ ಚಳ್ಳಕೆರೆ ನಗರದಲ್ಲಿ ಇಂದೆಂದೂ ಕಾಣದಂತಹ ಉರಿ ಬಿಸಿಲನ್ನು ಕಾಣಬಹುದಾಗಿದೆ.
ಕಳೆದ ಮೂರು ದಿನಗಳಿಂದ ಚಳ್ಳಕೆರೆ ನಗರದಲ್ಲಿ ೩೮ ರಿಂದ ೪೧ರ ತನಕ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಸೋಮವಾರ ಮಧ್ಯಾಹ್ನ ಚಳ್ಳಕೆರೆಯಿಂದ ನನ್ನಿವಾಳ ಕಡೆ ಅಜ್ಜಯ್ಯನಗುಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನನ್ನಿವಾಳ ಗ್ರಾಮದ ರತ್ನಮ್ಮ(೭೬) ಎಂಬ ವೃದ್ದೆ ರಸ್ತೆಯಲ್ಲಿ ನಡೆಯುವಾಗ ಬಿಸಿಲಿನ ಝಳಕ್ಕೆ ಎರಡೂ ಕಾಲುಗಳಲ್ಲಿ ಬೊಬ್ಬೆ ಬಂದಿದ್ದು, ಮುಂದಕ್ಕೆ ಚಲಿಸಲಾಗದೆ ರಸ್ತೆಯಲ್ಲೇ ಬಿದ್ದು ಮೃತಪಟ್ಟಿರುತ್ತಾಳೆ. ಈ ವರ್ಷದ ಬೇಸಿಗೆಯ ರಣ ಬಿಸಿಲು ವೃದ್ದೆ ಸಾವು ಮೊದಲ ಬಲಿಯಾಗಿದೆ.