i
ಕೆಂಚಮ್ಮ-ಕರಿಯಮ್ಮ ಜಾತ್ರೆ ಸಂಪನ್ನ…
ಚಂದ್ರವಳ್ಳಿ ನ್ಯೂಸ್, ಭದ್ರಾವತಿ :
ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ಕೆಂಚಮ್ಮ-ಕರಿಯಮ್ಮ ದೇವತೆಗಳ ೩ ದಿನಗಳ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ನಡೆದು ಸಂಪನ್ನಗೊಂಡಿತು.
ಗುರುವಾರ ಬೆಳಗ್ಗೆ ೯ ಗಂಟೆಗೆ ನೂರಾರು ಗ್ರಾಮಸ್ಥರು ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಿದರು. ಮಹಿಳೆಯರು ಮಕ್ಕಳು ವಯೋವೃದ್ದರು ಎಳೆದ ತೇರಿನ ಮೇಲೆ ಹರಕೆ ಹೊತ್ತ ಭಕ್ತರು ಇಷ್ಟಾರ್ಥ ಪದಾರ್ಥಗಳನ್ನು ಎಸೆದು ಪುನೀತರಾದರು. ಮಧ್ಯಾಹ್ನ ಭಕ್ತರು ಒಗ್ಗೂಡಿ ಓಕಳಿ ಉತ್ಸವ ಆಚರಿಸಿದರು. ನಂತರ ಶ್ರೀದೇವಿಯ ಮಡಲಕ್ಕಿ ಉತ್ಸವ ಹಾಗೂ ಓಕಳಿ ಮೂಲಕ ಶಾಂತಿಪೂಜೆ ನೆರವೇರಿಸಿದರು.
ಜಾತ್ರಾ ಮಹೋತ್ಸವ ಅಂಗವಾಗಿ ಎರಡು ದಿನಗಳ ಕಾಲ ಸಾಂಸ್ಕೃತಿಕ ಮೇಳಗಳಾದ ಡೊಳ್ಳು ಕುಣಿತ, ಮಂಗಳವಾದ್ಯ, ವಾದ್ಯಗೋಷ್ಟಿ ಪಟಾಕಿ ಸಿಡಿತ ಮೇಳೈಸಿತು. ಗ್ರಾಮದ ಎಲ್ಲಾ ಬೀದಿಗಳಲ್ಲಿ ಅಮ್ಮನ ರಾಜ ಬೀದಿ ಉತ್ಸವ ಹಾಗೂ ಬೇವಿನ ಉಡುಗೆಯಲ್ಲಿ ಪಾನಕ ಗಾಡಿ ಉತ್ಸವ ನೇರವೇರಿಸಲಾಯಿತು.
ದೇವಾಲಯ ಜಾತ್ರಾ ಸಮಿತಿಯ ಮುಖಂಡರಾದ ವಸಂತರಾವ್, ಈಶ್ವರಪ್ಪ, ವೈ.ಆರ್.ಮಂಜುನಾಥ್ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನಡೆಯಿತು. ಸಮಿತಿಯ ಸೇನಾನಿಗಳಾದ ರಾಕೇಶ್, ಮಾರುತಿರಾವ್, ಚಂದ್ರಶೇಖರ್, ಧರ್ಮಾನಾಯ್ಕ್, ಧರ್ಮ, ಹಾಲೇಶ್ ಇನ್ನು ಮುಂತದವರು ಸ್ವಯಂ ಸೇವಕರಂತೆ ಭಕ್ತರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸುತ್ತಮುತ್ತಲಿನ ನಗರ ಪ್ರದೇಶ ಮತ್ತು ಗ್ರಾಮಗಳ ಪ್ರದೇಶಗಳ ಭಕ್ತರು ಪಾಳ್ಗೊಂಡಿದ್ದರು.