i
ಮತದಾನಕ್ಕೆಂದು ಊರಿಗೆ ಹೊರಟವ ಅಪಘಾತದಲ್ಲಿ ಸಾವು…
ಚಂದ್ರವಳ್ಳಿ ನ್ಯೂಸ್, ಶಿಕಾರಿಪುರ :
ಮತದಾನಕ್ಕೆ ತೆರಳುತ್ತಿದ್ದ ವ್ಯಕ್ತಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಶಿಕಾರಿಪುರದ ಹಿತ್ತಲ ಗ್ರಾಮದ ಬಳಿ ನಡೆಸಿದೆ.
ಖಾಸಗಿ ಬಸ್ ಮತ್ತು ಬೈಕ್ ಸವಾರನ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಮೃತ ಪಟ್ಟ ವ್ಯಕ್ತಿಯನ್ನು ಮಂಜುನಾಥ್ (32) ಎಂದು ಗುರುತಿಸಲಾಗಿದೆ. ಅಕ್ಕನ ಮನೆ ಚುರ್ಚಿಗುಂಡಿಯಲ್ಲಿದ್ದು, ಚುರ್ಚಿಗುಂಡಿಯಿಂದ ಭದ್ರಾವತಿಗೆ ಮತದಾನ ಮಾಡಲುಭದ್ರಾವತಿಗೆ ಬೈಕ್ ನಲ್ಲಿ ತೆರಳುವಾಗ ಈ ಘಟನೆ ನಡೆದಿದೆ. ಶಿಕಾರಿಪುರ ಗ್ರಾಮಾಂತರದಲ್ಲಿ ಘಟನೆ ನಡೆದಿದೆ.