i
ಪತಿ ಸಾವಿನಸುದ್ದಿ ಮಧ್ಯೆಯೇ ಮತ ಚಲಾಯಿಸಿದ ಪತ್ನಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಪತಿ ತೀರಿಹೋದ ಸುದ್ದಿ ತಿಳಿದೂ ಸಹ ಮಹಿಳೆಯೊಬ್ಬರು ಮತದಾನ ಮಾಡಿದ್ದಾರೆ. ತಮ್ಮ ಪತಿಯ ಆಸೆಯಂತೆ ಅವರು ಮತದಾನ ಮಾಡಿದ್ದರ ಬಗ್ಗೆ ತೀರ್ಥಹಳ್ಳಿಯಿಂದ ವರದಿಯಾಗಿದೆ.
ತೀರ್ಥಹಳ್ಳಿ ತಾಲ್ಲೂಕು ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ವಾಪ್ತಿಯ ಆಡುಗೋಡಿನ ನಿವಾಸಿ ಕಲಾವತಿ ವೆಂಕಟೇಶ್ ರವರ ಪತಿ ಮಂಗಳೂರು ವೆನ್ಲಾಕ್ಆಸ್ಪತ್ರೆಯಲ್ಲಿ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮತದಾನದ ದಿನವೇ ಸಾವನ್ನಪ್ಪಿದ್ದಾರೆ.
ಈ ಸುದ್ದಿ ತಿಳಿಯುತ್ತಲೇ ಪತ್ನಿ ಕಲಾವತಿ ಮಂಗಳೂರಿಗೆ ಹೊರಟಿದ್ದರು. ಅದಕ್ಕೂ ಮೊದಲು ಅವರು ತಮ್ಮ ಮತಗಟ್ಟೆಗೆ ಬಂದು ವೋಟು ಹಾಕಿ ಪತಿಯ ಅಂತಿಮ ದರ್ಶನಕ್ಕೆ ಹೊರಟಿದ್ದಾರೆ.