![](https://www.chandravallinews.com/wp-content/uploads/2024/06/WhatsApp-Image-2024-06-10-at-4.29.31-AM.jpeg)
i
ಮೋದಿ ಸೇರಿ 72 ಮಂದಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ…
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಪ್ರಧಾನಿ ನರೇಂದ್ರ ಮೋದಿಯವರು ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 2024ರ ಜೂನ್-9ರಂದು ಭಾನುವಾರ ರಾತ್ರಿ 7.15ಕ್ಕೆ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನರೇಂದ್ರ ಮೋದಿ ಅವರಿಗೆ ಗೌಪ್ಯತೆ ಭೋದಿಸಿದರು.
ಪ್ರಧಾನಿ ಮೋದಿ ಅವರ ಜೊತೆಯಲ್ಲಿ ಇತರೆ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.
ಕಳೆದ ಎರಡು ಅವಧಿಯಲ್ಲಿ ಸ್ಪಷ್ಟ ಬಹುಮತ ಪಡೆದು ಪ್ರಧಾನಿ ಹುದ್ದೆಗೇರಿದ್ದ ನರೇಂದ್ರ ಮೋದಿ ಅವರು 3ನೇ ಬಾರಿಗೆ ಅಧಿಕಾರ ಗದ್ದುಗೆ ಹಿಡಿಯಲು ಬಿಜೆಪಿಗೆ ಸ್ಪಷ್ಟ ಬಹುಮತ ಬಾರದ ಕಾರಣ ಟಿಡಿಪಿ, ಜೆಡಿಯು ಸೇರಿದಂತೆ ಎನ್ ಡಿಎ ಮೈತ್ರಿ ಕೂಟದ ಹಲವು ಪಕ್ಷಗಳು ಸಾಥ್ ನೀಡಿವೆ.
ಜೀವನ ಚರಿತ್ರೆ-
ನರೇಂದ್ರ ದಾಮೋದರದಾಸ್ ಮೋದಿ ಅವರು 17 ಸೆಪ್ಟೆಂಬರ್-1950 ರಂದು ಬಾಂಬೆ ರಾಜ್ಯದ ಮೆಹ್ಸಾನಾ ಜಿಲ್ಲೆಯ ವಡ್ನಗರದಲ್ಲಿ ಗುಜರಾತಿ ಹಿಂದೂ ಕುಟುಂಬದಲ್ಲಿ ಜನಿಸಿದರು . ಅವರು ದಾಮೋದರದಾಸ್ ಮುಲ್ಚಂದ್ ಮೋದಿ ಮತ್ತು ಹೀರಾಬೆನ್ ಮೋದಿ ಅವರಿಗೆ ಜನಿಸಿದ ಆರು ಮಕ್ಕಳಲ್ಲಿ ಮೂರನೆಯವರು ಮೋದಿ.
ವಡ್ನಗರ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ಮೋದಿ ಅವರ ತಂದೆಯವರು ಚಹಾ ವ್ಯಾಪಾರ ಮಾಡುತ್ತಿದ್ದು ಮೋದಿ ಅವರು ಬಾಲ್ಯದಲ್ಲಿ ತಂದೆಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.
ಮೋದಿಯವರು 1967 ರಲ್ಲಿ ವಡ್ನಗರದಲ್ಲಿ ತಮ್ಮ ಉನ್ನತ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದರು. ಅವರ ಶಿಕ್ಷಕರು ಅವರನ್ನು ಸರಾಸರಿ ವಿದ್ಯಾರ್ಥಿ ಮತ್ತು ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವ ತೀಕ್ಷ್ಣ, ಪ್ರತಿಭಾನ್ವಿತ ಚರ್ಚಾಸ್ಪರ್ಧಿ ಎಂದು ಬಣ್ಣಿಸಿದರು. ರಾಜಕೀಯ ಪ್ರವೇಶ ಮಾಡಲು ಪ್ರಭಾವ ಬೀರಿತು.
ಮೋದಿಗೆ ಎಂಟು ವರ್ಷದ ಬಾಲಕನಾಗಿದ್ದಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್ಎಸ್ಎಸ್) ಪರಿಚಯಿಸಲಾಯಿತು. ಸ್ಥಳೀಯ ಶಾಖಾಗಳಿಂದ ನೀಡಲಾಗುತ್ತಿದ್ದ ತರಬೇತಿಗೆ ಹಾಜರಾಗುತ್ತಿದ್ದರು. ನಂತರ ಮೋದಿ ಅವರನ್ನು ಆರ್ಎಸ್ಎಸ್ನಲ್ಲಿ ಬಾಲ ಸ್ವಯಂಸೇವಕ (ಜೂನಿಯರ್ ಕೆಡೆಟ್) ಆಗಿ ಸೇರಿಸಿಕೊಂಡರು. ಮೋದಿ RSS ನೊಂದಿಗೆ ತರಬೇತಿ ಪಡೆಯುತ್ತಿರುವಾಗ, ಅವರು 1980 ರಲ್ಲಿ ಬಿಜೆಪಿಯ ಗುಜರಾತ್ ಘಟಕವನ್ನು ಸ್ಥಾಪಿಸಲು ಸಹಾಯ ಮಾಡಿದ ಭಾರತೀಯ ಜನಸಂಘದ ನಾಯಕರಾದ ವಸಂತ ಗಜೇಂದ್ರಗಡಕರ್ ಮತ್ತು ನತಲಾಲ್ ಜಗ್ದಾ ಅವರನ್ನು ಭೇಟಿ ಮಾಡಿ ರಾಜಕೀಯ ಪ್ರವೇಶಕ್ಕೆ ವೇದಿಕೆ ಮಾಡಿಕೊಂಡರು.
ನರೇಂದ್ರ ಮೋದಿಯವರ ಕುಟುಂಬವು ಜಶೋದಾ ಬೆನ್ ಚಿಮನ್ಲಾಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿತು. ಮೋದಿ 17 ವರ್ಷ ಇದ್ದಾಗ ವಿವಾಹ ಮಾಡಿಕೊಂಡರು. ಮದುವೆ ಮಾಡಿಕೊಂಡ ತರುವಾಯ ಶೀಘ್ರದಲ್ಲೇ, ಮೋದಿ ಅವರು ತಮ್ಮ ಹೆಂಡತಿಯನ್ನು ತೊರೆದರಲ್ಲದೆ ಮನೆ ಬಿಟ್ಟರು. ದಂಪತಿಗಳು ಎಂದಿಗೂ ವಿಚ್ಛೇದನ ಪಡೆಯಲಿಲ್ಲ ಆದರೆ ಮದುವೆಯು ಹಲವು ದಶಕಗಳವರೆಗೆ ಅವರ ಸಾರ್ವಜನಿಕ ಹೇಳಿಕೆಗಳಲ್ಲಿ ಇರಲಿಲ್ಲ. ಏಪ್ರಿಲ್-2014ರಲ್ಲಿ ಮೋದಿ ಅವರು ವಿವಾಹಿತರು ಮತ್ತು ಅವರ ಸಂಗಾತಿ ಜಶೋದಾಬೆನ್ ಎಂದು ಸಾರ್ವಜನಿಕವಾಗಿ ದೃಢಪಡಿಸಿದರು.
ಮೋದಿ ಅವರು ಮುಂದಿನ ಎರಡು ವರ್ಷಗಳ ಕಾಲ ಉತ್ತರ ಮತ್ತು ಈಶಾನ್ಯ ಭಾರತದಾದ್ಯಂತ ಪ್ರವಾಸ ಮಾಡಿದರು. ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ಹಿಂದೂ ಆಶ್ರಮಗಳಿಗೆ ಭೇಟಿ ನೀಡುವುದನ್ನು ಮರೆಯುತ್ತಿರಲಿಲ್ಲ. ಕೋಲ್ಕತ್ತಾ ಬಳಿಯ ಬೇಲೂರು ಮಠ , ಅಲ್ಮೋರಾದ ಅದ್ವೈತ ಆಶ್ರಮ ಮತ್ತು ರಾಜ್ಕೋಟ್ನಲ್ಲಿರುವ ರಾಮಕೃಷ್ಣ ಮಿಷನ್ ಹೀಗೆ ಆಶ್ರಮದಲ್ಲಿ ಅವರು ವಾಸ್ತವ್ಯ ಮಾಡುತ್ತಿದ್ದರು. ವಿವೇಕಾನಂದರು ಮೋದಿಯವರ ಜೀವನದಲ್ಲಿ ದೊಡ್ಡ ಪ್ರಭಾವ ಬೀರಿದ್ದಾರೆ.
1968ರ ಮಧ್ಯದಲ್ಲಿ, ಮೋದಿ ಅವರು ಬೇಲೂರು ಮಠವನ್ನು ತಲುಪಿದರು ಆದರೆ ಬಹುಬೇಗ ಹಿಂತಿರುಗಿದರು. ನಂತರ ಕಲ್ಕತ್ತಾ , ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗೆ ಭೇಟಿ ನೀಡಿದರು. ಅಲ್ಮೋರಾದ ರಾಮಕೃಷ್ಣ ಆಶ್ರಮಕ್ಕೆ ಹೋದರು. ಅಲ್ಲಿ ಅವರು ಮತ್ತೆ ತಿರಸ್ಕರಿಸಲ್ಪಟ್ಟರು. 1968 ರಿಂದ 1969 ರಲ್ಲಿ ದೆಹಲಿ ಮತ್ತು ರಾಜಸ್ಥಾನದ ಮೂಲಕ ಗುಜರಾತ್ಗೆ ಹಿಂದಿರುಗುವ ಮೊದಲು 1969 ರ ಕೊನೆಯಲ್ಲಿ ಅಥವಾ 1970 ರ ಆರಂಭದಲ್ಲಿ, ಅವರು ಅಹಮದಾಬಾದ್ಗೆ ತೆರಳುವ ಮೊದಲು ಭೇಟಿಗಾಗಿ ವಡ್ನಗರಕ್ಕೆ ಮರಳಿದರು. ಅಲ್ಲಿ ಅವರು ತಮ್ಮ ಚಿಕ್ಕಪ್ಪನೊಂದಿಗೆ ವಾಸಿಸುತ್ತಿದ್ದರು ಮತ್ತು ಗುಜರಾತ್ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಅವರ ಚಿಕ್ಕಪ್ಪನ ಕ್ಯಾಂಟೀನ್ನಲ್ಲಿ ಕೆಲಸ ಮಾಡಿದರು.
ಅಹಮದಾಬಾದ್ ನಗರದ ಹೆಡ್ಗೆವಾರ್ ಭವನದಲ್ಲಿ (ಆರ್ಎಸ್ಎಸ್ ಪ್ರಧಾನ ಕಚೇರಿ) ನೆಲೆಸಿದ್ದ ಇನಾಮದಾರ್ ಅವರೊಂದಿಗೆ ಮೋದಿ ತಮ್ಮ ಪರಿಚಯ ಮಾಡಿಕೊಂಡರು. ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಹೋರಾಡಲು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ದೆಹಲಿಯಲ್ಲಿ ಜನಸಂಘದ ಸತ್ಯಾಗ್ರಹವನ್ನು 1971 ರಲ್ಲಿ ಸೇರಿದಾಗ ಮೋದಿಯವರ ಮೊದಲ ರಾಜಕೀಯ ಚಟುವಟಿಕೆ ಆರಂಭವಾದವು. ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರವು ಮುಕ್ತಿ ಬಾಹಿನಿಗೆ ಬಹಿರಂಗ ಬೆಂಬಲವನ್ನು ನಿಷೇಧಿಸಿತು ; ಮೋದಿಯವರ ಪ್ರಕಾರ, ಅವರನ್ನು ತಿಹಾರ್ ಜೈಲಿನಲ್ಲಿ ಸ್ವಲ್ಪ ಕಾಲ ಇರಿಸಲಾಗಿತ್ತು . ಇಂಡೋ-ಪಾಕಿಸ್ತಾನಿ ಯುದ್ಧದ ನಂತರ, ಮೋದಿಯವರು ತಮ್ಮ ಚಿಕ್ಕಪ್ಪನ ಉದ್ಯೋಗ ತೊರೆದರು ಮತ್ತು ಇನಾಮದಾರ್ ಅವರ ಅಡಿಯಲ್ಲಿ ಕೆಲಸ ಮಾಡುವ RSSಗೆ ಪೂರ್ಣಾವಧಿಯ ಪ್ರಚಾರಕರಾದರು. ಮೋದಿ ಅವರು ಭಾರತ ಸರ್ಕಾರದ ವಿರುದ್ಧ ನವದೆಹಲಿಯಲ್ಲಿ ನಡೆದ ಅಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಅದಕ್ಕಾಗಿ ಅವರನ್ನು ಬಂಧಿಸಲಾಯಿತು. ಈ ಬಂಧನದಿಂದಾಗಿ ಇನಾಮದಾರ್ ಮೋದಿಗೆ ಮಾರ್ಗದರ್ಶನ ನೀಡಲು ನಿರ್ಧರಿಸಿದರು. ಮೋದಿಯವರ ಪ್ರಕಾರ, ಅವರು ರಾಜಕೀಯ ಯುದ್ಧಕ್ಕೆ ಕಾರಣವಾದ ಸತ್ಯಾಗ್ರಹದ ಭಾಗವಾಗಿದ್ದರು.
1978ರಲ್ಲಿ, ಮೋದಿ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಸ್ಕೂಲ್ ಆಫ್ ಓಪನ್ ಲರ್ನಿಂಗ್ ನಿಂದ ರಾಜಕೀಯ ವಿಜ್ಞಾನದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ (BA) ಪದವಿ ಪಡೆದರು. ಗುಜರಾತ್ ವಿಶ್ವವಿದ್ಯಾನಿಲಯದಿಂದ ರಾಜಕೀಯ ವಿಜ್ಞಾನದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ (MA) ಪದವಿ ಪಡೆದರು. ಬಾಹ್ಯ ದೂರಶಿಕ್ಷಣ ವಿದ್ಯಾರ್ಥಿಯಾಗಿ ಪ್ರಥಮ ದರ್ಜೆಯೊಂದಿಗೆ ಪದವಿ ಪಡೆದರು.
ಜೂನ್ 1975 ರಲ್ಲಿ, ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು. ತುರ್ತು ಪರಿಸ್ಥಿತಿ 1977 ರವರೆಗೆ ಇತ್ತು. ಈ ಅವಧಿಯಲ್ಲಿ ಅನೇಕ ರಾಜಕೀಯ ವಿರೋಧಿಗಳನ್ನು ಜೈಲಿಗೆ ಹಾಕಲಾಯಿತು ಮತ್ತು ವಿರೋಧ ಗುಂಪುಗಳನ್ನು ನಿಷೇಧಿಸಲಾಯಿತು. ಮೋದಿಯವರು “ಗುಜರಾತ್ ಲೋಕ ಸಂಘರ್ಷ ಸಮಿತಿ”ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಇದು ಗುಜರಾತ್ನಲ್ಲಿ ತುರ್ತು ಪರಿಸ್ಥಿತಿಗೆ ವಿರೋಧವನ್ನು ಸಂಘಟಿಸುವ RSS ಸಮಿತಿಯಾಗಿದೆ. ಸ್ವಲ್ಪ ಸಮಯದ ನಂತರ, ಆರ್ಎಸ್ಎಸ್ ಅನ್ನು ನಿಷೇಧಿಸಲಾಯಿತು. ಮೋದಿಯವರು ಗುಜರಾತಿನಲ್ಲಿ ಭೂಗತರಾಗುವಂತೆ ಒತ್ತಾಯಿಸಲ್ಪಟ್ಟರು ಮತ್ತು ಬಂಧನವನ್ನು ತಪ್ಪಿಸಲು ಆಗಾಗ್ಗೆ ಮಾರುವೇಷದಲ್ಲಿ ಪ್ರಯಾಣಿಸುತ್ತಿದ್ದರು. ಒಮ್ಮೆ ಸನ್ಯಾಸಿಯಂತೆ ಮತ್ತು ಒಮ್ಮೆ ಸಿಖ್ಖರಂತೆ ವೇಷ ಧರಿಸಿದ್ದರು. ಅವರು ಸರ್ಕಾರವನ್ನು ವಿರೋಧಿಸುವ ಕರಪತ್ರಗಳ ಮುದ್ರಣದಲ್ಲಿ ತೊಡಗಿಸಿಕೊಂಡರು. ಅವುಗಳನ್ನು ದೆಹಲಿಗೆ ಕಳುಹಿಸಿದರು ಮತ್ತು ಪ್ರದರ್ಶನಗಳನ್ನು ಆಯೋಜಿಸಿದರು.
ಮೋದಿ ಅವರು 1978 ರಲ್ಲಿ ಆರ್ಎಸ್ಎಸ್ ಸಂಭಾಗ್ ಪ್ರಚಾರಕ್ (ಪ್ರಾದೇಶಿಕ ಸಂಘಟಕರು) ಆದರು. ಸೂರತ್ ಮತ್ತು ವಡೋದರದಲ್ಲಿ ಚಟುವಟಿಕೆಗಳ ಮೇಲ್ವಿಚಾರಣೆ ಮಾಡಿದರು. ಮತ್ತು 1979 ರಲ್ಲಿ ಅವರು ದೆಹಲಿಯಲ್ಲಿ ಆರ್ಎಸ್ಎಸ್ಗೆ ಕೆಲಸ ಮಾಡಲು ಹೋದರು. ಅಲ್ಲಿ ಅವರು ಆರ್ಎಸ್ಎಸ್ನ ತುರ್ತು ಪರಿಸ್ಥಿತಿಯ ಇತಿಹಾಸವನ್ನು ಸಂಶೋಧಿಸಿ ಬರೆದರು. ಸ್ವಲ್ಪ ಸಮಯದ ನಂತರ, ಅವರು ಗುಜರಾತ್ಗೆ ಮರಳಿದರು ಮತ್ತು 1985 ರಲ್ಲಿ ಆರ್ಎಸ್ಎಸ್ ಅವರನ್ನು ಬಿಜೆಪಿಗೆ ನಿಯೋಜಿಸಿತು. 1987 ರಲ್ಲಿ, ಅಹಮದಾಬಾದ್ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರವನ್ನು ಸಂಘಟಿಸಲು ಮೋದಿ ಸಹಾಯ ಮಾಡಿದರು. ಪಕ್ಷವು ಆರಾಮವಾಗಿ ಗೆದ್ದಿತು. ಮೋದಿಯವರ ಯೋಜನೆಯು ಗೆಲುವಿಗೆ ಕಾರಣವಾಯಿತು.
ಎಲ್.ಕೆ.ಅಡ್ವಾಣಿ 1986ರಲ್ಲಿ ಬಿಜೆಪಿಯ ಅಧ್ಯಕ್ಷರಾದ ನಂತರ , RSS ತನ್ನ ಸದಸ್ಯರನ್ನು ಪಕ್ಷದೊಳಗೆ ಪ್ರಮುಖ ಸ್ಥಾನಗಳಲ್ಲಿ ಇರಿಸಲು ನಿರ್ಧರಿಸಿತು. ಮೋದಿಯವರು 1987ರಲ್ಲಿ ಬಿಜೆಪಿಯ ಗುಜರಾತ್ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಮೋದಿಯವರು ಪಕ್ಷದೊಳಗೆ ಬೆಳೆದರು ಮತ್ತು 1990 ರಲ್ಲಿ ಅದರ ರಾಷ್ಟ್ರೀಯ ಚುನಾವಣಾ ಸಮಿತಿಯ ಸದಸ್ಯರಾಗಿ ಹೆಸರಿಸಲ್ಪಟ್ಟರು. 1990 ರಲ್ಲಿ ಅಡ್ವಾಣಿಯವರ ರಾಮ ರಥ ಯಾತ್ರೆ ಮತ್ತು ಮುರಳಿ ಮನೋಹರ್ ಜೋಶಿಯವರ 1991-1992 ಏಕತಾ ಯಾತ್ರೆ ಸಂಘಟಿಸಲು ಸಹಾಯ ಮಾಡಿದರು. 1994ರಲ್ಲಿ ಮೋದಿ ಚುನಾವಣಾ ರಾಜಕೀಯಕ್ಕೆ ಮರಳಿದರು. ಭಾಗಶಃ ಅಡ್ವಾಣಿಯವರ ಒತ್ತಾಯದ ಮೇರೆಗೆ ಪಕ್ಷದ ಕಾರ್ಯದರ್ಶಿಯಾಗಿ 1995ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಮೋದಿಯವರ ಚುನಾವಣಾ ತಂತ್ರಗಾರಿಕೆ ಕೆಲಸ ಮಾಡಿತು. ಆ ವರ್ಷದ ನವೆಂಬರ್ನಲ್ಲಿ, ಮೋದಿ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು ಮತ್ತು ನವದೆಹಲಿಗೆ ವರ್ಗಾಯಿಸಲಾಯಿತು. ಅಲ್ಲಿ ಅವರು ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಪಕ್ಷದ ಚಟುವಟಿಕೆಗಳ ಜವಾಬ್ದಾರಿ ವಹಿಸಿಕೊಂಡರು. ಗುಜರಾತ್ನ ಪ್ರಮುಖ ಬಿಜೆಪಿ ನಾಯಕರಾದ ಶಂಕರಸಿನ್ಹ ವಘೇಲಾ ಅವರು ಲೋಕಸಭೆ ಚುನಾವಣೆಯಲ್ಲಿ ತಮ್ಮ ಸಂಸದೀಯ ಸ್ಥಾನವನ್ನು ಕಳೆದುಕೊಂಡ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂಗ್ರೆಸ್) ಗೆ ಪಕ್ಷಾಂತರಗೊಂಡರು. 1998ರ ಗುಜರಾತ್ ವಿಧಾನಸಭೆ ಚುನಾವಣೆಗೆ ಆಯ್ಕೆ ಸಮಿತಿಯಲ್ಲಿದ್ದ ಮೋದಿ, ಪಕ್ಷದಲ್ಲಿನ ಗುಂಪು ವಿಭಜನೆ ಕೊನೆಗೊಳಿಸಲು ವಘೇಲಾ ಅವರನ್ನು ಬೆಂಬಲಿಸುವವರಿಗಿಂತ ಬಿಜೆಪಿ ನಾಯಕ ಕೇಶುಭಾಯಿ ಪಟೇಲ್ ಅವರ ಬೆಂಬಲಿಗರನ್ನು ಬೆಂಬಲಿಸಿದರು. 1998ರ ಚುನಾವಣೆಯಲ್ಲಿ ಬಿಜೆಪಿ ಒಟ್ಟಾರೆ ಬಹುಮತ ಗಳಿಸಲು ಮೋದಿ ತಂತ್ರಗಾರಿಕೆ ಮಾಡಿದರು.
ಗುಜರಾತ್ ಮುಖ್ಯಮಂತ್ರಿ-(2001–2014)
2001ರಲ್ಲಿ ಕೇಶುಭಾಯಿ ಪಟೇಲ್ ಅವರ ಆರೋಗ್ಯ ಕೈಕೊಟ್ಟಿತು. 2001ರಲ್ಲಿ ಭುಜ್ನಲ್ಲಿ ಸಂಭವಿಸಿದ ಭೂಕಂಪವನ್ನು ಅವರ ಆಡಳಿತವು ನಿಭಾಯಿಸುವ ಮೂಲಕ ಪಟೇಲ್ ಅವರ ಸ್ಥಾನಮಾನಕ್ಕೆ ಹಾನಿಯಾಯಿತು. ಬಿಜೆಪಿ ರಾಷ್ಟ್ರೀಯ ನಾಯಕತ್ವವು ಮುಖ್ಯಮಂತ್ರಿ ಸ್ಥಾನಕ್ಕೆ ಹೊಸ ಅಭ್ಯರ್ಥಿ ಹುಡುಕಿತು ಮತ್ತು ಪಟೇಲ್ ಅವರ ಆಡಳಿತದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ ಮೋದಿ ಅವರನ್ನು ಬದಲಿಯಾಗಿ ಆಯ್ಕೆ ಮಾಡಲಾಯಿತು. ಅಡ್ವಾಣಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರಿಗೆ “ಗುಜರಾತ್ನ ಸಂಪೂರ್ಣ ಹೊಣೆಗಾರಿಕೆಯನ್ನು ನಾನು ಹೊರುತ್ತೇನೆ ಅಥವಾ ಇಲ್ಲ” ಎಂದು ಹೇಳುವ ಮೂಲಕ ಪಟೇಲ್ ಅವರ ಉಪಮುಖ್ಯಮಂತ್ರಿ ಆಗುವ ಪ್ರಸ್ತಾಪವನ್ನು ಮೋದಿ ನಿರಾಕರಿಸಿದರು. ಅಕ್ಟೋಬರ್ 7 ರಂದು ಮೋದಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 24 ಫೆಬ್ರವರಿ 2002 ರಂದು ರಾಜ್ಕೋಟ್- II ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಜಯಗಳಿಸಿ , INCಯ ಅಶ್ವಿನ್ ಮೆಹ್ತಾ ಅವರನ್ನು ಸೋಲಿಸಿದ ನಂತರ ಗುಜರಾತ್ ರಾಜ್ಯ ಶಾಸಕಾಂಗವನ್ನು ಪ್ರವೇಶಿಸಿ 2014ರ ತನಕ ಗುಜರಾತು ಮುಖ್ಯಮಂತ್ರಿಯಾಗಿ ಸೇವೆ ಮಾಡಿದರು.
ಬಾಕ್ಸ್-
7.15ಕ್ಕೆ ರಾಷ್ಟ್ರಪತಿ ಭವನಕ್ಕೆ ಮೋದಿ ಆಗಮನ
7.16ಕ್ಕೆ ಉಪ ರಾಷ್ಟ್ರಪತಿ ಆಗಮನ
7.20ಕ್ಕೆ ರಾಷ್ಟ್ರಪತಿ ಆಗಮನ
7.22ಕ್ಕೆ ರಾಷ್ಟ್ರ ಗೀತೆ
7.24ಕ್ಕೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ
7.26ಕ್ಕೆ ಪ್ರಧಾನಮಂತ್ರಿಯಾಗಿ ಸಹಿ ಮಾಡಿದ ಮೋದಿ.
ರಾತ್ರಿ 7.15 ರಿಂದ ಆರಂಭವಾಗಿ 9.50 ಕ್ಕೆ ಪ್ರಮಾಣ ವಚನ ಕಾರ್ಯಕ್ರಮ ಪೂರ್ಣಗೊಂಡಿತು.
ಕ್ಯಾಬಿನೇಟ್ ಮಂತ್ರಿಗಳ ಪ್ರಮಾಣ ವಚನ-
ನರೇಂದ್ರ ಮೋದಿ ನಂತರ ರಾಜನಾಥ್ ಸಿಂಗ್ ಅವರು 2ನೇಯವರಾಗಿ ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 3ನೇಯವರಾಗಿ ಅಮಿತ್ ಅನಿಲ್ ಚಂದ್ ಶಾ (ಅಮಿತ್ ಶಾ) ಅವರು ಈಶ್ವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 4ನೇಯವರಾಗಿ ನಿತಿನ್ ಜಯರಾಂ ಗಡ್ಕರಿ ಅವರು ಈಶ್ವರ ಮತ್ತು ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 5ನೇಯವರಾಗಿ ಜಗದ್ ಪ್ರಕಾಶ್ ನಡ್ಡಾ (ಜೆ.ಪಿ.ನಡ್ಡಾ) ಅವರ ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 6ನೇಯವರಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 7ನೇಯವರಾಗಿ ನಿರ್ಮಲಾ ಸೀತಾರಾಮನ್ ಅವರು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇವರು ಸಹ ಕರ್ನಾಟಕ ರಾಜ್ಯ ಸೇರಲಿದ್ದಾರೆ. 8ನೇಯವರಾಗಿ ಸುಬ್ರಮಣ್ಯ ಜೈ ಶಂಕರ್ ಅವರು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 9ನೇಯವರಾಗಿ ಮನೋಹರ್ ಲಾಲ್ ಖಟ್ಟರ್ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 10ನೇಯವರಾಗಿ ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ (ಹೆಚ್.ಡಿ.ಕುಮಾರಸ್ವಾಮಿ) ಅವರು ದೇವರ ಹೆಸರಲ್ಲಿ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
11ನೇಯವರಾಗಿ ಪಿಯೂಷ್ ಜಯಪ್ರಕಾಶ್ ಗೋಯಲ್(ಪಿಯೂಷ್ ಗೋಯಲ್) ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 12ನೇಯವರಾಗಿ ಧರ್ಮೇಂದ್ರ ಪ್ರಧಾನ್ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 13ನೇಯವರಾಗಿ ಜಿತನ್ ರಾಮ್ ಮಾಂಜಿ ಅವರು ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 14ನೇಯವರಾಗಿ ರಾಜೀವ್ ಲಲ್ಲನ್ ಸಿಂಗ್ ಅವರು ಸತ್ಯ ನಿಷ್ಠೆಯ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 15ನೇಯವರಾಗಿ ಸರ್ವಾನಂದ ಸೋನೊವಾಲ್ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 16ನೇಯವರಾಗಿ ಡಾ.ವೀರೇಂದ್ರ ಕುಮಾರ್ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 17ನೇಯವರಾಗಿ ರಾಮ್ ಮೋಹನ್ ನಾಯ್ಡು ಅವರು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 18ನೇಯವರಾಗಿ ಪ್ರಹ್ಲಾದ್ ಜೋಶಿ ಅವರು ದೇವರ ಹೆಸರಲ್ಲಿ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 19ನೇಯವರಾಗಿ ಜುಯಲ್ ಓರಾಮ್ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 20ನೇಯವರಾಗಿ ಗಿರಿರಾಜ್ ಸಿಂಗ್ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 21ನೇಯವರಾಗಿ ಅಶ್ವಿನಿ ವೈಷ್ಣವ್ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 22ನೇಯವರಾಗಿ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 23ನೇಯವರಾಗಿ ಭೂಪೇಂದ್ರ ಯಾದವ್ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 24ನೇಯವರಾಗಿ ಗಜೇಂದ್ರ ಸಿಂಗ್ ಶೇಖಾವತ್ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 25ನೇಯವರಾಗಿ ಅನ್ನಪೂರ್ಣ ದೇವಿ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 26ನೇಯವರಾಗಿ ಕಿರಣ್ ರಿಜಿಜು ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 27ನೇಯವರಾಗಿ ಹರಿದೀಪ್ ಸಿಂಗ್ ಪೂರಿ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 28 ನೇಯವರಾಗಿ ಡಾ.ಮನ್ಸುಖ್ ಮಾಂಡವೀಯ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 29ನೇಯವರಾಗಿ ಜಿ.ಕಿಶನ್ ರೆಡ್ಡಿ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 30ನೇಯವರಾಗಿ ಚಿರಾಗ್ ಪಾಸ್ವಾನ್ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 31ನೇಯವರಾಗಿ ಸಿ.ಆರ್.ಪಾಟೀಲ್ ಅವರು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 32ನೇಯವರಾಗಿ ರಾವ್ ಇಂದ್ರಜಿತ್ ಸಿಂಗ್ ಅವರು ದೇವರ ಹೆಸರಲ್ಲಿ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 33ನೇಯವರಾಗಿ ಡಾ.ಜಿತೇಂದ್ರ ಸಿಂಗ್ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 34ನೇಯವರಾಗಿ ಅರ್ಜುನ್ ರಾಮ್ ಮೇಘವಾಲ್ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 35ನೇಯವರಾಗಿ ಪ್ರತಾಪ್ ರಾವ್ ಗಣಪತ್ ರಾವ್ ಜಾಧವ್ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 36ನೇಯವರಾಗಿ ಜಯಂತ್ ಚೌಧರಿ ಅವರು ದೇವರ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 37ನೇಯವರಾಗಿ ಜಿತಿನ್ ಪ್ರಸಾದ್ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 38ನೇಯವರಾಗಿ ಶ್ರೀಪಾದ್ ನಾಯಕ್ ಅವರು ದೇವರ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 39ನೇಯವರಾಗಿ ಪಂಕಜ್ ಚೌಧರಿ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 40ನೇಯವರಾಗಿ ಕೃಷ್ಣ ಪಾಲ್ ಗುರ್ಜರ್ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 41ನೇಯವರಾಗಿ ರಾಮ್ ದಾಸ್ ಅಠಾವಳೆ ಅವರು ಸತ್ಯ ನಿಷ್ಠೆಯ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 42ನೇಯವರಾಗಿ ರಾಮ್ ನಾಥ್ ಠಾಕೂರ್ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 43ನೇಯವರಾಗಿ ನಿತ್ಯಾನಂದ್ ರಾಯ್ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 44ನೇಯವರಾಗಿ ಅನುಪ್ರಿಯಾ ಪಟೇಲ್ ಅವರು ದೇವರ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 45ನೇಯವರಾಗಿ ವಿ.ಸೋಮಣ್ಣ ಅವರು ದೇವರ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಆಂಗ್ಲ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 46ನೇಯವರಾಗಿ ಡಾ.ಚಂದ್ರಶೇಖರ್ ಅವರು ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 47ನೇಯವರಾಗಿ ಪ್ರೊ.ಎಸ್.ಪಿ.ಸಿಂಗ್ ಬಘೇಲ್ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 48ನೇಯವರಾಗಿ ಶೋಭಾ ಕರಂದ್ಲಾಜೆ ಅವರು ಈಶ್ವರನ ಹೆಸರಲ್ಲಿ ಮತ್ತು ಹಿಂದಿ ಭಾಷೆಯಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 49ನೇಯವರಾಗಿ ಕೀರ್ತಿ ವರ್ಧನ್ ಸಿಂಗ್ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 50ನೇಯವರಾಗಿ ಬಿ.ಎಲ್.ವರ್ಮಾ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 51ನೇಯವರಾಗಿ ಶಾಂತನು ಠಾಕೂರ್ ಅವರು ದೇವರ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 52ನೇಯವರಾಗಿ ಸುರೇಶ್ ಗೋಪಿ ಅವರು ದೇವರ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 53ನೇಯವರಾಗಿ ಡಾ.ಎಲ್.ಮುರುಗನ್ ಅವರು ದೇವರ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 54ನೇಯವರಾಗಿ ಅಜಯ್ ತಮಟ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 55ನೇಯವರಾಗಿ ಬಂಡಿ ಸಂಜಯ್ ಕುಮಾರ್ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 56ನೇಯವರಾಗಿ ಕಮಲೇಶ್ ಪಾಸ್ವಾನ್ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 57ನೇಯವರಾಗಿ ಭಾಗಿರಥ ಚೌಧರಿ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 58ನೇಯವರಾಗಿ ಸತೀಶ್ ಚಂದ್ರ ದುಬೆ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 59ನೇಯವರಾಗಿ ಸಂಜಯ್ ಸೇಠ್ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 60ನೇಯವರಾಗಿ ರವನಿತ್ ಸಿಂಗ್ ಅವರು ದೇವರ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 61ನೇಯವರಾಗಿ ದುರ್ಗಾದಾಸ್ ಯು.ಕೆ. ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 62ನೇಯವರಾಗಿ ರಕ್ಷಾ ಖಡ್ಸೆ ಅವರು ದೇವರ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 63 ನೇಯವರಾಗಿ ಸಾವಿತ್ರಿ ಠಾಕೂರ್ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 64ನೇಯವರಾಗಿ ತೋಕನ್ ಸಾಹು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 65ನೇಯವರಾಗಿ ಡಾ.ರಾಜ್ ಭೂಷಣ್ ಚೌಧರಿ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 66ನೇಯವರಾಗಿ ಭೂಪತಿ ರಾಜು ಶ್ರೀನಿವಾಸ್ ವರ್ಮಾ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 67ನೇಯವರಾಗಿ ಹರ್ಷಾ ಮಲ್ಹೋತ್ರ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 68ನೇಯವರಾಗಿ ಜಯಂತಿ ಬಾಯಿ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 69ನೇಯವರಾಗಿ ಮುರುಳೀಧರ್ ಮೋಹನ್ ಅವರು ಈಶ್ವರನ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 70ನೇಯವರಾಗಿ ಜಾರ್ಜ್ ಕುರಿಯನ್ ಅವರು ದೇವರ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 71ನೇಯವರಾಗಿ ಪವಿತ್ರ ಮಾರ್ಗರೇಟ ಅವರು ದೇವರ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
72ನೇಯವರಾಗಿ ಅವರು ದೇವರ ಹೆಸರಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ಪೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಲ್ಲ ಸಚಿವರಿಗೂ ಪ್ರತಿಜ್ಞಾವಿಧಿ ಬೋಧಿಸಿದರು.