i
ಪಡಿತರ ವಿತರಣೆಯಲ್ಲಿ ವಿಳಂಬ ಗ್ರಾಮಸ್ಥರ ಆಕ್ರೋಶ..
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ನನ್ನಿವಾಳ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಬರುವ ಬಂಡೆಹಟ್ಟಿ, ನಕ್ಲೋರಹಟ್ಟಿ, ಚಿಕ್ಕಾಟ್ಲಹಟ್ಟಿ, ರತ್ನಗಿರಿ ಮುಂತಾದವರು ಹಟ್ಟಿಯ ಪಡಿತರಾರರಿಗೆ ಪ್ರತಿತಿಂಗಳು ನಿಯಬದ್ದವಾಗಿ ಯಾವುದೇ ಪಡಿತರ ದೊರಕುತ್ತಿಲ್ಲ. ನ್ಯಾಯಬೆಲೆ ಅಂಗಡಿ ಮಾಲೀಕ ಕೇವಲ ಎರಡು ದಿನ ವಿತರಣೆ ಮಾಡಿ ನಂತರ ಪಡಿತರದಾರರಿಗೆ ಪಡಿತರ ಇಲ್ಲವೆಂದು ಸಬೂಬು ಹೇಳುತ್ತಾನೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿನ ಪ್ರತಿಯೊಂದು ಗ್ರಾಮೀಣ ಭಾಗದ ನ್ಯಾಯಬೆಲೆ ಅಂಗಡಿಯಲ್ಲಿ ತಿಂಗಳ ಮೊಲದ ವಾರವೇ ಪಡಿತರ ತಂದು ವಿತರಣೆ ಮಾಡಲಾಗುತ್ತಿದೆ. ಅದರೆ, ನನ್ನಿವಾಳದಲ್ಲಿ ಯಾವಗ ಪರಿಡಿತ ವಿತರಣೆ ಮಾಡುತ್ತಾ ಎಂಬ ಬಗ್ಗೆ ಮಾಹಿತಿ ಇಲ್ಲ. ನ್ಯಾಯಬೆಲೆ ಅಂಗಡಿ ಮುಂದೆ ಜನರು ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತಾಗ ಇದನ್ನು ನೋಡಿ ಬೇರೆಯವರೂ ಪಡಿತರಕ್ಕೆ ಆಗಮಿಸುತ್ತಾರೆ. ನನ್ನಿವಾಳ ಗ್ರಾಮವೂ ಹೊರತು ಪಡಿಸಿ ಈ ನ್ಯಾಯಬೆಲೆ ಅಂಗಡಿಗೆ ಲಗತ್ತಾಗಿರುವ ಜನರು ಬರುವ ಮುನ್ನವೇ ಪಡಿತರ ಖಾಲಿಯಾಗಿದೆ ಎನ್ನುತ್ತಾರೆ. ಜೂನ್ ತಿಂಗಳ ಪಡಿತರ ಪಡೆಯಲು ಸುತ್ತಮುತ್ತಲ ಹಟ್ಟಿಯ ಜನರು ನ್ಯಾಂiiಬೆಲೆ ಅಂಗಡಿ ಮುಂದೆ ಕಾದುಕುಳಿತಿದ್ದರೂ ಇವರಿಗೆ ಪಡಿತರ ಪಡೆಯುವ ಭಾಗ್ಯ ಒದಗಿ ಬಂದಿಲ್ಲ. ಕಾರಣ, ನ್ಯಾಯಬೆಲೆ ಅಂಗಡಿ ಬೀಗಹಾಕಿದ್ದು ಅಂಗಡಿ ಮುಂಭಾಗದಲ್ಲೇ ಅವರು ಸಾಲುಗಟ್ಟಿ ನಿಂತಿರುತ್ತಾರೆ. ಪಡಿತರಕ್ಕಾಗಿ ಬೆಳಗ್ಗೆ ೪.೩೦ ಗಂಟೆಯಿಂದಲೇ ಕಾಯುತ್ತಿರುವರು ಮನೆಯಲ್ಲಿ ಅಡುಗೆ ಮಾಡದೆ ಉಪವಾಸದಿಂದ ಬಂದಿದ್ದು, ಏನು ಸಿಗದೇ ಇದ್ದಾಗ ಬೆಳಗ್ಗೆಯಿಂದ ಸಂಜೆವರೆಗೂ ಕಾದುಕಾದು ವಾಪಾಸ್ ಹೋಗುತ್ತಾರೆ. ಕೆಲ ಸಂದರ್ಭದಲ್ಲಿ ಹೆಬ್ಬೆಟ್ಟು ಹಾಕಿಸಿಕೊಂಡರೂ ಪಡಿತರ ನೀಡುತ್ತಲ್ಲವೆಂಬುವುದು ಶಿವಮ್ಮ, ಪಾಲಯ್ಯ, ಗೀತಮ್ಮ, ಓಬಯ್ಯ, ಪಾಪಮ್ಮ ಮುಂತಾದವರು ಆರೋಪಿಸಿದ್ದಾರೆ. ಮಾಹಿತಿ ಪಡೆದು ತಹಶೀಲ್ಧಾರ್ ರೇಹಾನ್ಪಾಷ, ಆಹಾರ ಶಿರಸ್ಥೇಧಾರ್ ಶ್ರೀನಿವಾಸ್ಗೆ ಗ್ರಾಮಕ್ಕೆ ಭೇಟಿ ನೀಡಿ ತಪಾಸಣೆ ನಡೆಸುವಂತೆ ಸೂಚಿಸಿದ್ದಾರೆ. ಅಧಿಕಾರಿಗಳು ಬಂದಿದ್ದನ್ನು ತಿಳಿದ ನ್ಯಾಯಬೆಲೆ ಅಂಗಡಿ ಮಾಲೀಕ ಸರ್ವೆ ಸಮಸ್ಯೆಯಿಂದ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಸಬೂಬು ಹೇಳಿದ್ಧಾನೆ. ಬಂಡೆಹಟ್ಟಿ, ನಕ್ಲೋರಹಟ್ಟಿ, ಚಿಕ್ಕಾಟ್ಲಹಟ್ಟಿ, ರತ್ನಗಿರಿ ಮುಂತಾದವರು ಗ್ರಾಮದ ನೂರಾರು ಜನರು ಪ್ರತಿತಿಂಗಳು ಪಡಿತರವಿಲ್ಲದೆ ತೊಂದರೆಗೆ ಗೀಡಾಗಿದ್ಧಾರೆ ಎನ್ನಲಾಗಿದೆ.