Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯೂರು ಉಪ ಚುನಾವಣೆ; ಕುಂಚಿಟಿಗ ಜಾತಿಗೆ ರಾಜಕೀಯ ನ್ಯಾಯ ನೀಡಲು ಹಕ್ಕೊತ್ತಾಯ

Advertisement

ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮುಂಬರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ರಾಜಕೀಯವಾಗಿ ಹಿನ್ನಡೆ ಅನುಭವಿಸಿರುವ
, ಸಾಮಾಜಿಕವಾಗಿ ಹಿಂದುಳಿದಿರುವ ಕುಂಚಿಟಿಗ ಜಾತಿಗೆ ಕಾಂಗ್ರೆಸ್ ವರಿಷ್ಠರು ಟಿಕೆಟ್ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕಾಗಿದೆ.
ಹಿರಿಯೂರು ಕ್ಷೇತ್ರದಲ್ಲಿ ಕುಂಚಿಟಿಗ ಸಮುದಾಯವು ದಶಕಗಳಿಂದಲೂ ರಾಜಕೀಯವಾಗಿ ತುಳಿತಕ್ಕೊಳಗಾಗಿದೆ. ಜನಸಂಖ್ಯೆ ಮತ್ತು ಭೌಗೋಳಿಕವಾಗಿ ಪ್ರಬಲವಾಗಿದ್ದರೂ
, ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಗದೆ ಸಮುದಾಯವು ಹಿಂದುಳಿದಿದೆ ಎನ್ನುವ ಬೇಸರ ವ್ಯಕ್ತವಾಗುತ್ತಿದೆ.

ಕಾಂಗ್ರೆಸ್ ಪಕ್ಷವು ಯಾವಾಗಲೂ ಎಲ್ಲ ವರ್ಗದವರಿಗೂ ಸಮಾನ ಅವಕಾಶಗಳನ್ನು ನೀಡುತ್ತಾ ಬಂದಿದೆ. ಈ ಬಾರಿಯ ಉಪ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಕುಂಚಿಟಿಗ ಸಮುದಾಯದ ಅರ್ಹ ಅಭ್ಯರ್ಥಿಗೆ ಸ್ಪರ್ಧಿಸಲು ಹೈಕಮಾಂಡ್ ಮನ್ನಣೆ ನೀಡಬೇಕು. ಆ ಮೂಲಕ ಕ್ಷೇತ್ರದಲ್ಲಿ ಅರ್ಹರಿಗೆ ಸಾಮಾಜಿಕ ನ್ಯಾಯ ಸಿಗುವಂತೆ ಮಾಡಬೇಕು ಎಂದು ಅವರು ಕಾಂಗ್ರೆಸ್ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾಪ್ರಭುತ್ವದ ಅತಿ ದೊಡ್ಡ ಸೌಂದರ್ಯವಿರುವುದೇ ಸಾಮಾಜಿಕ ನ್ಯಾಯದಲ್ಲಿ. ಆದರೆ, ಸ್ವಾತಂತ್ರ್ಯ ಬಂದು ಇಷ್ಟು ದಶಕಗಳಾದರೂ ಕೆಲವು ಸಮುದಾಯಗಳು ಇಂದಿಗೂ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗಿ, ತೆರೆಯ ಮರೆಯಲ್ಲೇ ಉಳಿದುಹೋಗಿರುವುದು ವಿಷಾದನೀಯ. ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ನಿಲ್ಲುತ್ತದೆ ಹಿರಿಯೂರು ವಿಧಾನಸಭಾ ಕ್ಷೇತ್ರ. ಮುಂಬರುವ ಹಿರಿಯೂರು ಉಪ ಚುನಾವಣೆಯ ಹಿನ್ನೆಲೆಯಲ್ಲಿ, ಕ್ಷೇತ್ರದಲ್ಲಿ ದಶಕಗಳಿಂದ ರಾಜಕೀಯವಾಗಿ ತುಳಿತಕ್ಕೊಳಗಾಗಿರುವ ಹಿಂದುಳಿದ ಕುಂಚಿಟಿಗ ಜಾತಿಗೆ ಕಾಂಗ್ರೆಸ್ ವರಿಷ್ಠರು ಈ ಬಾರಿ ಟಿಕೆಟ್ ನೀಡಬೇಕು. ಆ ಮೂಲಕ ಕ್ಷೇತ್ರಕ್ಕೆ ನಿಜವಾದ ಸಾಮಾಜಿಕ ನ್ಯಾಯ ಒದಗಿಸಬೇಕು. ಕಳೆದ 65-70 ವರ್ಷಗಳಿಂದೆ ಆಲೂರು ವಿ.ಮಸಿಯಪ್ಪ ಇವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದು ಬಿಟ್ಟರೆ ಇಲ್ಲಿಯ ತನಕ ಕುಂಚಿಟಿಗ ಜಾತಿಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಹಾಗಾಗಿ ಕುಂಚಿಟಿಗ ಜಾತಿಯ ಮುಖಂಡರಾದ ಬೇತೂರು ಪಾಳ್ಯ ಜೆ. ರಾಜು, ಆರ್.ಮಂಜುನಾಥ್ ಅಥವಾ ಬಿ.ಹೆಚ್ ಮಂಜುನಾಥ್ ಅವರು ಸೇರಿದಂತೆ ಯಾವುದೇ ಕುಂಚಿಟಿಗ ಜಾತಿ ನಾಯಕರಿಗೆ ಟಿಕೆಟ್ ನೀಡಲಿ ಎನ್ನುವುದು ಬಲವಾಗಿ ಕೇಳಿ ಬರುತ್ತಿರುವ ಹಕ್ಕೊತ್ತಾಯವಾಗಿದೆ.

ಜನಸಂಖ್ಯೆಯಿದ್ದರೂ ಸಿಗದ ಪ್ರಾತಿನಿಧ್ಯ: ರಾಜಕೀಯ ಅನ್ಯಾಯದ ಚಿತ್ರಣ ಹಿರಿಯೂರು ಕ್ಷೇತ್ರದಲ್ಲಿ ಕುಂಚಿಟಿಗ ಸಮುದಾಯವು ನಿರ್ಣಾಯಕ ಸಂಖ್ಯೆಯಲ್ಲಿದೆ. ಕೃಷಿ, ಪಶುಪಾಲನೆಯನ್ನೇ ನಂಬಿ, ಮಣ್ಣಿನ ಮಕ್ಕಳಾಗಿ ಬದುಕುತ್ತಿರುವ ಈ ಸಮುದಾಯಕ್ಕೆ ಮತದಾನದ ಹಕ್ಕು ಚಲಾಯಿಸುವಲ್ಲಿ ಇರುವ ಪ್ರಾಮುಖ್ಯತೆ, ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಿಗುತ್ತಿಲ್ಲ. ಈ ಕುರಿತು ಅಸಮಾಧಾನ ಹೊರಹಾಕಿರುವ ಬೇತೂರು ಪಾಳ್ಯ ಜೆ. ರಾಜು ಅವರು, "ಕ್ಷೇತ್ರದಲ್ಲಿ ಪ್ರಬಲ ಅಸ್ತಿತ್ವ ಹೊಂದಿದ್ದರೂ ಕುಂಚಿಟಿಗ ಸಮುದಾಯವು ರಾಜಕೀಯವಾಗಿ ತೀವ್ರ ತುಳಿತಕ್ಕೊಳಗಾಗಿದೆ. ಕೇವಲ ವೋಟ್ ಬ್ಯಾಂಕ್ ಆಗಿ ಬಳಕೆಯಾಗುತ್ತಿರುವ ಸಮುದಾಯಕ್ಕೆ ಸೂಕ್ತ ರಾಜಕೀಯ ವೇದಿಕೆ ಕಲ್ಪಿಸಿಕೊಡುವುದು ಇಂದಿನ ತುರ್ತು ಅಗತ್ಯವಾಗಿದೆ" ಎಂದು ಮಾರ್ಮಿಕವಾಗಿ ಅವರು ನುಡಿದಿದ್ದಾರೆ.

news_1779147499_0_216.webp

 

news_1779147499_4_239.webp

 

ಕಾಂಗ್ರೆಸ್ ಸಿದ್ಧಾಂತಕ್ಕೆ ಒರೆಗಲ್ಲು: ವರಿಷ್ಠರ ನಡೆ ಎತ್ತ ಕಡೆ?
ಕಾಂಗ್ರೆಸ್ ಪಕ್ಷವು ಯಾವಾಗಲೂ "ಅಹಿಂದ" ಮತ್ತು "ಸಾಮಾಜಿಕ ನ್ಯಾಯ"ದ ಪರವಾಗಿ ಧ್ವನಿ ಎತ್ತುತ್ತಾ ಬಂದಿದೆ.
ಕೊನೆಯ ಸಾಲಿನ ಕೊನೆಯ ವ್ಯಕ್ತಿಗೂ ಅಧಿಕಾರ ಸಿಗಬೇಕುಎಂಬುದು ಪಕ್ಷದ ಆಶಯವಾಗಿದೆ. ಈಗ ಹಿರಿಯೂರು ಉಪ ಚುನಾವಣೆ ಕಾಂಗ್ರೆಸ್ ವರಿಷ್ಠರಿಗೆ ತಮ್ಮ ಸಿದ್ಧಾಂತವನ್ನು ಸಾಬೀತುಪಡಿಸಲು ಬಂದಿರುವ ಸೂಕ್ತ ಅವಕಾಶ.

ಕ್ಷೇತ್ರದಲ್ಲಿ ಸದಾ ಸಕ್ರಿಯವಾಗಿದ್ದು, ಜನರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಾ ಬಂದಿರುವ ಕುಂಚಿಟಿಗ ಸಮುದಾಯದ ಜೆ.ರಾಜು ಬೇತೂರು ಪಾಳ್ಯ ಅವರು ಅರ್ಹ ಅಭ್ಯರ್ಥಿ ಯಾಗಿದ್ದು ಹೈಕಮಾಂಡ್ ಟಿಕೆಟ್ ನೀಡಬೇಕು. ಇದು ಕೇವಲ ಒಂದು ಜಾತಿಗೆ ನೀಡುವ ಅವಕಾಶವಲ್ಲ, ಬದಲಿಗೆ ಇಡೀ ಕ್ಷೇತ್ರದ ಹಿಂದುಳಿದ ವರ್ಗಗಳಲ್ಲಿ ಹೊಸ ರಾಜಕೀಯ ಚೈತನ್ಯ ಮೂಡಿಸುವ ಪ್ರಕ್ರಿಯೆಯಾಗಿದೆ ಎಂದು ಜೆ. ರಾಜು ನೆನಪಿಸಿದ್ದಾರೆ.

ಬದಲಾವಣೆಯ ಗಾಳಿ: ಸಾಮಾಜಿಕ ನ್ಯಾಯವೇ ಗೆಲುವಿನ ಸೂತ್ರ ರಾಜಕೀಯದಲ್ಲಿ ಯಜಮಾನಿಕೆ ಸಂಸ್ಕೃತಿ ದೂರವಾಗಿ, ಎಲ್ಲ ವರ್ಗದವರಿಗೂ ಸಮಾನ ಪ್ರಾತಿನಿಧ್ಯ ಸಿಕ್ಕಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಈಡೇರಲು ಸಾಧ್ಯ. ಹಿರಿಯೂರು ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಬೇಕಿದೆ. ಕುಂಚಿಟಿಗ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡುವ ಮೂಲಕ ವರಿಷ್ಠರು ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳಬೇಕು. ಆ ಮೂಲಕ ತುಳಿತಕ್ಕೊಳಗಾದ ಸಮುದಾಯಕ್ಕೆ ರಾಜಕೀಯ ಶಕ್ತಿ ತುಂಬಿ, ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಬೇಕಿದೆ.

"ಕುಂಚಿಟಿಗ ಸಮುದಾಯ ಇಷ್ಟು ದಿನ ರಾಜಕೀಯ ಸೌಲಭ್ಯಗಳಿಂದ ವಂಚಿತವಾಗಿರಬಹುದು. ಆದರೆ ಈಗ ಕಾಲ ಬದಲಾಗಿದೆ. ಹೈಕಮಾಂಡ್ ಈ ಬಾರಿ ತಾರತಮ್ಯ ಎಸಗದೆ, ಈ ಹಿಂದುಳಿದ ಜಾತಿಗೆ ಮನ್ನಣೆ ನೀಡಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕು."
ಬೇತೂರು ಪಾಳ್ಯ ಜೆ. ರಾಜು
, ಮುಖಂಡರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಾಲೂಕು ಜೆಡಿಎಸ್ ವತಿಯಿಂದ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಹುಟ್ಟುಹಬ್ಬ ಆಚರಣೆನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಪೆಟ್ರೋಲ್, ಡೀಸೆಲ್, ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆನಗರಸಭೆ ವತಿಯಿಂದ ಕಸ ಹಾಕಬೇಡಿ ಸ್ವಚ್ಛತೆಯಿಂದ ಕಾಪಾಡಿ-ಜಾಗೃತಿ ಆಂದೋಲನಇತಿಹಾಸ ಓದುವುದರ ಜೊತೆಗೆ ಹೊರಗೆ ಬಂದು ಇತಿಹಾಸ ತಿಳಿದುಕೊಳ್ಳಬೇಕುಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹುಟ್ಟುಹಬ್ಬ ಆಚರಣೆ  ಜೆಡಿಎಸ್‌ನಲ್ಲಿ ಸ್ಥಳೀಯ ಅಸ್ಮಿತೆಯ ಕೂಗು; ಟಿಕೆಟ್ ಆಕಾಂಕ್ಷಿ ಶ್ರವಣಗೆರೆ ಶಿವಪ್ರಸಾದ್ ಗೌಡ ಪ್ರತಿಪಾದನೆಕಾಡುಗೊಲ್ಲ ಜಾತಿಗೆ ಹಿರಿಯೂರು ಉಪ ಚುನಾವಣೆಗೆ ಟಿಕೆಟ್ ನೀಡಲು ಹಕ್ಕೊತ್ತಾಯಹಿರಿಯೂರು ಉಪ ಚುನಾವಣೆ; ಕುಂಚಿಟಿಗ ಜಾತಿಗೆ ರಾಜಕೀಯ ನ್ಯಾಯ ನೀಡಲು ಹಕ್ಕೊತ್ತಾಯಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರತಂದೆಯ ಸೆಲ್ಫಿ ಹುಚ್ಚಾಟಕ್ಕೆ 4 ವರ್ಷದ ಕಂದಮ್ಮ ಬಲಿ