Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ದಾಳಿಂಬೆ ಬೆಳೆ ರೋಗ ನಿರ್ವಹಣೆಗೆ ಜೈವಿಕ ಶಿಲೀಂಧ್ರನಾಶಕ ಬಳಸಿ: ಡಾ. ಗುರುದೇವಿ ವಿ. ನವಲಿ

ಚಂದ್ರವಳ್ಳಿ ಯೂಸ್, ಹರಿಯಬ್ಬೆ:
ದಾಳಿಂಬೆ ಬೆಳೆಯಲ್ಲಿ ಕಂಡುಬರುವ ಪ್ರಮುಖ ರೋಗಗಳ ಸಮಗ್ರ ನಿರ್ವಹಣೆಗೆ ಜೈವಿಕ ಶಿಲೀಂಧ್ರನಾಶಕಗಳ ಬಳಕೆ ಅತ್ಯಂತ ಅಗತ್ಯ ಎಂದು ರೋಗಶಾಸ್ತ್ರ ತಜ್ಞರಾದ ಡಾ. ಗುರುದೇವಿ ವಿ. ನವಲಿ ಅಭಿಪ್ರಾಯಪಟ್ಟರು.

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಇರುವಕ್ಕಿ) ಹಾಗೂ ಹಿರಿಯೂರಿನ ತೋಟಗಾರಿಕೆ ಮಹಾವಿದ್ಯಾಲಯದ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ, ಧರ್ಮಪುರ ಸಮೀಪದ ಹರಿಯಬ್ಬೆ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ "ದಾಳಿಂಬೆ ಬೆಳೆಯ ರೋಗ ನಿರ್ವಹಣೆ" ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ರೋಗ ಲಕ್ಷಣಗಳು ಹಾಗೂ ವೈಜ್ಞಾನಿಕ ನಿರ್ವಹಣೆ:
ದಾಳಿಂಬೆ ಬೆಳೆಯನ್ನು ಕಾಡುವ ಪ್ರಮುಖ ರೋಗಗಳಾದ ಅಂಗಮಾರಿ (ಬ್ಯಾಕ್ಟೀರಿಯಲ್ ಬ್ಲೈಟ್), ಸೊರಗು ರೋಗ (ವಿಲ್ಟ್) ಹಾಗೂ ಆಂಥ್ರಾಕ್ನೋಸ್ ರೋಗಗಳ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ಕ್ರಮಗಳ ಕುರಿತು ಡಾ. ಗುರುದೇವಿ ಅವರು ರೈತರಿಗೆ ವಿಸ್ತೃತ ಮಾಹಿತಿ ನೀಡಿದರು. "ರೋಗ ಹರಡುವಿಕೆಯನ್ನು ತಡೆಯಲು ಟ್ರೈಕೋಡರ್ಮಾ, ಸ್ಯೂಡೋಮೊನಾಸ್ ಹಾಗೂ ಜೈವಿಕ ಗೊಬ್ಬರಗಳನ್ನು ವೈಜ್ಞಾನಿಕವಾಗಿ ಸೂಕ್ತ ಪ್ರಮಾಣದಲ್ಲಿ ಬಳಸಬೇಕು. ಅಗತ್ಯಕ್ಕೆ ತಕ್ಕಂತೆ ಮಾತ್ರ ರಾಸಾಯನಿಕಗಳ ಬಳಕೆ ಮಾಡುವುದು ಸೂಕ್ತ" ಎಂದು ಅವರು ಮಾರ್ಗದರ್ಶನ ನೀಡಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಅರ್ಥಶಾಸ್ತ್ರ ತಜ್ಞರಾದ ಐಶ್ವರ್ಯಾ ಅವರು, ಕೃಷಿ ವೆಚ್ಚ ತಗ್ಗಿಸುವಿಕೆ ಮತ್ತು ಕೃಷಿ ಆರ್ಥಿಕ ನಿರ್ವಹಣೆ ಕುರಿತು ರೈತರಿಗೆ ಉಪಯುಕ್ತ ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಕಾರ್ಯಕ್ರಮದ ವಿದ್ಯಾರ್ಥಿಗಳಾದ ಮಹಲಿಂಗಪ್ಪ. ಡಿ.ಎಲ್, ಅಭಿಷೇಕ್. ಬಿ.ಎಸ್, ಶರಣ್. ಎಂ.ಎಸ್, ಶರತ್. ಎಂ, ಮರಿಯಪ್ಪ ಎಚ್. ಆದಿನ್, ತಿರುಮಲ ರೆಡ್ಡಿ ಎಸ್.ಎನ್, ಹಾಗೂ ಸಿದ್ದು. ಎಸ್ ಸೇರಿದಂತೆ ಹರಿಯಬ್ಬೆ ಗ್ರಾಮದ ಹಲವಾರು ರೈತ ಬಾಂಧವರು ಸಕ್ರಿಯವಾಗಿ ಭಾಗವಹಿಸಿದ್ದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆರ್‌ಬಿಎನ್‌ ಶಾಲೆಯಲ್ಲಿ ಸಂಭ್ರಮದ ಶಿಕ್ಷಕರ ದಿನಾಚರಣೆ: ಗುರುವಂದನೆ ಸಲ್ಲಿಕೆನನ್ನ ಶಿಕ್ಷಕ ಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಚಿತ್ರದುರ್ಗದ ಪಾಲಿಗೆ ‘ಭಾಗೀರಥಿ’ಯಾದ ಭದ್ರಾ ಮೇಲ್ದಂಡೆ: ಪ್ರಾಯೋಗಿಕ ನೀರು ಹರಿವಿಗೆ ಅಧಿಕೃತ ಚಾಲನೆ!ಚಿನ್ನದ ಗಣಿ ಮಣ್ಣಿನಿಂದ ಕನ್ನಡದ ಮಡಿಲಿಗೆ—ಡಾ.ಮಮತಾ ದಾಳಿಂಬೆ ಬೆಳೆ ರೋಗ ನಿರ್ವಹಣೆಗೆ ಜೈವಿಕ ಶಿಲೀಂಧ್ರನಾಶಕ ಬಳಸಿ: ಡಾ. ಗುರುದೇವಿ ವಿ. ನವಲಿಭಾರತವೆಂದರೆ ಶ್ರೀರಾಮ ಮತ್ತು ಶ್ರೀ ಕೃಷ್ಣ ಅವತಾರದ ದಿವ್ಯ ಸಂದೇಶಗಳ ಭಂಡಾರವೇ ಆಗಿದೆ ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ತರುವ ಸಾಮರ್ಥ್ಯವಿದೆ: ಬಿಜೆಪಿಗೆ ಡಿ.ಕೆ. ಶಿವಕುಮಾರ್ ತಿರುಗೇಟು  ಭೀಮನಬಂಡೆ ಯಾಜ್ಞವಲ್ಕ್ಯ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ ಹಾಗೂ ಜಿಲ್ಲಾ ಮಟ್ಟಕ್ಕೆ ಆಯ್ಕೆಹಿರಿಯೂರು ಮತ್ತು ಚಳ್ಳಕೆರೆ ನಗರಸಭೆಗಳಿಗೂ ಪ್ರತ್ಯೇಕ 'ನಗರ ಯೋಜನಾ ಪ್ರಾಧಿಕಾರ' ರಚನೆಯಾಗಲಿ 3,039 ಫಲಾನುಭವಿಗಳಿಗೆ ಹೈನುರಾಸು ನೆರವು – ಆಕ್ಷೇಪಣೆಗೆ ಸೆ. 15 ಕೊನೆಯ ದಿನ