i
ಸಚಿವ ಬಿ.ಶ್ರೀರಾಮುಲುಗೆ ಸೋಲು ಭೀತಿ, ಕ್ಷೇತ್ರ ಹುಡುಕಾಟದಲ್ಲಿ ಸಚಿವರು-ಯೋಗೇಶ್ ಬಾಬು ವ್ಯಂಗ್ಯ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲುಗೆ ಸೋಲಿನ ಭೀತಿ ಕಾಡುತ್ತಿದ್ದು ಬದಲಿ ಕ್ಷೇತ್ರದ ಹುಡುಕಾಟದಲ್ಲಿದ್ದಾರೆಂದು ಕಾಂಗ್ರೆಸ್ ಮುಖಂಡ ಡಾ.ಯೋಗೇಶ್ ಬಾಬು ವ್ಯಂಗ್ಯವಾಡಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಗೆದ್ದು ಸಚಿವರಾದ ಶ್ರೀರಾಮುಲು ಅವರನ್ನು ಮತದಾರರು ಸೋಲಿಸಲಿದ್ದಾರೆ. ಈ ಭೀತಿಯಿಂದಲೇ ಅವರು ಅನ್ಯ ಕ್ಷೇತ್ರದತ್ತ ಮುಖ ಮಾಡಿ ಹುಡುಕಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಚಿವ ಶ್ರೀರಾಮುಲು ಹಿಂದುಳಿದ ಮೊಳಕಾಲ್ಮೂರು ಕ್ಷೇತ್ರದ ಅಭಿವೃದ್ಧಿಯ ಕಡೆಗಣಿಸಿದ್ದಾರೆ. ಹಲವು ಹಗರಣಗಳನ್ನು ಮಾಡಿದ್ದು ಮತದಾರರು ಎಲ್ಲವನ್ನು ಗಮನಿಸುತ್ತಿದ್ದಾರೆ. ಸಚಿವರಿಗೆ ಮತದಾರರು ಬುದ್ದಿ ಕಲಿಸಲು ಕಾಯುತ್ತಿದ್ದಾರೆಂದು ಹೇಳಿದರು.