i
ನಂಜಾವಧೂತ ಸ್ವಾಮಿ ವಿರುದ್ಧ ಸ್ವಾಭಿಮಾನಿ ಕುಂಚಿಟಿಗರು ದಂಗೆ ಏಳಬೇಕಾಗಿದೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸ್ವಾಭಿಮಾನಿ ಕುಂಚಿಟಿಗರೆ ಏಳಿ ಎದ್ದೇಳಿ…..!!!
ಇಷ್ಟೆಲ್ಲಾ ಅದ್ರೊ ನಾವು ಕೈ ಕಟ್ಟಿ ಕುಳಿತುಕೊಂಡ್ರೆ ಮುಂದಿನ ಪೀಳಿಗೆಗೆ ಕುಂಚಿಟಿಗ ಜನಾಂಗ ಎಲ್ಲಿ ಇದೆ ಅಂತ ಸೂರ್ಯನ ಬೆಳಕಿನಲ್ಲಿ ಟಾರ್ಚ್ ಹಾಕ್ಕೊಂಡು ಹುಡಿಕ್ಕಿದ್ರೋ ಸಿಗೋಲ್ಲ ಎಂದು ಕಂಬದಹಳ್ಳಿ ಕೆ ಟಿ ಶ್ರೀನಿವಾಸ್ ಜಾನಕಲ್(ಕೋಡಿಹಳ್ಳಿ) ಬೇಸರ ವ್ಯಕ್ತ ಪಡಿಸಿದ್ದಾರೆ. ಅವರು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿ, ಗುರುಗುಂಡ ಶ್ರೀ ನಂಜಾವಧೂತ ಸ್ವಾಮಿಗಳು ಊರು ಊರಲ್ಲಿ ಸಮಾವೇಶ ಮಾಡಿಸಿ ಕುಂಚಿಟಿಗ ಜಾತಿ ಒಕ್ಕಲಿಗ ಜಾತಿಯ ಉಪ ಜಾತಿ ಅಂತ ಬೊಬ್ಬೆ ಹೊಡೆಯುತ್ತಿದ್ರೋ ನಾವುಗಳು ಬಾಯಿ ಮುಚ್ಕೊಂಡು ಇದ್ದೀವಿ ಅಂದ್ರೆ ನಾವುಗಳು ಎಂಥ ನಾಮರ್ದರು ಅಲ್ವಾ…..???
ಇದುವರೆಗೂ ಆಗಿದ್ದು ಆಯಿತ್ತು ಇನ್ನಾದ್ರೂ ಈ ಅವಿವೇಕಿಗಳ ಬಾಯಿಗೆ ಬೀಗ ಹಾಕಿಲ್ಲ ಅಂದ್ರೆ ಮುಂದೆ ಹೇಳೋಕ್ಕೆ ಕುಂಚಿಟಿಗ ಜಾತಿ ಹೆಸರು ಇರೋಲ್ಲ ನಾವು ಎಷ್ಟೇ ಪ್ರಯತ್ನ ಪಟ್ಟರು ಜನರನ್ನ ಈಗಾಗಲೇ ರಾಜಕಾರಣಿಗಳು ಹಾಗೆ ಸ್ವಾಮೀಜಿಗಳು ಒಕ್ಕಲಿಗ ಅಂತ ಬಿಂಬಿಸುವ ಕಾರ್ಯ ಸಂಪೂರ್ಣವಾಗಿ ನಡೆದು ಹೋಗಿದೆ. ನಿಜ್ವಾಗ್ಲೂ ಕುಂಚಿಟಿಗ ಜನಾಂಗದ ಮೇಲೆ ಕಾಳಜಿ ಇದ್ರೆ ಯಾವನೋ ಒಕ್ಕಲಿಗ ಅಂತ ಹೇಳಿಕೊಂಡು ಈಗಾಗಲೇ ಕುಂಚಿಟಿಗ ಜನಾಂಗವನ್ನ ದಾರಿ ತಪ್ಪಿಸಿದ್ದಾರೆ ಅವ್ರು ಮನೆ ಮಠಗಳ ಮುಂದೆ ನಾವು ಒಕ್ಕಲಿಗರು ಅಲ್ಲ ಕುಂಚಿಟಿಗರು ಕುಂಚಿಟಿಗ ಒಕ್ಕಲಿಗ ಜಾತಿ ಸರ್ಕಾರ ಪಟ್ಟಿಯಲ್ಲಿ ಇದ್ದೀಯ ಎಂದು ಪ್ರಶ್ನಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ಬನ್ನಿ ನಮ್ಮ ಜಾತಿ ಸರ್ಟಿಫಿಕೇಟ್ ಅನ್ನೋ ಒಕ್ಕಲಿಗ ಅಂತ ಮಾಡಿಸಿ ಕೊಡಿ ಎಂದು ಘೋಷಣೆ ಕೂಗೋಣ ಸುಮ್ನೆ ದಿನ ಹಳ್ಳಿ ಹಳ್ಳಿಗಳಿಗೆ ಹೋಗಿ ಏನಕ್ಕೆ ಗಂಟಲು ಹರಿಯುವ ಹಾಗೆ ಭಾಷಣ ಮಾಡಿದ್ದಾರೆ ಯಾವ ಪ್ರಯೋಜನವಿಲ್ಲಾ ಇಂತಹ ಸಾವಿರ ಸಭೆ ಮಾಡಿದ್ರೋ ಯಾವ ಪ್ರಯೋಜನವಿಲ್ಲಾ ರಾಜಕೀಯ ಬೆಳೆ ಕಾಳುಗಳನ್ನ ಬೆಯಿಸಿ ಕೊಳ್ಳುತ್ತಿರುವ ರಾಜಕಾರಣಿಗಳ ಹಾಗು ಜನಾಂಗ ಹೆಸರಲ್ಲಿ ಸರ್ಕಾರ ಅನುದಾನಕಾಗಿ ಏನೆಲ್ಲಾ ಡ್ರಾಮಾ ಮಾಡುತ್ತಿರುವ ದಾಗಲ್ಬಾಜಿ ಮಠಗಳ ಮುಂದೆ ಧರಣಿ ಮಾಡೋಣ ಎಂದು ಕರೆ ನೀಡಿದ್ದಾರೆ.
ಸ್ವಾತಂತ್ರ ಕುಂಚಿಟಿಗ ಜಾತಿಯನ್ನ ಇನ್ನೊಂದು ಜಾತಿಗೆ ಅಡವಿಟ್ಟ ಅವಿವೇಕಿಗಳ ವಿರುದ್ಧ ನೇರವಾಗಿ ಸಮರ ಪ್ರಾರಂಭ ಮಾಡೋಣ…. ಯಾವ ಊರಲ್ಲಿ ಕುಂಚಿಟಿಗ ಒಕ್ಕಲಿಗ ಅಂತ ಜಾತಿ ಸರ್ಟಿಫಿಕೇಟ್ ಕೊಡುತ್ತಾರೆ, ಸರ್ಕಾರ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಈ ಜಾತಿಯನ್ನ ಜಾತಿ ಪಟ್ಟಿಯಲ್ಲಿ ಸೇರಿಸಿದೆಯಾ..???, ಕುಂಚಿಟಿಗ ಜಾತಿ ಉಳಿವಿಗಾಗಿ ಸಮರಕ್ಕೆ ಸಿದ್ದರಾಗಿ…….!!! ಇವ್ರು ಸ್ವಾರ್ಥಕ್ಕಾಗಿ ಕುಂಚಿಟಿಗ ಜನಾಂಗವನ್ನ ಏಕೆ ಹರಕೆ ಕುರಿ ಮಾಡುತ್ತಾರೆ…..??? ನಾನು ಸಮರಕ್ಕೆ ಸಿದ್ದ ಯಾರು ಯಾರು ಸಿದ್ದ ನಿಮ್ಮ ಹೆಸರು, ಊರು, ಕುಲ, ಮೊಬೈಲ್ ನಂಬರ್ ಎಲ್ಲ ವಿವರಗಳನ್ನ ಕೊಡಿ. ಇದುವರೆಗೂ ಸಹಿಸಿಕೊಂಡು ಇದ್ದು ಆಯಿತ್ತು ಇನ್ನೂ ಏನು ಇದ್ರೋ ಯುದ್ಧ ಒಂದೇ ದಾರಿ ಇಲ್ಲಾಂದ್ರೆ ಈ ಅವಿವೇಕಿಗಳು ಕುಂಚಿಟಿಗ ಜಾತಿಯನ್ನ ಸಂಪೂರ್ಣವಾಗಿ ಬುಡ ಸಮೇತವಾಗಿ ಕಿತ್ತು ಹಾಕ್ಕೋತ್ತಾರೆಂದು ಕಂಬದಹಳ್ಳಿ ಕೆ ಟಿ ಶ್ರೀನಿವಾಸ್ ಜಾನಕಲ್(ಕೋಡಿಹಳ್ಳಿ) ಗುಡುಗಿದ್ದಾರೆ.
ನನ್ನ ವಿಳಾಸ-
ಕಂಬದಹಳ್ಳಿ ಕೆ ಟಿ ಶ್ರೀನಿವಾಸ್ ಜಾನಕಲ್(ಕೋಡಿಹಳ್ಳಿ)
ವಾಣಿವಿಲಾಸ ಪುರ ಪೋಸ್ಟ್
ಹಿರಿಯೂರು ತಾಲ್ಲೂಕು
ಮೊಬೈಲ್ ನಂಬರ್ 7899220200