i
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ವಿ.ಗೀತಾ ಶಾಂತ ಕುಮಾರ್ ನೇಮಕ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಪ್ರದೇಶ ಜಾತ್ಯಾತೀತ ಜನತಾದಳ ಮಹಿಳಾ ವಿಭಾಗಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನಗರದ
ಬ್ಯಾಂಕ್ ಕಾಲೋನಿ ನಿವಾಸಿ ವಿ.ಗೀತಾ ಶಾಂತಕುಮಾರ್ ಇವರನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರವರ ಶಿಫಾರಸ್ಸಿನ
ಮೇರೆಗೆ ನೇಮಕ ಮಾಡಿರುವುದಾಗಿ ಜೆಡಿಎಸ್ ರಾಜ್ಯ ಮಹಿಳಾ ವಿಭಾಗದ ಪೋಷಕರಾದ ಲೀಲಾದೇವಿ ಆರ್.ಪ್ರಸಾದ್ ತಿಳಿಸಿದ್ದಾರೆ.
ಪಕ್ಷದ ತತ್ವ ಹಾಗೂ ಸಿದ್ದಾಂತಗಳಿಗೆ ಬದ್ದರಾಗಿ ರಾಜ್ಯಾದ್ಯಂತ ಸಂಚರಿಸಿ ಮಹಿಳಾ ವಿಭಾಗವನ್ನು ಸಂಘಟಿಸುವಂತೆ ವಿ.ಗೀತಾ ಇವರಿಗೆ ಲೀಲಾದೇವಿ ಆರ್.ಪ್ರಸಾದ್ ಸೂಚಿಸಿದ್ದಾರೆ.