i
ರಾತ್ರೋರಾತ್ರಿ ರಸ್ತೆ ಗುಂಡಿ ಮುಚ್ಚುವ ಪ್ರಯತ್ನ, ಹಿರಿಯೂರು ಒಂದು ರೀತಿ ಬಿಬಿಎಂಪಿ ಆಗಿದೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದಾಗ ಮಾತ್ರ ರಸ್ತೆಗಳ ಗುಂಡಿ ಮುಚ್ಚುವಂತೆ ಹಿರಿಯೂರು ನಗರದಲ್ಲೂ ಅಂತದ್ದೇ ಕಾರ್ಯ ಮಾಡಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವೆಂಬರ್-22 ರಂದು ಹಿರಿಯೂರು ನಗರದ ಕಡ್ಲೆಕಾಯಿ ಮಂಡಿಯ ಮೈದಾನದಲ್ಲಿ ಆಯೋಜಿಸಿರುವ ಜನಸಂಕಸ್ಪ ಯಾತ್ರೆ ಕಾರ್ಯಕ್ರಮದ ಅಂಗವಾಗಿ ಸದ್ದುಗದ್ದಲವಿಲ್ಲದೇ ಸಂಬಂಧ ಪಟ್ಟ ಅಧಿಕಾರಿಗಳು ರಾತ್ರೋರಾತ್ರಿ ಹಿರಿಯೂರು ನಗರದ ಮುಖ್ಯರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿರುವ ಪೋಟೋ ಈಗ ವೈರಲ್ ಆಗಿದೆ.
ಹಾಲಿ ಶಾಸಕರಿಗೆ ಹಿರಿಯೂರಿನ ಸಾರ್ವಜನಿಕರ ಮೇಲೆ ಕಿಂಚಿತ್ತು ಕಾಳಜಿ ಇಲ್ಲದೆ ವರ್ತಿಸುತ್ತಿರುವುದು ಖಂಡನೀಯ ರಸ್ತೆಗಳೆಲ್ಲ ಗುಂಡಿ ಬಿದ್ದು ಹಲವಾರು ಸಾವು ನೋವುಗಳು ಸಂಭವಿಸಿದ್ದರೂ ಗಮನ ನೀಡದ ಅವರು ಈಗ ಮುಖ್ಯಮಂತ್ರಿಗಳ ಕಾರ್ಯಕ್ಕಾಗಿ ಗುಂಡಿ ಮುಚ್ಚಿಸುವ ಕಾರ್ಯ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಹಿರಿಯೂರು ನಗರದ ತಾಲೂಕು ಕಚೇರಿ ಸಮೀಪ ಸೇತುವೆ ಬಳಿ ಸಾಕಷ್ಟು ಗುಂಡಿಗಳು ಬಿದ್ದಿದ್ದವು. ಆ ಜಾಗದಲ್ಲಿ ರಸ್ತೆಯಲ್ಲಿ ಗುಂಡಿಗಳಿಂದಾಗಿ ಒಂದು ಬೈಕಿಗೆ ಬೆಂಕಿ ಬಿದ್ದುತ್ತು. ಇದೇ ಜಾಗದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿ ಜನರು ಕೈ ಕಾಲು ಮುರಿದುಕೊಂಡಿದ್ದರೂ ಶಾಸಕರು ಮಾತ್ರ ಆ ರಸ್ತೆ ದುರಸ್ತಿಯತ್ತ ಗಮನ ನೀಡಿರಲಿಲ್ಲ.
ಈಗ ಹೊಸದುರ್ಗ ಶಾಸಕರು ನಾನೇ ಅಧ್ಯಕ್ಷತೆ ವಹಿಸಬೇಕು ಎಂದು ಕ್ಯಾತೇ ತೆಗೆದ ನಂತರ ಇಡೀ ಕಾರ್ಯಕ್ರಮವನ್ನು ಹಿರಿಯೂರು ನಗರದ ಕಡ್ಲೆಕಾಯಿ ಮಂಡಿ ಮೈದಾನಕ್ಕೆ ಶಿಫ್ಟ್ ಮಾಡಲಾಗಿದ್ದರ ಫಲವಾಗಿ ಈಗ ರಸ್ತೆ ಗುಂಡಿ ಮುಚ್ಚಲಾಗುತ್ತಿದೆ. ಇದಲ್ಲದೆ ತಾಲೂಕಿನ ಸಾಕಷ್ಟು ಕಡೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಕಳೆದೆರಡು ತಿಂಗಳಿಂದೆ ಹರಿಯಬ್ಬೆ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿಗಳು ಆಗಮಿಸಿದಾಗ ಮಾಡಿದ್ದ ರಸ್ತೆ ವಾರದಲ್ಲೇ ಕಿತ್ತು ಹೋಗಿತ್ತು. ಇಡೀ ತಾಲೂಕಿನಾದ್ಯಂತ ಕಳಪೆ ಕಾಮಗಾರಿ ನಡೆಯುತ್ತಿದೆ. ಆದರೂ ಶಾಸಕರು ಇದರ ಬಗ್ಗೆ ಗಮನ ನೀಡುತ್ತಿಲ್ಲವೆಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದರು.
ಹಿರಿಯೂರು ತಾಲೂಕಿನ ಜನರ ತಲೆಕಾಯದೆ ವಿದೇಶ ಪ್ರವಾಸ ಕೈಗೊಂಡು ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ನಗರಕ್ಕೆ ಆಗಮಿಸುವುದರ ಹಿನ್ನೆಲೆ ರಸ್ತೆಗಳನ್ನು ಅಲಂಕಾರ ಗೊಳಿಸುತ್ತಿರುವುದು ಎಷ್ಟು ಸರಿ ಎಂದು ಹಿರಿಯೂರು ಯುವ ಕಾಂಗ್ರೆಸ್ ಅಧ್ಯಕ್ಷ ಗುರುಪ್ರಸಾದ್ ವಾಗ್ದಾಳಿ ಮಾಡಿದ್ದಾರೆ.