i
ಫಸಲ್ ಭೀಮಾ ಯೋಜನೆ : 374 ಪ್ರಸ್ತಾವನೆಗಳು ತಿರಸ್ಕೃತ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2020-21 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ನೋಂದಣಿ ಮಾಡಿಕೊಂಡ ರೈತರ ಪೈಕಿ, ಮುಂಗಾರು ಹಂಗಾಮಿನ 310 ಮತ್ತು ಹಿಂಗಾರು ಹಂಗಾಮಿ 64 ಸೇರಿ ಒಟ್ಟು 374 ಬೆಳೆ ವಿಮೆ ನೊಂದಣಿ ಪ್ರಸ್ತಾವನೆಗಳನ್ನು, ಬೆಳೆ ಸಮೀಕ್ಷೆ ದತ್ತಾಂಶಗಳೊಂದಿಗೆ ತಾಳೆಯಾಗದ ಕಾರಣ ತಿರಸ್ಕøತಗೊಳಿಸಲಾಗಿದೆ. ತಿರಸ್ಕೃತಗೊಂಡ ರೈತರ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯತಿ ಸೂಚನಾ ಫಲಗಳಲ್ಲಿ ಪ್ರಕಟಿಸಲಾಗಿದೆ. ಡಿ.10 ರವರಗೆ ಆಕ್ಷೇಪಣೆ ಸಲ್ಲಿಸಲು ಕಾಲವಕಾಶವನ್ನು ನೀಡಲಾಗಿದೆ. ಆಕ್ಷೇಪಣಾ ಅರ್ಜಿಯೊಂದಿಗೆ ರೈತರು 2020-21ನೇ ಸಾಲಿನ ವಿಮೆಗೆ ನೋಂದಾಯಿಸಿದ ಬೆಳೆ ನಮೂದಾಗಿರುವ ಪಹಣಿ, ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಲ್ಲಿ ರಶೀದಿ, ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಬೆಳೆ ಮಾರಾಟ ಮಾಡಿದ್ದಲ್ಲಿ ಸಂಬಂದಪಟ್ಟ ಸದರಿ ದಾಖಲೆಗಳನ್ನು ಸಲ್ಲಿಸಬೇಕು. ಡಿ.10 ರ ಓಳಗಾಗಿ ಯಾವುದೇ ಆಕ್ಷೇಪಣೆ ಸಲ್ಲಿದೇ ಇದ್ದರೆ ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗುವುದು ಎಂದು ಚಿತ್ರದುರ್ಗ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.