i
ಕಾಡುಗೊಲ್ಲರನ್ನು ಕಡೆಗಣಿಸಿ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಶಾಸಕಿ ಪೂರ್ಣಿಮಾ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಾಡುಗೊಲ್ಲರನ್ನು ಕಡೆಗಣಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಕಳೆದ ನಾಲ್ಕುವರೆ ವರ್ಷದಿಂದ ಕಾಡುಗೊಲ್ಲರ ಬಗ್ಗೆ ಮಾತನಾಡದ ಶಾಸಕಿ ಪೂರ್ಣಿಮಾ ಅವರು ಕೇವಲ ಚುನಾವಣೆ ನಾಲ್ಕು ತಿಂಗಳು ಇರುವಂತ ಸಂದರ್ಭದಲ್ಲಿ ಕಾಡುಗೊಲ್ಲರನ್ನು ಮೆಚ್ಚಿಸಲು ಮೈಕಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸುವಂತೆ ಮನವಿ ಮಾಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಕಾಡುಗೊಲ್ಲ ಸಮಾಜದ ಮುಖಂಡ ಗೋಪಿ ಯಾದವ್ ಬೇಸರ ವ್ಯಕ್ತ ಪಡಿಸಿದ್ದಾರೆ.
ನಾಲ್ಕುವರೆ ವರ್ಷ ಕಾಡುಗೊಲ್ಲರು ರಾಜ್ಯಾದ್ಯಂತ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ ಅಂದು ಮಾತನಾಡದ ಶಾಸಕಿ ಪೂರ್ಣಿಮಾ ರವರು ಇಂದು ಓಟಿಗಾಗಿ ಮಾತನಾಡುತ್ತಿದ್ದಾರೆ ಪೂರ್ಣಿಮಾ ಅವರ ಪತಿ ಡಿಟಿ ಶ್ರೀನಿವಾಸರವರು ಕಾಡುಗೊಲ್ಲರು ಎಲ್ಲಿದ್ದಾರೆ ಯಾರಾದರೂ ಕಾಡುಗೊಲ್ಲ ಸರ್ಟಿಫಿಕೇಟ್ ಪಡೆದಿದ್ದಾರೆ ನಿಮ್ಮ ತಂದೆ ತಾಯಿ ಕಾಡುಗೊಲ್ಲ ಸರ್ಟಿಫಿಕೇಟ್ ಇದೆಯೇ ಎಂದು ಪ್ರಶ್ನೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಕಳೆದ ಎರಡುವರೆ ವರ್ಷದ ಹಿಂದೆ ಶಿರಾ ಉಪಚುನಾವಣೆಯಲ್ಲಿ ಘೋಷಣೆ ಮಾಡಿದ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನ ಕಾಡುಗೊಲ್ಲರು ಹೈಕೋರ್ಟ್ ಮುಖಾಂತರ ಪಡೆದುಕೊಳ್ಳಬೇಕಾಯಿತು.
ಆದರೂ ಸಹ ಇದುವರೆಗೂ ಅಧ್ಯಕ್ಷರನ್ನು ಆಯ್ಕೆ ಮಾಡಲಿಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಹತ್ತಿರ ಅಧ್ಯಕ್ಷರನ್ನು ಘೋಷಣೆ ಮಾಡುವ ಅಧಿಕಾರವಿದ್ದು ಶಾಸಕಿ ಪೂರ್ಣಿಮಾ ರವರಿಗೆ ಹೆದರಿ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು ಇದುವರೆಗೂ ಘೋಷಣೆ ಮಾಡಿಲ್ಲ. ಲೋಕಸಭಾ ಸದಸ್ಯರಾದ ನಾರಾಯಣಸ್ವಾಮಿ ಅವರು ಕಾಡುಗೊಲ್ಲರ ಪರವಾಗಿ ಪ್ರತ್ಯೇಕವಾಗಿ ಕಾಡುಗೊಲ್ಲ ಯುವಕನನ್ನು ಕಾಡುಗೊಲ್ಲರಿಗೆ ಎಸ್ಟಿ ಮಾಡುವುದಕ್ಕಾಗಿ ನಿಯೋಜಿಸಿದ್ದಾರೆ. ಆದರೆ ನೆನ್ನೆ ಹಿರಿಯೂರಿಗೆ ಮುಖ್ಯಮಂತ್ರಿಗಳು ಬಂದಿದ್ದರೂ ಸಹ ಬಿಜೆಪಿಯಲ್ಲಿರುವ ನಮ್ಮ ಕಾಡುಗೊಲ್ಲ ಮುಖಂಡರುಗಳು ನಿಗಮದ ಅಧ್ಯಕ್ಷರನ್ನು ಘೋಷಣೆ ಮಾಡುವಂತೆ ಮನವಿ ಸಲ್ಲಿಸಬಹುದಾಗಿತ್ತು ಎಂದು ಕಾಡುಗೊಲ್ಲ ಮುಖಂಡ ಗೋಪಿಯಾದವ್ ಅಬಿಪ್ರಾಯ ವ್ಯಕ್ತಪಡಿಸಿದ್ದಾರೆ.