i
ಪುನೀತ್ ರಾಜ್ ವಿಚಾರ ನೆನೆದು ಭಾವುಕರಾದ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಮಂಗಳೂರು ನಗರದ ಪೋಲಿಸ್ ಆಯುಕ್ತ ಎನ್,ಶಶಿಕುಮಾರ್ ಇವರನ್ನು ತುಮಕೂರು ನಗರದ ಹನುಮಂತಪುರ ಬಡಾವಣೆಯಲ್ಲಿರುವ ಕೊಲ್ಲಾಪುರಮ್ಮ ದೇವಸ್ಥಾನದ ಕಾರ್ತೀಕ ಮಾಸದ ಪೂರ್ಣಿಮೆಯ ಪೂಜಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಶಿಕುಮಾರ್ ಅವರು ಪುನೀತ್ ರಾಜ್ ಕುಮಾರ್ ಅವರ ವಿಚಾರಗಳನ್ನು ನೆನೆದು ಭಾವುಕರಾದರು.
ಕಾರ್ಯಕ್ರಮದ ದೊಡ್ಡ ವೇದಿಕೆಯಲ್ಲಿ ಸಂಗೀತದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಜನರ ಅಪೇಕ್ಷೆಯಂತೆ ಪುನಿತ್ ರಾಜ್ ಕುಮಾರ್ ಅವರ ಒಂದು ಚಿತ್ರದ ಗೀತೆಯನ್ನು ಹಾಡಿದ ಶಶಿಕುಮಾರ್ ಅವರ ಈ ಹಾಡಿಗೆ ಜನರಿಂದ ದೊಡ್ಡ ಪ್ರಮಾಣದಲ್ಲಿ ಹರ್ಷೋದ್ಗಾರದ ಚಪ್ಪಾಳೆ ಕೇಳಿಬಂದಿದೆ. ವೇದಿಕೆಯ ಕಾರ್ಯಕ್ರಮ ಮುಗಿದ ತರುವಾಯ ಹನುಮಂತಪುರದಲ್ಲೆ ವಾಸ ಇರುವಂತಹ ಹಿರಿಯೂರು ತಾಲೂಕಿನ ಪಿಟ್ಲಾಲಿ ಗ್ರಾಮದ ಇಂಜಿನಿಯರ್ ಮತ್ತು ಗುತ್ತಿಗೆದಾರರಾದ ಶಿವರಾ ಅವರ ಮನೆಯಲ್ಲಿ ಊಟ ಮುಗಿಸಿಕೊಂಡು ಮಂಗಳೂರು ಕಡೆಗೆ ಶಶಿಕುಮಾರ್ ತೆರಳಿದರು ಎಂದು ರಘುಗೌಡ ಮಾಹಿತಿ ನೀಡಿದ್ದಾರೆ.